ಧರ್ಮಜಾಗೃತಿಗಾಗಿ ಸರಣಿ ಶಿವಪೂಜಾ ಅಭಿಯಾನ ; ಕುಗ್ರಾಮದಿಂದ ಮಹಾನಗರಿಯ ತನಕ ಶ್ರೀಕೇಶವಕೃಪಾದ ವೇದಘೋಷಯಾತ್ರೆ – ಕಹಳೆ ನ್ಯೂಸ್
ಕಲಿಕೆಯನ್ನು ನಾವು ಎರಡು ಹಂತಗಳಲ್ಲಿ ವಿಭಾಗಿಸಬಹುದು. ಮೊದಲನೆಯದ್ದು ಸಿದ್ಧಾಂತ, ಎರಡನೆಯದ್ದು ಪ್ರಾಯೋಗಿಕ. ಈಜು ಕಲಿಕೆಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಯೊಬ್ಬ ಈಜುಗಾರಿಕೆಯ ಕುರಿತಾದ ಮಾಹಿತಿಯನ್ನು ಪುಸ್ತಕದಲ್ಲಿ ಓದಿ ತಿಳಿಕೊಂಡ ಮಾತ್ರಕ್ಕೆ ಆತ ಈಜುಪಟುವಾಗಲಾರ. ಸ್ವತಃ ಕೊಳದಲ್ಲಿ ಇಳಿದು ನೀರಿನಲ್ಲಿ ಕೈಕಾಲು ಬಡಿದು ಅಭ್ಯಾಸ ಮಾಡಿದಾಗಲೇ ಆತನೊಬ್ಬ ಸಮರ್ಥ ಈಜುಗಾರನಾಗುತ್ತಾನೆ. ಅಂತೆಯೇ ಪುಸ್ತಕದಲ್ಲಿ ಅಡಕವಾಗಿರುವ ಅಡುಗೆ ಕಲೆಯನ್ನು ಓದಿಕೊಂಡ ಮಾತ್ರಕ್ಕೆ ಪಾಕ ಪ್ರಾವೀಣ್ಯತೆಯೂ ಸಿದ್ದಿಸುವುದಿಲ್ಲ, ಬದಲಾಗಿ ಸ್ವತಃ ಉಪ್ಪು, ಹುಳಿ, ಖಾರ ಬೆರೆಸಿ...







