Thursday, May 14, 2026

ಪ್ರಾದೇಶಿಕ

ದಕ್ಷಿಣ ಕನ್ನಡಪುತ್ತೂರುಸುದ್ದಿ

ಅಪರೂಪಕ್ಕೆ ಬಾನಿನಂಗಳದಲ್ಲಿ ಮೂಡಿದ ಅಪೂರ್ವ ಚಿತ್ತಾರ – ಕಹಳೆ ನ್ಯೂಸ್

ಉಪ್ಪಿನಂಗಡಿ : ಕರಾವಳಿಯಲ್ಲಿ ಚಂಡಮಾರುತ ಅಬ್ಬರ ಇಳಿಕೆಯಾದ ನಂತರ ಇದೀಗ ಸ್ವಲ್ಪ ಮಟ್ಟಿಗೆ ಮಳೆಕಾಲ ಆರಂಭ ಆದ ಮುನ್ಸೂಚನೆ ಕಂಡು ಬರುತ್ತಿದ್ದು, ಪ್ರತಿನಿತ್ಯ ಜಿಲ್ಲೆಯಾದ್ಯಂತ ಮಳೆಯಾಗಿತ್ತಿದೆ. ಈ ಮಧ್ಯೆ ಕಾಮಲಬಿಲ್ಲೊಂದು ಬಾನಿನಂಗಳದಲ್ಲಿ ಮೂಡಿ ಜನರ ಚಿತ್ತವನ್ನು ಅತ್ತ ಸೆಳೆದಿದೆ. ಇಳಂತಿಲದ ವಿಲ್ಮಾ ಪ್ರಿಯಾಂಕ ಡಿಸೋಜ ಅವರು ತಮ್ಮ Oneplus ಫೋನಿನಲ್ಲಿ ಈ ಅಪೂರ್ವ ಚಿತ್ರವನ್ನು ಸೆರೆಹಿಡಿದಿದ್ದು, ಪ್ರಕೃತಿ ಪ್ರೇಮಿಗಳ ಪ್ರಶಂಸೆಗೆ ಕಾರಣವಾಗಿದೆ. ಫೋಟೋ ಸೆರೆ ಹಿಡಿದವರು : ವಿಲ್ಮಾ ಪ್ರಿಯಾಂಕ...
ಪುತ್ತೂರುಸುಳ್ಯ

ಬಜರಂಗದಳ ಜಿಲ್ಲಾ ಸಹ ಸಂಚಾಲಕ್ ಲತೀಶ್ ಗುಂಡ್ಯ ರವರ ಮೇಲೆ ಸುಳ್ಳು ಆರೋಪದ ವಿರುದ್ಧ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲೆ ಖಂಡನೆ-ಕಹಳೆ‌ ನ್ಯೂಸ್

ಬಜರಂಗದಳದ ಪುತ್ತೂರು ಜಿಲ್ಲಾ ಸಹ ಸಂಯೋಜಕ್ ಲತೀಶ್ ಗುಂಡ್ಯ ಇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಮೆಸೇಜ್ ಗಳು ಹರಿದಾಡುತಿದ್ದು ಸದ್ರಿ ವಿಷಯಕ್ಕೆ ಸಂಬಂಧಪಟ್ಟಂತೆ ಸುಳ್ಯದ ಪ್ರಗತಿ ಆಂಬುಲೆನ್ಸ್ ನ  ಅಭಿಲಾಷ್ ಎಂಬವರು ಇಲ್ಲ ಸಲ್ಲದ ಆರೋಪದೊಂದಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಸುಂದರ ಪಾಟಾಜೆ ಮುಖಾಂತರ ಸುಳ್ಳು ಕೇಸ್ ನೀಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿದೆ. ಲತೀಶ್ ಗುಂಡ್ಯ ಮೇಲೆ ಕೊಲೆ ಬೆದರಿಕೆ.ಕೋಮು ವಿಚಾರಕ್ಕೆ ಸಂಬಂಧಪಟ್ಟಂತೆ ಸುಳ್ಳು ಆರೋಪ ಮಾಡಿರುವುದನ್ನು ವಿಶ್ವಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲೆ ತೀವ್ರವಾಗಿ ಖಂಡಿಸುತ್ತದೆ....
ಪುತ್ತೂರುಸುದ್ದಿ

