Thursday, May 14, 2026

ಪ್ರಾದೇಶಿಕ

ಕಡಬದಕ್ಷಿಣ ಕನ್ನಡಸುದ್ದಿ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡ ಇದರ ವತಿಯಿಂದ ವೆನ್ಲಾಕ್ ಅಸ್ಪತ್ರೆ ಸಹಯೋಗದಲ್ಲಿ ಮರ್ದಾಳದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ-ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡ ಇದರ ವತಿಯಿಂದ ವೆನ್ಲಾಕ್ ಅಸ್ಪತ್ರೆ ಸಹಯೋಗದಲ್ಲಿ ಮರ್ದಾಳದಲ್ಲಿ ರಕ್ತದಾನ ಶಿಬಿರ ನಡೆಯಿತು. ಈ ಕಾರ್ಯಕ್ರಮವನ್ನು ಮರ್ದಾಳ ಗ್ರಾಮ ಪಂಚಾಯತ್ ಅದ್ಯಕ್ಷರಾದ ಶ್ರೀ ಹರೀಶ್ ಕೊಡಂದೂರು ನೇರವೇರಿಸಿದರು. ಮುಖ್ಯ ಅತಿಥಿಯಾಗಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಸಹಕಾರ್ಯದರ್ಶಿಯವರಾದ ನವಿನ್ ನೆರಿಯ ಭಾಗವಹಿಸಿ "ಕೋವಿಡ್ ನಂತ ಸಂಕಷ್ಟಕಾಲದಲ್ಲೂ ಹಿಂದೂ ಸಂಘಟನೆಯ ಮಾತೃ ಹೃದಯದ ಕಾರ್ಯಕರ್ತರು ನಿಸ್ವಾರ್ಥ ಭಾವನೆಯಿಂದ ರಕ್ತದಾನದಂತ ಅಭಿನಂದನಾರ್ಹ ಕಾರ್ಯ ಮಾಡುತಿದ್ದಾರೆ ಎಂದರು....
ಬಂಟ್ವಾಳ

ಪುಂಜಾಲಕಟ್ಟೆ ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಕೋವಿಡ್-೧೯ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಆರೋಗ್ಯ ಸಿಬಂದಿಗಳಿಗೆ ಸನ್ಮಾನ ಹಾಗೂ ಸುರಕ್ಷತಾ ಸಾಮಾಗ್ರಿ ವಿತರಣೆ ಕಾರ್ಯಕ್ರಮ-ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕು ಪುಂಜಾಲಕಟ್ಟೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಕೋವಿಡ್-೧೯ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಆರೋಗ್ಯ ಸಿಬಂದಿಗಳಿಗೆ ವಿಶೇಷ ಸನ್ಮಾನ ಹಾಗೂ ಸುರಕ್ಷತಾ ಸಾಮಾಗ್ರಿ ವಿತರಣೆ ಕಾರ್ಯಕ್ರಮ ಗುರುವಾರ ಪ್ರಾ.ಆ.ಕೇಂದ್ರದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಉಡುಪ ಅವರು ಸಮ್ಮಾನಿಸಿ ಪ್ರಾ.ಆ.ಕೇಂದ್ರದ ವೈದ್ಯಾಽಕಾರಿ ಡಾ| ಸತೀಶ್ ಎಂ. ಸಿ. ಅವರು ಮಾತನಾಡಿ,...
ಸುಬ್ರಹ್ಮಣ್ಯ

ಸುಬ್ರಹ್ಮಣ್ಯದಲ್ಲಿ‌ ಅನಾಥವಾಗಿರುವ ಮಹಿಳೆಯೊಬ್ಬರ ಗುರುತು ಪತ್ತೆಗೆ ಸಹಕರಿಸುವರೇ ಎಂದು ಸಾರ್ವಜನಿಕರಲ್ಲಿ ಠಾಣಾಧಿಕಾರಿ ಮನವಿ-ಕಹಳೆ ನ್ಯೂಸ್

