Tuesday, April 28, 2026

archivekahale news

ಸುದ್ದಿ

ಬೆಂಗಳೂರುನಿಂದ ಶಾಲಾ ಬಾಲಕ ನಾಪತ್ತೆ, ಗುರುವಾಯನ ಕೆರೆಯಲ್ಲಿ ಬ್ಯಾಗ್ ಪತ್ತೆ – ಕಹಳೆ ನ್ಯೂಸ್

ಬೆಳ್ತಂಗಡಿ, ಜು 26: ಬೆಂಗಳೂರು ಮೂಲದ ಬಾಲಕನೋರ್ವ ಗುರುವಾಯನ ಕೆರೆಯಲ್ಲಿ ನಾಪತ್ತೆಯಾಗಿದ್ದಾನೆ. ಇಲ್ಲಿನ ಸನಿಹದ ಕೆರೆಯಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದ್ದು ಅಗ್ನಿ ಶಾಮಕ ದಳದವರು ಬುಧವಾರ ಸಂಜೆ ಶೋಧ ಕಾರ್ಯಾಚರಣೆ ನಡೆಸಿದರು. ಬೆಂಗಳೂರಿನ ಹೂಡಿ ಎಂಬಲ್ಲಿನ ಮುನಿಸ್ವಾಮಿ ಶೆಟ್ಟಿ ಲೇ‌ಔಟ್ ನಿವಾಸಿ ಎನ್.ವಿ. ಪ್ರೇಮ್ ಕುಮಾರ್ ಎಂಬುವರ ಪುತ್ರ ಬೆಂಗಳೂರು ದೂರವಾಣಿ ನಗರದ ಐಟಿ‌ಐ ವಿದ್ಯಾ ಮಂದಿರದ ೯ ನೇ ತರಗತಿ ವಿದ್ಯಾರ್ಥಿ ಯಶ್ವಂತ್ ಸಾಯಿ ಕೆ.ಪಿ ಎಂಬಾತ ಶಾಲೆಗೆ ಹೋಗದೆ...
ಸುದ್ದಿ

Breaking News : ರಾಘವೇಶ್ವರ ಭಾರತೀ ಶ್ರೀಗಳ ಆರೋಗ್ಯದಲ್ಲಿ ವೈಪರೀತ್ಯ ; ” ಗೋಸ್ವರ್ಗ ” ಚಾತುರ್ಮಾಸ್ಯ ಬೆಂಗಳೂರಿಗೆ ಶಿಫ್ಟ್ – ಕಹಳೆ ನ್ಯೂಸ್

ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಾನ್ಕುಳಿ ಶ್ರೀ ರಾಮದೇವ ಮಠದಲ್ಲಿ ತಮ್ಮ 25ನೇ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳ ಬೇಕೆಂದು, ಶ್ರೀ ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಯೋಚಿಸಿದ್ದರು. ಆದರೆ, ಶ್ರೀಗಳು ಕಿಡ್ನಿ ಸ್ಟೋನ್ ನಿಂದ ಬಳಲುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಸಣ್ಣ ಪುಟ್ಟ ಚಿಕಿತ್ಸೆಯ ಅವಶ್ಯಕತೆ ಇರುವದರಿಂದಲೂ, ವಿಶ್ರಾಂತಿಯ ಅಗತ್ಯ ಇರುವದರಿಂದಲೂ ಚಾತುರ್ಮಾಸ್ಯವನ್ನು ಬೆಂಗಳೂರಿನಲ್ಲಿಯೇ ಕೈಗೊಂಡು, ವಿಶ್ರಾಂತಿಯನ್ನೂ ಪಡೆಯು ಉದ್ದೇಶದಿಂದ ನಿರ್ಧರಿಸಲಾಗಿದೆ ಎಂದು ಮಠ ಪತ್ರಿಕಾ...
ಸುದ್ದಿ

ಧರ್ಮಸಾಮ್ರಾಜ್ಯ ಸ್ಥಾಪನೆಗಾಗಿ ಶ್ರೀ ರಾಮ ಕ್ಷೇತ್ರದಲ್ಲಿ ಧರ್ಮಸಂಸದ್‌ – ಕಹಳೆ ನ್ಯೂಸ್

ಬೆಳ್ತಂಗಡಿ : ಮುಂದಿನ ಜನಾಂಗಕ್ಕೆ ಮೌಲ್ಯಯುತ ಬೋಧನೆಯನ್ನು ನೀಡುವ ನಿಟ್ಟಿನಲ್ಲಿ ಮಕ್ಕಳಿಗೆ ಧರ್ಮಶಿಕ್ಷಣ ನೀಡುವುದು ಅಗತ್ಯ. ಇದೇ ಉದ್ದೇಶದಿಂದ ಧರ್ಮಸಾಮ್ರಾಜ್ಯ ಸ್ಥಾಪನೆಗಾಗಿ ಶ್ರೀ ರಾಮ ಕ್ಷೇತ್ರದಲ್ಲಿ ಧರ್ಮಸಂಸದ್‌ ಮೇಳೈಸಲಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಧರ್ಮಸ್ಥಳ ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ಸೆ. 3ರಂದು ನಡೆಯುವ ಧರ್ಮ ಸಂಸದ್‌ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೋಮವಾರ ನಡೆದ ಪೂರ್ವ ಭಾವಿ ಸಭೆಯಲ್ಲಿ...
ಸುದ್ದಿ

