ಜನ್ಮ ಭೂಮಿ ಭಾರತಕ್ಕೆ ಮರಳಲು ನಿರ್ಧರಿಸಿದ ಶ್ರೀ ದಿವಾಕರ ಪೂಜಾರಿ –ಕಹಳೆ ನ್ಯೂಸ್
ಕರ್ಮಭೂಮಿ ಕತಾರ್ ದೇಶದಲ್ಲಿ ಮೂರುವರೆ ದಶಕಗಳ ನಿರಂತರ ಸೇವೆ ಸಲ್ಲಿಸಿದ ಸೇವಾ ಮಾಣಿಕ್ಯ, ಉಡುಪಿ ಸಮೀಪದ ಅಂಬಲ್ಪಾಡಿ ಗ್ರಾಮದ ಶ್ರೀ ದಿವಾಕರ ಪೂಜಾರಿಯವರು ತಮ್ಮ ಜನ್ಮ ಭೂಮಿ ಭಾರತಕ್ಕೆ ಮರಳಲು ನಿರ್ಧರಿಸಿದರು. ಅವರು ಐಸಿಸಿ, ಐಸಿಬಿಎಫ್, ಐಬಿಪಿಸಿ, ಐ ಎಸ್ ಸಿ ಉಪ ಸಮಿತಿ ಸದಸ್ಯರಾಗಿ, ತುಳು ಕೂಟದ ಅಧ್ಯಕ್ಷರಾಗಿ, ಬಿಲ್ಲಾವಾಸ್ ಕತಾರ್ ನ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಶುದ್ಧ ಮನಸ್ಸಿನ ಬುದ್ಧ, ಸದಾ ಸಮಾಜ ಸೇವೆಗೆ ಸಿದ್ದರಾಗಿ...







