ಎಂ ಸ್ಯಾಂಡ್ ಲಿಫ್ಟ್ ಮಾಡುವಾಗ ವಿದ್ಯುತ್ ತಂತಿ ತಗುಲಿ ಟಿಪ್ಪರ್ ಲಾರಿ ಬೆಂಕಿಗಾಹುತಿ – ಕಹಳೆ ನ್ಯೂಸ್
ಚಿಕ್ಕಮಗಳೂರು: ಟಿಪ್ಪರ್ ಲಾರಿಯಿಂದ ಎಂ ಸ್ಯಾಂಡ್ ಲಿಫ್ಟ್ ಮಾಡುವಾಗ ವಿದ್ಯುತ್ ತಂತಿ ತಗುಲಿ ಬೆಂಕಿ ಅವಘಡ ನಡೆದ ಘಟನೆ ಚಿಕ್ಕಮಗಳೂರು ನಗರದ ವಾಜಪೇಯಿ ಬಡಾವಣೆಯಲ್ಲಿ ನಡೆದಿದೆ. ನೂತನವಾಗಿ ನಿರ್ಮಾಣ ವಾಗುತ್ತಿರೋ ಲೇಔಟ್ ಕಾಮಗಾರಿಗೆ ಎಂ ಸ್ಯಾಂಡ್ ತಂದಿದ್ದ ಟಿಪ್ಪರ್ ಲಾರಿ ಎಂ ಸ್ಯಾಂಡ್ ಲಿಫ್ಟ್ ಮಾಡುವಾಗ ವಿದ್ಯುತ್ ತಂತಿ ತಗುಲಿ ಬೆಂಕಿಗಾಹುತಿಯಾಗಿದೆ. ಟಿಪ್ಪರ್ ಲಾರಿ ಚಾಲಕ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ....