ಸುಬ್ರಹ್ಮಣ್ಯ :ಸುಬ್ರಹ್ಮಣ್ಯದಲ್ಲಿ‌ ಅನಾಥವಾಗಿರುವ ಮಹಿಳೆಯೊಬ್ಬರ ಗುರುತು ಪತ್ತೆ ಆಗಬೇಕಿದೆ. ಸಹಕರಿಸುವರೇ ಎಂದು ಸಾರ್ವಜನಿಕರಲ್ಲಿ ಠಾಣಾಧಿಕಾರಿ ಒಮಾನಾ ಅವರು ಮನವಿ ಮಾಡಿದ್ದಾರೆ. ಸುಮಾರು ಒಂದು ತಿಂಗಳಿಂದ ವಿಶ್ವ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದ ರಸ್ತೆ ಗಳಲ್ಲಿ ಅನಾಥ ಮಹಿಳೆಯೊಬ್ಬರು ಸುತ್ತಾಡುವುದು, ಕಂಡುಬರುತ್ತಿದೆ. ಅವರ ಬಗ್ಗೆ ಗುರುತು ಪತ್ತೆಗೆ ಸಹಕರಿಸುವಂತೆ ಸುಬ್ರಹ್ಮಣ್ಯ ಠಾಣಾಧಿಕಾರಿ ಸಬ್ ಇನ್ಸ್‌ಪೆಕ್ಟರ್ ಓಮನ ಅವರು ಮನವಿ ಮಾಡಿದ್ದಾರೆ. ಸಾಧಾರಣ ನಲ್ವತ್ತು ವರ್ಷ ಪ್ರಾಯದ ಮಹಿಳೆಯೊಬ್ಬರು ಸುಬ್ರಹ್ಮಣ್ಯ ಪರಿಸರದಲ್ಲಿದ್ದು, ಅವರಿಗೆ ವಾಸ್ತವ್ಯಕ್ಕಾಗಿ...
ಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ (ನಿ.), ಉಜಿರೆ ಯಿಂದ ತಾಲೂಕು ಆರೋಗ್ಯ ಕೇಂದ್ರಕ್ಕೆ ಆಕ್ಸೀಮೀಟರ್ ಕೊಡುಗೆ- ಕಹಳೆ ನ್ಯೂಸ್

ಬೆಳ್ತಂಗಡಿ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಯವರಾದ ಡಾ. ಶ್ರೀಮತಿ ವಿದ್ಯಾ ಇವರಿಗೆ ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಶ್ರೀದರ ಜಿ. ಬಿಡೆ ಯವರು ಸಂಘದ ವತಿಯಿಂದ ಕೋವಿಡ್ ಸಂತ್ರಸ್ತರ ಚಿಕಿತ್ಸೆಗಾಗಿ 10 ಆಕ್ಸೀಮೀಟರ್ ನ್ನು ದಿನಾಂಕ - 11-06-2021 ರಂದು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ಅನಂತ ಭಟ್ ಎಂ., ನಿರ್ದೇಶಕರುಗಳಾದ ಶ್ರೀ ಬಾಲಕೃಷ್ಣ ಗೌಡ ಕೆ. ಶ್ರೀ...
ಸುಬ್ರಹ್ಮಣ್ಯ

ಸುಬ್ರಹ್ಮಣ್ಯ:-  ಬಡ ಕುಟುಂಬದ ಸದಸ್ಯರಿಗೆ ಧನ ಸಹಾಯ ವಿತರಣೆ-ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀ ಅಯ್ಯಪ್ಪ ದೀಪೋತ್ಸವ  ಸಮಿತಿ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ಪೂರ್ವಾಧ್ಯಕ್ಷರಾದ ರೋ.ಉಮೇಶ್ ಕೆ ಎನ್ ಇವರ ಸಾರಥ್ಯದಲ್ಲಿ ಬೆಳಂದೂರು ಕಾರ್ಲಾಡಿ ಅವರ ಮನೆಯ ಆಸುಪಾಸಿನಲ್ಲಿರುವ ೫ ಬಡವರ್ಗದ ಕುಟುಂಬಗಳಿಗೆ ನಿತ್ಯೋಪಯೋಗಿ  ಆಹಾರದ ಕಿಟ್ಟನ್ನು ನೀಡಿರುತ್ತಾರೆ. ಅಲ್ಲದೆ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬವೊAದಕ್ಕೆ  ರೂ.೩,೦೦೦ ಹಾಗೂ ಗೃಹ ನಿರ್ಮಾಣದ ಪ್ರಯುಕ್ತ ಇನ್ನೊಂದು ಬಡ ಕುಟುಂಬದ ಸದಸ್ಯರಿಗೆ ರೂ.೧೦,೦೦೦ ಧನ ಸಹಾಯವನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ...
ಕ್ರೈಮ್ಪುತ್ತೂರು

