Monday, April 27, 2026

ಪ್ರಾದೇಶಿಕ

ಬೆಳ್ತಂಗಡಿ

ಇಳಂತಿಲದಲ್ಲಿ ನಡೆಯಲಿದೆ ಭಾರತ ಮಾತಾ ಪೂಜನ ಕಾರ್ಯಕ್ರಮ- ಕಹಳೆ ನ್ಯೂಸ್

ಇಳಂತಿಲ: ಕಾಯರ್ಪಾಡಿ ಶಾಲಾ ಮೈದಾನದಲ್ಲಿ ಡಿಸೆಂಬರ್ 6ರಂದು ಭಾರತ ಮಾತಾ ಪೂಜನ ಸಮಿತಿ ವತಿಯಿಂದ ಭಾರತ ಮಾತಾ ಪೂಜನ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ಗಂಟೆಗೆ ಈ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಅಧ್ಯಕ್ಷ ಸ್ಥಾನವನ್ನು ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ ಅವರು ಅಲಂಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಬೆಂಗಳೂರು ಕಿಯೋನಿಕ್ಸ್‍ನ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ, ಬೆಳ್ತಂಗಡಿ ತಾಲೂಕು ಶಾಸಕರಾದ ಹರೀಶ್ ಪೂಂಜಾ, ಹಾಗೂ ಗೌರವ...
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ಪ್ರತಿಷ್ಠಿತ ದ್ವಿಚಕ್ರ ವಾಹನದ ಶೋರೂಂಗೆ ಅಕ್ರಮ ಪ್ರವೇಶ ಮಾಡಿ ಮಾಲೀಕರ ಮೇಲೆ ಮಾಜಿ ಕೆಲಸಗಾರನಿಂದ ಹಲ್ಲೆ ; ಉಂಡ ಮನೆಗೆ ಎರಡು ಬಗೆಯಲು ಮುಂದಾದನೇ ಈತ…!? – ಕಹಳೆ ನ್ಯೂಸ್

ಪುತ್ತೂರು : ನಗರದ ಪ್ರತಿಷ್ಠಿತ ದ್ವಿಚಕ್ರ ವಾಹನ ಮಳಿಗೆಯಲ್ಲಿ ಸಂಸ್ಥೆಯ ಮಾಲಕರ ಮೇಲೆ ಮಾಜಿ ಕೆಲಸಗಾರ, ಅತಿಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದದಿಂದ‌ ನಿಂದಿಸಿ, ಹಲ್ಲೆ ನಡೆಸಿದ ಘಟನೆ (ನ. 25)ನಡೆದಿದೆ. ಘಟನೆಯ ಹಿನ್ನಲೆ : ಸದ್ರಿ ಸಂಸ್ಥೆಯ ಕೆಲಸಗಾರನು 3 ತಿಂಗಳ ಹಿಂದೆಯೇ ಕೆಲಸ ಬಿಟ್ಟಿದ್ದು, ಈತ ಸಂಸ್ಥೆಯ ಮಾಲೀಕರ ವಿರುದ್ಧ ಹಗೆ ಸಾದಿಸಲು ಕಾಯುತ್ತಿದ್ದ ಎನ್ನಲಾಗುತ್ತಿದೆ. ಅಲ್ಲದೆ, ಆತ ಸಂಸ್ಥೆಯಿಂದ ಆತನಿಗೆ ಬರಬೇಕಾಗಿದ್ದ ಪಿಎಫ್ ಬಗ್ಗೆ ಕೇಳಿ,...
ಪುತ್ತೂರು

ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಕ್ಷೇತ್ರದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೆ.ಮಾಧವ ಗೌಡ ಕಾಂತಿಲ ಆಯ್ಕೆ – ಕಹಳೆ ನ್ಯೂಸ್

ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವ ಕ್ಷೇತ್ರದ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆಯು ದೈವಸ್ಥಾನದ ವಠಾರದಲ್ಲಿ ನಡೆಯಿತು. ಕೆ. ಮಾಧವ ಗೌಡ ಕಾಂತಿಲ ಅಧ್ಯಕ್ಷರಾಗಿ ಆಯ್ಕೆಯಾದರು. ಉಳಿದಂತೆ ಅಶೋಕ್ ಕುಮಾರ್ ಉಜ್ರಿಪಾದೆ, ಶ್ರೀಮತಿ ಹರಿಣಿ, ಶ್ರೀಮತಿ ಸ್ವರ್ಣಲತ, ಶ್ರೀ ನಾರಾಯಣ ಪೂಜಾರಿ, ಭೋಜರಾಜ ಗೌಡ, ಶಾಮಣ್ಣ ನಾಯಕ್, ಕಿರಣ್ ಕುಮಾರ್ ರೈ ಅವರು ಸದಸ್ಯರಾಗಿ ಆಯ್ಕೆಗೊಂಡಿದ್ದು, ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಮುರಳಿಕೃಷ್ಣ ಹಸಂತ್ತಡ್ಕ, ಆಡಳಿತಾಧಿಕಾರಿ ರಾಮಣ್ಣ ನಾಯ್ಕ್...
ಪುತ್ತೂರು

ಸಾಹಿತಿ ಡಾ.ಶ್ರೀಧರ ಎಚ್.ಜಿ ಅವರ ರಚನೆಯ ‘ ಶಿಖಂಡಿ’ ಬಿಡುಗಡೆಯ ಕಥನ ಕೃತಿ ಬಿಡುಗಡೆ-ಕಹಳೆ ನ್ಯೂಸ್

ಪುತ್ತೂರು: ಸಮಕಾಲೀನ ಸಂಗತಿಗಳಿಗೆ ಮುಖಾಮುಖಿಯಾಗುತ್ತಲೇ ಪುರಾಣದ ಒಳಸುಳಿಗಳನ್ನು ಬಿಚ್ಚುತ್ತಾ ಹೋಗುವ ನಾಟಕ ಶಿಖಂಡಿ. ಈ ಕೃತಿಯನ್ನು ಓದುತ್ತಾ ಸಾಗಿದಂತೆ ಅದು ಓದುಗರನ್ನು ಆವರಿಸಿ ಸಾರ್ವತ್ರಿಕ ಚಿಂತನೆಗಳಿಗೆ ಪ್ರೇರೇಪಿಸುತ್ತಾ ಸಾಗುತ್ತದೆ ಎಂದು ಆಂಧ್ರಪ್ರದೇಶದ ಕುಪ್ಪಂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ದುರ್ಗಾಪ್ರವೀಣ ಎಂ.ಎಸ್ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ, ಸಾಹಿತಿ ಡಾ.ಶ್ರೀಧರ ಎಚ್.ಜಿ ಅವರು ರಚಿಸಿರುವ ಶಿಖಂಡಿ - ಬಿಡುಗಡೆಯ ಕಥನ ಎಂಬ ಕೃತಿಯನ್ನು ಆನ್ ಲೈನ್ ಮೂಲಕ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಈಶ್ವರಮಂಗಲದ ಹನುಮಗಿರಿ ಕ್ಷೇತ್ರದಲ್ಲಿ ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮ-ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮ ಈಶ್ವರಮಂಗಲದ ಹನುಮಗಿರಿ ಕ್ಷೇತ್ರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಧರ್ಮ ಶ್ರೀ ಪ್ರತಿಷ್ಠಾನ ಹನುಮಗಿರಿಯ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ, ಪ್ರತಿಯೊಂದು ಕ್ಷೇತ್ರದಲ್ಲೂ ನಾವೆಲ್ಲರು ಸ್ವಾವಲಂಬಿಗಳಾದರೆ ನಮ್ಮ ದೇಶ ವಿಶ್ವಗುರು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ, ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತ ಎಂಬ ಪರಿಕಲ್ಪನೆಯನ್ನು ನಮಗೆ ನೀಡಿದ್ದಾರೆ, ಅದರಲ್ಲಿ ಜೇನು ಕೃಷಿಗೆ...
ಪುತ್ತೂರು

ನ.24ರಂದು ಜರ್ನಲಿಸ್ಟ್ ಯೂನಿಯನ್‍ನಿಂದ ಪತ್ರಿಕಾ ದಿನಾಚರಣೆ – ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಕಾರ್ಮಿಕ ಕಾಯಿದೆಯ ಪ್ರಕಾರ ನೋಂದಾಯಿತಗೊಂಡಿರುವ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ನ.24ರಂದು ಮಂಗಳೂರು ಬೊಕ್ಕಪಟ್ಣ ಶ್ರೀಬ್ರಹ್ಮ ಬಬ್ಬರ್ಯ ದೈವಸ್ಥಾನದ ಹಿಂದುಗಡೆಯ ರಾಣಿ ಅಬ್ಬಕ್ಕ ನೌಕೆಯಲ್ಲಿ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಕ್ಷೇತ್ರ ಶಾಸಕ ಯು.ಟಿ.ಖಾದರ್ ಮತ್ತು ಕರ್ನಾಟಕ ಜರ್ನಲಿಸ್ಟ್...
ಪುತ್ತೂರು