ಪುತ್ತೂರು: ತಂದೆಯ ಅಂತ್ಯಸಂಸ್ಕಾರದ ವೇಳೆ ಪುತ್ರ ಕುಸಿದುಬಿದ್ದು ಸಾವು- ಕಹಳೆ ನ್ಯೂಸ್

ಕೊರೋನಾದಿಂದ ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದ ಮಗ ಹೃದಯಾಘಾತದಿಂದಾಗಿ ಮೃತಪಟ್ಟಿರುವ ಘಟನೆ ಜೂ.2 ರಂದು ಪುಣಚ ಗ್ರಾಮದ ಬೈಲುಗುತ್ತು ಕೊಪ್ಪಳದಲ್ಲಿ ನಡೆದಿದೆ. ಪುಣಚ ಬೈಲುಗುತ್ತು ಕೊಪ್ಪಳ ನಿವಾಸಿ ಕೆಪಿಟಿ ನಿವೃತ್ತ ಪ್ರೊಫೇಸರ್ ಭುಜಂಗ ಶೆಟ್ಟಿ(85)ರವರ ಕೋವಿಡ್‌ನಿಂದ ಜೂ.1ರಂದು ರಾತ್ರಿ ಮೃತಪಟ್ಟಿದ್ದರು. ಅವರು ಮೃತದೇಹದ ಅಂತಿಮ ಸಂಸ್ಕಾರವು ಜೂ.2 ರಂದು ಬೈಲುಗುತ್ತು ಕೊಪ್ಪಳ ಅವರ ನಿವಾಸದಲ್ಲಿ ಕೋವಿಡ್ ನಿಯಮಾವಳಿಯೊಂದಿಗೆ ಪುತ್ತೂರು ಸೇವಾಭಾರತಿ ಕಾರ್‍ಯಕರ್ತರ ಸಹಕಾರದಲ್ಲಿ ಕೊಪ್ಪಳ ಮನೆಯಲ್ಲಿ ಮೃತರ ಅಂತ್ಯಸಂಸ್ಕಾರ...
ಕ್ರೈಮ್ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಅಕ್ರಮ ಮದ್ಯದ ಅಡ್ಡೆಗೆ ದಾಳಿ ನಡೆಸಿದ ಪುಂಜಾಲಕಟ್ಟೆಯ ಖಡಕ್ ಎಸ್.ಐ. ಸೌಮ್ಯ ಜೆ. ; ಆರೋಪಿಗಳು ಪರಾರಿ..! ಅಕ್ರಮ ಮದ್ಯ,ನಗದು ವಶಕ್ಕೆ ಪಡೆದ ಪೋಲೀಸರು – ಕಹಳೆ ನ್ಯೂಸ್

ಬೆಳ್ತಂಗಡಿ : ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದ ಅಡ್ಡೆಗೆ ಪೂಂಜಾಲಕಟ್ಟೆಯ ಪೊಲೀಸರು ದಾಳಿ ನಡೆಸಿ ಅಕ್ರಮ ಮದ್ಯ ಮತ್ತು ನಗದನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಪಡೆದ ಪುಂಜಾಲಕಟ್ಟೆ ಪೊಲಿಸ್ ಠಾಣಾಧಿಕಾರಿ ಸೌಮ್ಯಾ ಜೆ. ಅವರು ಸಿಬಂದಿಗಳೊಂದಿಗೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಕಾಣೇಲು ನಿವಾಸಿ ಭೋಜ ಎಂಬವರ ಮನೆಗೆ ದಾಳಿ ನಡೆಸಿದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ 42,356/-ಮೌಲ್ಯದ 58.68 ಲೀಟರ್ ಮದ್ಯ ಹಾಗೂ 82.53 ಲೀಟರ್ ಬಿಯರ್...
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿಯ ಅನಾಥಾಶ್ರಮದಲ್ಲಿ 210 ಮಂದಿಗೆ ಕೊರೋನಾ ಪಾಸಿಟಿವ್ ; ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಕೋವಿಡ್ ಸೆಂಟರ್ ಆಗಿ‌ ಮಾರ್ಪಾಡಾದ ಶ್ರೀಕ್ಷೇತ್ರ ಧರ್ಮಸ್ಥಳದ ” ರಜತಾದ್ರಿ ” ವಸತಿಗೃಹಕ್ಕೆ ಶಿಫ್ಟ್ – ಕಹಳೆ ನ್ಯೂಸ್

ಬೆಳ್ತಂಗಡಿ : ತಾಲೂಕಿನ ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ 200 ಕ್ಕೂ ಮಿಕ್ಕಿ ಆಶ್ರಮವಾಸಿಗಳಿಗೆ ಕೊರೋನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಈ ಹಿನ್ನಲೆಯಲ್ಲಿ ಶಾಸಕ ಹರೀಶ್ ಪೂಂಜ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ರವಿವಾರ ಆಶ್ರಮಕ್ಕೆ ಭೇಟಿ ಮಾಡಿ ಆಶ್ರಮದಲ್ಲಿದ್ದವರನ್ನು ಧರ್ಮಸ್ಥಳದ ರಜತಾದ್ರಿ ಕ್ವಾರೆಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಸಿಯೋನ್ ಅನಾಥಾಶ್ರಮದಲ್ಲಿ 270 ಮಂದಿಯಿದ್ದು, ಅವರಲ್ಲಿ 210 ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕಿತರನ್ನು ರಜತಾದ್ರಿ ವಸತಿ ಗೃಹಕ್ಕೆ...
ಬಂಟ್ವಾಳ