ಕಡಬದ ಮುಜೂರುನಲ್ಲಿ ಸಹೋದರನಿಗೆ ಲಾಂಗ್ ನಿಂದ ಹಲ್ಲೆ, ಕೊಲೆಯತ್ನ ಪ್ರಕರಣ ; ಆರೋಪಿಗೆ ನಿರೀಕ್ಷಣಾ ಜಾಮೀನು – ಕಹಳೆ ನ್ಯೂಸ್

ಪುತ್ತೂರು: ಮುಜೂರು ಸಹೋದರನಿಗೆ ಲಾಂಗ್ ನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಯೆನ್ನಲಾಗಿದ್ದ ಪ್ರೀತಂ ರವರಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರುಡಾಲ್ಫ್ ಫಿರೇರಾರವರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ. ಐತ್ತೂರು ಗ್ರಾಮದ ಮುಜೂರು ಎಂಬಲ್ಲಿನ ನಿವಾಸಿ ಬಾಳಪ್ಪ ಗೌಡ ಎಂಬವರ ಪುತ್ರರಾದ ಧ್ರುವ ಹಾಗೂ ಪ್ರೀತಂ ಎಂಬವರ ಮಧ್ಯೆ ಜಾಗದ ವಿಚಾರಕ್ಕೆ ಸಂಬAಧಿಸಿ ಮನಸ್ತಾಪ ಇತ್ತು ಎನ್ನಲಾಗಿದ್ದು, ಮೇ ೧೪ರ ರಾತ್ರಿ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿ ಕೊರೋನದಿಂದ ಸಂಕಷ್ಟಕ್ಕೆ ಸಿಲುಕಿದ ಬಡಕುಟುಂಬಳಿಗೆ ಆಹಾರದ ಕಿಟ್ ವಿತರಿಸಿ ಮಾನವೀಯತೆ ಮೆರೆದ ಬಿಜೆಪಿ ಯುವ ಮೋರ್ಛಾ ಜಿಲ್ಲಾ ಉಪಾಧ್ಯಕ್ಷ ಸಹಜ್ ರೈ – ಕಹಳೆ ನ್ಯೂಸ್

ಈಶ್ವರಮಂಗಲ: ಕೊರೋನಾ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಹಲವಾರು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿದ್ದು ಅಂತಹ ಅರ್ಹ ಕುಟುಂಬಗಳಿಗೆ ಬಿಜೆಪಿ ಯುವ ಮೋರ್ಛಾ ಜಿಲ್ಲಾ ಉಪಾಧ್ಯಕ್ಷ, ಉದ್ಯಮಿ ಸಹಜ್ ರೈ ಬಳಜ್ಜರವರು ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ನೆಟ್ಟಣಿಗೆ ಮುಡ್ನೂರು ಗ್ರಾಪಂ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ದಿನ ಬಳಕೆಯ ಅಗತ್ಯ ಆಹಾರದ ಸಾಮಾಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ ಜೂ.8 ರಂದು Karnoor ನಲ್ಲಿ ನಡೆಯಿತು. ಈ...
ಕಡಬ

ಕಡಬ ಗೃಹರಕ್ಷಕ ದಳದ ಘಟಕಕ್ಕೆ ಭೇಟಿ ನೀಡಿದ ಜಿಲ್ಲಾ ಕಮಾಂಡೆಂಟ್ ಡಾ|| ಮುರಳಿ ಮೋಹನ ಚೂಂತಾರು- ಕಹಳೆ ನ್ಯೂಸ್

ಕಡಬ : ಇಂದು ಬೆಳಿಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ|| ಮುರಳಿ ಮೋಹನ ಚೂಂತಾರು ಕಡಬ ಗೃಹರಕ್ಷಕ ದಳದ ಘಟಕಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೊರೋನ 19 ಮಾರ್ಷಲ್ ಕರ್ತವ್ಯದ ಸಿಬ್ಬಂದಿಯವರ, ಪ್ರವಾಹ ರಕ್ಷಣಾ ಕರ್ತವ್ಯದ ಸಿಬ್ಬಂದಿಯವರ, ಹಾಗೂ ಘಟಕದ ಸಿಬ್ಬಂದಿಯವರ ಬಗ್ಗೆ ಯೋಗ ಕ್ಷೇಮ ವಿಚಾರಿಸಿ ಮಾತು ಕಥೆ ನಡೆಸಿದರು. ಹಾಗೂ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಡಬದ ಸರಕಾರಿ ಹಿರಿಯ ಪ್ರಾಥಮಿಕ...
1 753 754 755 756 757 877
Page 755 of 877