Big Breaking News : ಮತ್ತೆ ಮುಖ್ಯಮಂತ್ರಿ ಗಾದಿಗೇರಲು ಬಿ.ಎಸ್. ಯಡಿಯೂರಪ್ಪರಿಂದ ಉಡುಪಿ ಸಮೀಪದ ಗೌಪ್ಯ ಸ್ಥಳದಲ್ಲಿ ಮಹಾಯಾಗ !? – ಕಹಳೆ ನ್ಯೂಸ್

ಮಂಗಳೂರು / ಬೆಂಗಳೂರು : ಅಜ್ಞಾತ ಸ್ಥಳ ಒಂದರಲ್ಲಿ ಬಿಜೆಪಿ ಮುಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೇರಲು ದೇವರ ಮೊರೆ ಹೋಗಿದ್ದಾರೆ. ಪುತ್ತೂರಿನ ಪುರೋಹಿತರಾದ ಶ್ರೀಕೃಷ್ಣ ಉಪಾಧ್ಯಾಯ ಮತ್ತು ಸುಳ್ಯ ಮೂಲದ ಒಬ್ಬ ಪುರೋಹಿತರುಗಳ ನೇತೃತ್ವದಲ್ಲಿ  ಸುಮಾರು ನೂರಕ್ಕೂ ಅಧಿಕ ಪುರೋಹಿತರಿಂದ  ಮಹಾಯಾಗ ಒಂದನ್ನು ನಡೆಸಿದ್ದಾರೆ ಎಂಬ Exclusive ಮಾಹಿತಿ ಈಗ ಕಹಳೆ ನ್ಯೂಸ್ ಗೆ ಲಭಿಸಿದೆ. ಉಡುಪಿ ಜಿಲ್ಲೆಯ ಗೌಪ್ಯ ಸ್ಥಳ ಒಂದರಲ್ಲಿ ಐದು...
ಸುದ್ದಿ

ಸಂಸದ ಅನಂತಕುಮಾರ್ ಹೆಗ್ಡೆ ಅವರಿಂದ ನಮೋ ಭಾರತ ಸಂಘಟನೆಗೆ ಚಾಲನೆ, ದಾವಣಗೆರೆಯಲ್ಲಿ ಭಾರಿ ಜನಸ್ಪಂದನೆ – ಕಹಳೆ ನ್ಯೂಸ್

ದಾವಣಗೆರೆ : ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಭಾರತದ ಪ್ರಧಾನಿಯನ್ನಾಗಿಸಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಆರಂಭವಾಗಿರುವ 'ನಮೋ ಭಾರತ' ಸಂಘಟನೆಗೆ ಸಂಸದ ಶ್ರೀ ಅನಂತಕುಮಾರ ಹೆಗ್ಡೆ ಅವರು ದಾವಣಗೆರೆಯಲ್ಲಿ ಚಾಲನೆ ನೀಡಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಆರ್ಥಿಕ ತಜ್ಞ ಶ್ರೀ ವಿಶ್ವನಾಥ ಭಟ್ ಹಾಗೂ ದಾವಣಗೆರೆ ಸಂಸದ GM ಸಿದ್ದೇಶ್ವರ ಅವರು ಉಪಸ್ಥಿತರಿದ್ದರು. ಕರ್ಣ ನೃತ್ಯ ತಂಡದ ದೇಶಭಕ್ತಿಗೀತೆಯ ನ್ರತ್ಯ ರೂಪಕದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಎಲ್ಲರ ಗಮನಸೆಳೆಯಿತು. ನಂತರ ದಾವಣಗೆರೆಯ ನಮೋ...
ಸುದ್ದಿ

ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಆ.6 ರಿಂದ ಸೆ. 24ರ ತನಕ ಕಾಣಿಯೂರು ಶ್ರೀಗಳ ಚಾತುರ್ಮಾಸ್ಯ ಮಹೋತ್ಸವ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ಸೀಮೆಗೆ ಸಂಬಂಧಿಸಿದ ಕಾಣಿಯೂರು ಮೂಲ ಮಠದ ಯತಿ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ಈ ವರ್ಷದ ಚಾತುಮಾಸ್ಯ ಮಹೋತ್ಸವವನ್ನು ಪುತ್ತೂರು ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಜರುಗಲಿದ್ದು, ಅ.6 ರಿಂದ ಸೆ. 24 ರ ತನಕ 50 ದಿನಗಳ ಶ್ರೀಗಳ ಚಾತುರ್ಮಾಸ್ಯ ಮಹೋತ್ಸವ ನಡೆಯಲಿದೆ ಎಂದು ಚಾತುರ್ಮಾಸ್ಯ ಮಹೋತ್ಸವ ಸಮಿತಿ ಸಂಚಾಲಕ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಉಡುಪಿಯ ಅಷ್ಠಮಠಗಳ ಪೈಕಿ...
ಸುದ್ದಿ

Exclusive : ಉಡುಪಿಯ ಸರ್ಕಾರಿ ಶಾಲೆಗೂ ಬಂತು ಸ್ಕೂಲ್ ಬಸ್ – ಕಹಳೆ ನ್ಯೂಸ್

ಹಳೆ ವಿದ್ಯಾರ್ಥಿ ಈ ವಾಹನದ ಮಾಲೀಕ ದೈಹಿಕ ಶಿಕ್ಷಕನೇ ಇದರ ಸಾರಥಿ ಆಂಗ್ಲಮಾಧ್ಯಮ ಶಾಲೆಗಳ ದಬ್ಬಾಳಿಕೆಯಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಹಳದಿ ಬಣ್ಣದ ಸ್ಕೂಲ್ ಬಸ್ಸಿನ ಆಕರ್ಷಣೆಗೆ ಒಳಗಾಗಿರುವ ಪೋಷಕರು ತಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಗೆ ಕಳುಹಿಸುತ್ತಿದ್ದಾರೆ. ಆದ್ರೆ ಈ ನಡುವೆ ಇಲ್ಲೊಂದು ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ಸ್ಕೂಲ್ ಬಸ್ ವ್ಯವಸ್ಥೆ ಮಾಡಲಾಗಿದೆ. ಸ್ವತಃ ಶಾಲಾ ಶಿಕ್ಷಕ ಈ ಬಸ್ಸಿನ ಸಾರಥಿಯಾಗಿದ್ದಾರೆ. ಒಂದು ಕಡೆ ಸ್ಕೂಲ್ ಬಸ್ಸಿಗಾಗಿ ಕಾಯುತ್ತಿರುವ ಪುಟಾಣಿಗಳು,...
ಸುದ್ದಿ

ರಿಯಾಲಿಟಿ ಶೋನಲ್ಲಿ ಗಂಡುಕಲೆ ಯಕ್ಷಗಾನಕ್ಕೆ ಅಪಮಾನ ; ವಾಹಿನಿಯ ವಿರುದ್ಧ ಸಿಡಿದೆದ್ದ ಯಕ್ಷ ಪ್ರೀಯರು – ಕಹಳೆ ನ್ಯೂಸ್

ಖಾಸಗಿ ಮನರಂಜನಾ ವಾಹಿನಿಯ ರಿಯಾಲಿಟಿ ಶೋ ವೊಂದರಲ್ಲಿ ಯಕ್ಷಗಾನಕ್ಕೆ ಮಾಡಿರುವ ಅಪಮಾನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಬಾಲಿವುಡ್ ಹಾಡೊಂದಕ್ಕೆ ಯಕ್ಷಗಾನದ ನೃತ್ಯವನ್ನು ಬಳಸಿಕೊಂಡಿರುವ ಬಗ್ಗೆ ವಾಹಿನಿ ಕ್ಷಮೆ ಯಾಚಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಹಿಂದೊಮ್ಮೆ ಬ್ರಾಹ್ಮಣರನ್ನು ಕೆಟ್ಟದ್ದಾಗಿ ಚಿತ್ರಿಸಿದ್ದ ವಾಹಿನಿ ನಂತರ ಕ್ಷಮೆಯಾಚಿಸಿತ್ತು. ಸಾಮಾಜಿಕ ತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ಯಕ್ಷಗಾನ ಅಭಿಮಾನಿಗಳು ವಾಹಿನಿಗೆ ಪ್ರಶ್ನೆಗಳ ಬಾಣ ಎಸೆದಿದ್ದಾರೆ. ನಿಮಗೆ ಯಕ್ಷಗಾನದಲ್ಲಿ ಯಾವ ರಾಗದ ಹಾಡು ಸಿಗಲಿಲ್ಲವೇ?...
1 1,396 1,397 1,398 1,399 1,400 1,459
Page 1398 of 1459