Sunday, June 14, 2026

ಪ್ರಾದೇಶಿಕ

ದಕ್ಷಿಣ ಕನ್ನಡಪುತ್ತೂರುಸುದ್ದಿ

ಡಿ. 26 ಹಾಗೂ 27ರಂದು ನುಳಿಯಾಲು ತರವಾಡು ಶ್ರೀ ಧರ್ಮಚಾವಡಿಯ ಧರ್ಮ ನೇಮೋತ್ಸವ– ಕಹಳೆ ನ್ಯೂಸ್

ಪುತ್ತೂರು : ನಿಡ್ಪಳ್ಳಿ, ನುಳಿಯಾಲು ತರವಾಡು ಶ್ರೀ ಧರ್ಮಚಾವಡಿಯಲ್ಲಿ, ನುಳಿಯಾಲು ಪುರುಷೋತ್ತಮ ಆರ್.ಶೆಟ್ಟಿಯವರ ಸೇವಾರೂಪವಾಗಿ, ಡಿ.26 ಮತ್ತು 27ರಂದು ಧರ್ಮನೇಮೋತ್ಸವ ನಡೆಯಲಿದೆ. ಡಿ. 26ರಂದು ನುಳಿಯಾಲು ತರವಾಡು ಮನೆಯಲ್ಲಿ ಪೂರ್ವಾಹ್ನ 8 ಗಂಟೆಯಿ0ದ ಗಣಹೋಮ, ನಾಗತಂಬಿಲ, 11:30ಕ್ಕೆ ಶ್ರೀ ವೆಂಕಟರಮಣ ದೇವರಿಗೆ ಹರಿಸೇವೆ, ಪ್ರಸಾದ ವಿತರಣೆ, ಮಧ್ಯಾಹ್ನ 1:30 ರಿಂದ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ‘ಯಕ್ಷಗಾನ ನಾಟ್ಯವೈಭವ’ ಸಾಯಂಕಾಲ 4:30ಕ್ಕೆ ಭಂಡಾರ ಇಳಿಯಲಿದೆ. ಸಂಜೆ 6 ಗಂಟೆಯಿ0ದ ರಾಜನ್...
ದಕ್ಷಿಣ ಕನ್ನಡಸುದ್ದಿಸುಳ್ಯ

ಸುಳ್ಯ: ದ್ವಿಚಕ್ರ ವಾಹನ ಚಲಾಯಿಸಿದ ಅಪ್ರಾಪ್ತ ಬಾಲಕ: ಪೋಷಕರಿಗೆ 10 ಸಾವಿರ ದಂಡ ವಿಧಿಸಿದ ಕೋರ್ಟ್- ಕಹಳೆ ನ್ಯೂಸ್

ಸುಳ್ಯ : ದ್ವಿಚಕ್ರ ವಾಹನ ಚಲಾಯಿಸಿದ ಅಪ್ರಾಪ್ತ ಬಾಲಕನ ಪೋಷಕರಿಗೆ ಕೋರ್ಟ್ 10 ಸಾವಿರ ದಂಡ ವಿಧಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಸುರೇಶ ಎಂಬವರ ಮಗ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಪ್ರಕರಣದ ವಿಚಾರಣೆ ನಡೆಸಿದ ಸುಳ್ಯ ನ್ಯಾಯಾಲಯ ಪೋಷಕರಿಗೆ 10,000 ರೂ. ದಂಡ ವಿಧಿಸಿದೆ. ಈ ಕುರಿತು ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ...
ದಕ್ಷಿಣ ಕನ್ನಡಬಂಟ್ವಾಳ

ಕಾರಿಂಜೇಶ್ವರ ಕ್ಷೇತ್ರ ಸಂರಕ್ಷಣೆಯ ಕಾರ್ಯಕ್ಕೆ ಸಾತ್ ನೀಡಲಿದ್ದಾರೆ ಜಿಲ್ಲೆಯ ಮಠಾಧೀಶರು– ಕಹಳೆ ಕಹಳೆ ನ್ಯೂಸ್

