ವಿವೇಕಾನಂದದಲ್ಲಿ 39ನೇ ಮಾನ್ಸೂನ್ ಚೆಸ್ ಪಂದ್ಯಾಟಕ್ಕೆ ಚಾಲನೆ ಮೆದುಳಿನ ಶಕ್ತಿ ಹೆಚ್ಚಿಸಲು ಚೆಸ್ ಸಹಕಾರಿ : ಪ್ರೊ.ಜೀವನ್ ದಾಸ್
ಪುತ್ತೂರು: ಚೆಸ್ ಆಡುವುದರಿಂದ ಮನಸ್ಸಿಗೆ ಸಂತೋಷ, ಬುದ್ಧಿಗೆ ಆಹಾರ ಎರಡೂ ದೊರೆಯುತ್ತದೆ. ಇದೊಂದು ಸವಾಲಿನ ಆಟ. ನಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ. ಭಾರತ ದೇಶದಲ್ಲಿ ಇದರ ಉಗಮವಾಯಿತು ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಜೀವನ್ ದಾಸ್ ಹೇಳಿದರು. ಅವರು ವಿವೇಕಾನಂದ ಪದವಿ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ನಡೆದ 39ನೇ ವರ್ಷದ ಮಾನ್ಸೂನ್ ಚೆಸ್ ಪದ್ಯಾಂಟವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು. ಜೀವನದಲ್ಲಿ...