ಟ್ರೈಬಲ್ ಅಡ್ವೆಂಚರ್ ಕೆಫೆ ಬೆಂಗಳೂರು ಆಫ್ರೋಡ್ ಫೆಸ್ಟ್ : ಸ್ಪರ್ಧೆಯಲ್ಲಿ ಸುಧಿನ್ ರೈ ಪೆಟ್ರೋಲ್ ಮತ್ತು ಡೀಸೆಲ್ ಕ್ಲಾಸ್‌ನಲ್ಲಿ ಪ್ರಥಮ-ಕಹಳೆ ನ್ಯೂಸ್

ಪುತ್ತೂರು: ಟ್ರೈಬಲ್ ಅಡ್ವೆಂಚರ್ ಕೆಫೆ ಬೆಂಗಳೂರು ವತಿಯಿಂದ ಬೆಂಗಳೂರಿನಲ್ಲಿ ನವೆಂಬರ್ 14 ರಿಂದ 15ರವರೆಗೆ ನಡೆದ ಬೀಟ್‍ದ ಕ್ರೀಕ್ ಆಫ್ ರೋಡ್ ಫೆಸ್ಟ್ ಜೀಪು ಸ್ಪರ್ಧೆಯಲ್ಲಿ ಕೋಯಿಲದ ಸುಧಿನ್ ರೈ ನೆಲ್ಯೊಟ್ಟು ರವರು ಪೆಟ್ರೋಲ್ ಮತ್ತು ಡೀಸೆಲ್ ಕ್ಲಾಸ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜೀಪು ಸ್ಪರ್ಧೆಯಲ್ಲಿ ಒಟ್ಟು 20 ವಾಹನಗಳು ಭಾಗವಹಿಸಿದ್ದು, ಇದರಲ್ಲಿ ಕೋಯಿಲ ಗ್ರಾಮದ ನೆಲ್ಯೊಟ್ಟು ದಿ.ಸುಧಾಕರ್ ರೈ ಹಾಗೂ ಭಾರತಿ ಎಸ್.ರೈ ದಂಪತಿಗಳ ಪತ್ರ ಸುಧಿನ್...
ಪುತ್ತೂರು

ಪುತ್ತೂರು ಧರಿತ್ರಿ ಅಸೋಸಿಯೇಟ್ಸ್‍ನ ಟಿಪ್ಪರ್ ಚಾಲಕ ಹೃದಯಘಾತದಿಂದ ನಿಧನ – ಕಹಳೆನ್ಯೂಸ್

ಪುತ್ತೂರು: ಇಲ್ಲಿನ ಧರಿತ್ರಿ ಅಸೋಸಿಯೇಟ್ಸ್ನ ಟಿಪ್ಪರ್ ಚಾಲಕ ಪಡೀಲ್ ಕನಕದಾಸ ಕಾಲೋನಿ ನಿವಾಸಿ ರವಿ(33 ವ) ಎಂಬವರು ಹೃದಯಘಾತದಿಂದ ನಿಧನರಾದರು. ನ.20ರಂದು ಚಾಲಕ ರವಿ ಸಂಸ್ಥೆಯ ಅಡಿಯಲ್ಲಿ ಮುಕ್ರಂಪಾಡಿ ಸಮೀಪ ಕೆಲಸ ನಿರ್ವಹಿಸುತ್ತಿದ್ದ ವೇಳೆ ಎದೆನೋವೆಂದು ಟಿಪ್ಪರ್ನಿಂದ ಇಳಿದ ಅವರು ಕ್ಷಣದಲ್ಲಿ ಕುಸಿದು ಬಿದ್ದರು. ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದರೂ ಆಗಲೇ ಅವರು ಮೃತಪಟ್ಟಿದ್ದಾರೆ. ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಭಟ್ ಅವರ ಮಾಲಕತ್ವದ ಧರಿತ್ರಿ ಅಸೋಸಿಯೇಟ್ಸ್ನಲ್ಲಿ...
1 840 841 842 843 844 872
Page 842 of 872