ವಿಟ್ಲ: ಅನ್ಯಕೋಮಿನ ಯುವಕನಿಂದ ಅತ್ಯಾಚಾರ ಯತ್ನ; ಆರೋಪಿ ಹ್ಯಾರೀಸ್ ಬಂಧನ- ಕಹಳೆ ನ್ಯೂಸ್

ವಿಟ್ಲ: ಬಂಟ್ವಾಳ ತಾಲೂಕಿನ ಕಾಡುಮಠ ಕಕ್ಷೀಕೇರಿ ಎಂಬಲ್ಲಿನ ಯುವತಿಯನ್ನು ಅತ್ಯಾಚಾರ ಮಾಡಿದ ಆರೋಪಿಯನ್ನು ಇಂದು ಮುಂಜಾನೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಸ್ಲಿಂ ಯುವಕನೊರ್ವ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಗೆ ತೆರಳಿ ಬಲವಂತವಾಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಂಧಿತನನ್ನು ಸುಮಾರು 30 ವರ್ಷ ವಯಸ್ಸಿನ ಹ್ಯಾರೀಸ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಸಂತ್ರಸ್ಥೆಯ ಮನೆಗೆ ಪೊಲೀಸರು ಆಗಮಿಸಿ ಹೆಚ್ಚಿನ ಮಾಹಿತಿ ಕಲೆಹಾಕಿದ್ದಾರೆ. ನೊಂದ ಯುವತಿಯ ಮನೆಗೆ...
ಬೆಳ್ತಂಗಡಿ

ಬೆಳ್ತಂಗಡಿ:ಬ್ಲಾಕ್ ಫಂಗಸ್ ಕಾಟಕ್ಕೆ ಬಲಿಯಾದ ತಣ್ಣೀರುಪಂತದ ನಿವಾಸಿ ನೋಣಯ್ಯ ಪೂಜಾರಿ – ಕಹಳೆ ನ್ಯೂಸ್

ಕೊರೋನಾ ಭೀತಿಯ ನಡುವೆ ಹೆಚ್ಚುತ್ತಿರುವ ಬ್ಲಾಕ್ ಫಂಗಸ್​ ಗೆ ಬೆಳ್ತಂಗಡಿಯ ನಿವಾಸಿಯೋರ್ವರು ಮೃತಪಟ್ಟಿದ್ದಾರೆ. ಇದು ಬೆಳ್ತಂಗಡಿ ತಾಲೂಕಿನಲ್ಲಿ ಬ್ಲಾಕ್ ಫಂಗಸ್ ಗೆ ಮೊದಲ ಬಲಿಯಾಗಿದೆ . ಕಪ್ಪು ಶಿಲೀಂಧ್ರ ಕಾಟಕ್ಕೆ ಬಲಿಯಾದ ವ್ಯಕ್ತಿಯನ್ನು ತಣ್ಣೀರುಪಂತ ಗ್ರಾಮದ ಅಳಕೆ ನಿವಾಸಿ ನೋಣಯ್ಯ ಪೂಜಾರಿ (55)ಎಂದು ಗುರುತಿಸಲಾಗಿದೆ. ನೋಣಯ್ಯ ಪೂಜಾರಿ ಇವರು ಕಣ್ಣಿನ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಹೀಗಾಗಿ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಅವರ...
ಬೆಳ್ತಂಗಡಿಸುದ್ದಿ

ಸಹಕಾರಿ ಬ್ಯಾಂಕ್ ಸಿಬ್ಬಂದಿಗಳಿಗೂ ಕೊರೋನಾ ವಾರಿಯರ್ಸ್ ಸೌಲಭ್ಯ ಸಿಗಲಿ, :-ರಕ್ಷಿತ್ ಪಣೆಕ್ಕರ – ಕಹಳೆ ನ್ಯೂಸ್

ಕೊರೊನಾ ಸಂದರ್ಭದಲ್ಲಿಯೂ ಗ್ರಾಮೀಣ ಆರ್ಥಿಕತೆಯಲ್ಲಿ ಸಹಕಾರಿ ಸಂಘಗಳು ಮಹತ್ವದ ಪಾತ್ರವಹಿಸಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ ವ್ಯವಸ್ಥೆಗೆ ರಾಷ್ಟೀಕೃತ ಬ್ಯಾಂಕ್‍ಗಳಿಗೆ ಸರಿ ಸಮನಾಗಿ ಸಹಕಾರಿ ಸಂಸ್ಥೆಗಳು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ನಮ್ಮ ಸಹಕಾರಿ ಸಂಸ್ಥೆಯ ಸಿಬ್ಬಂದಿಗಳು ಕೊರೊನಾ ವಾರಿಯರ್ಸ್ ಮಾದರಿಯಲ್ಲಿ ತಮ್ಮ ಗ್ರಾಹಕರಿಗೆ ಬ್ಯಾಂಕಿಂಗ್ ಹಾಗೂ ಪಡಿತರ ವಿತರಣೆ,ಹಾಗೂ ರೈತರಿಗೆ ತಮ್ಮ ಬೆಳೆ ಬೆಳೆಯಲು ಯಾವುದೇ ಸಮಸ್ಯೆ ಬಾರದ ರೀತಿಯಲ್ಲಿ ರಸಗೊಬ್ಬರ,ಮೈಲುತುತ್ತು ವಿತರಣಾ ಕಾರ್ಯದಲ್ಲಿ...
1 754 755 756 757 758 877
Page 756 of 877