 ಕಾರಿಂಜೇಶ್ವರ ಕ್ಷೇತ್ರ ಸಂರಕ್ಷಣೆಯ ಕಾರ್ಯಕ್ಕೆ ಜಿಲ್ಲೆಯ ಮಠಾಧೀಶರು ಸಾತ್ ನೀಡಲಿದ್ದು, ಡಿಸೆಂಬರ್ 20 ಸೋಮವಾರ ಮಧ್ಯಾಹ್ನ 11 ಗಂಟೆಗೆ ಶ್ರೀ ಕ್ಷೇತ್ರಕ್ಕೆ ಕಾರಿಂಜಕ್ಕೆ ಭೇಟಿ ನೀಡಲಿದ್ದಾರೆ.  ಗಣಿಗಾರಿಕೆಯಿಂದ ಹಾನಿಗೀಡಾಗಿರುವ ಕ್ಷೇತ್ರದ ಪರಿಸರ ವೀಕ್ಷಣೆಗೆ, ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ಜಗದ್ಗುರು ಮಧ್ವಾಚಾರ್ಯ ಮಹಾಸಂಸ್ಥಾನ ಕುಕ್ಕೆ ಸುಬ್ರಮಣ್ಯ, ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ಗುರುಪುರ, ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ, ಶ್ರೀ ಶ್ರೀ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೇಮಕಾತಿ (PDO)ಯ ಮಾಹಿತಿ ಮತ್ತು ಪೂರ್ವ ತಯಾರಿಯ ಉಚಿತ ಕಾರ್ಯಾಗಾರ – ಕಹಳೆ ನ್ಯೂಸ್

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ದಿನಾಂಕ 25.12.2021 ರ ಶನಿವಾರದಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಸದ್ಯದಲ್ಲೇ ಅಧಿಸೂಚನೆ ಹೊರಬೀಳಲಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮಪಂಚಾಯತ್ ಕಾರ್ಯದರ್ಶಿ ಹುದ್ದೆಗಳು (Gramapanchayat secretary com rural development assistant G2) ಮತ್ತು ದ್ವಿತೀಯ ದರ್ಜೆಯ ಲೆಕ್ಕ ಸಹಾಯಕರು(Second Division account assistant) ಹುದ್ದೆಗಳ ನೇಮಕಾತಿ ವಿಧಾನ/ಲಿಖಿತ ಪರೀಕ್ಷಾ ಪಠ್ಯಕ್ರಮ /ಲಿಖಿತ ಪರೀಕ್ಷೆಗಳಿಗೆ ಪೂರ್ವ ತಯಾರಿ...
ದಕ್ಷಿಣ ಕನ್ನಡಪುತ್ತೂರು

ಮೊದಲ ವರ್ಷದ ಆ್ಯನಿವರ್ಸರಿ ಸಂಭ್ರಮದಲ್ಲಿ ಫ್ಯಾಷನ್ ಲೋಕದ ಫ್ಯಾಷನ್ ಝೋನ್ ಮಳಿಗೆ: ಗ್ರಾಹಕರಿಗೆ ಕಾದಿದೆ ಬಂಪರ್ ಆಫರ್- ಕಹಳೆ ನ್ಯೂಸ್

ಪುತ್ತೂರು: ದರ್ಬೆಯ ಅನಜೆ ಅಮ್ಮು ರೈ ಕಾಂಪ್ಲೆಕ್ಸ್ ನಲ್ಲಿ ಸತತ ಒಂದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ‘ಫ್ಯಾಷನ್ ಝೋನ್ ಮೆನ್ಸ್ ಕಲೆಕ್ಷನ್’ ಮಳಿಗೆ ಮೊದಲ ವರ್ಷದ ಆ್ಯನಿವರ್ಸರಿಯನ್ನು ಡಿ.18 ರಿಂದ 20ವರೆಗೆ ಆಚರಿಸುತ್ತಿದೆ.   ಕಲರ್, ಕಲೆಕ್ಷನ್, ಡಿಸೈನ್ ಇವೆಲ್ಲದರಲ್ಲೂ ಯುವಕರ ಮನಸ್ಸೆಳೆದಿರುವ ಫ್ಯಾ಼ಷನ್ ಝೋನ್ ಮಳಿಗೆ ಪುತ್ತೂರಿನ ಫೇಮಸ್ ಮೆನ್ಸ್ ಶಾಪಿಂಗ್ ಸ್ಥಳ. ಒಂದು ವರ್ಷ ಪೂರೈಸಿ 2ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಖರೀದಿಯ ಮೇಲೆ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಬರಿಮಾರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು – ಕಹಳೆ ನ್ಯೂಸ್

ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿ ಹಾಗೂ ಭಾರತೀಯ ಜನತಾ ಪಾರ್ಟಿಯ ತತ್ವ ಸಿದ್ಧಾಂತ ಹಾಗೂ ಶಾಸಕ ರಾಜೇಶ ನಾಯ್ಕ್ ಅವರ ಅಭಿವೃದ್ಧಿ ಕೆಲಸ ಕಾರ್ಯವನ್ನು ನೋಡಿ, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ ಅವರ ಸಮ್ಮುಖದಲ್ಲಿ, ಬರಿಮಾರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು, ಬಿಸಿರೋಡ್ ಬಿಜೆಪಿ ಕಚೇರಿಯಲ್ಲಿ, ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರ ಬಿಜೆಪಿ ಕಾರ್ಯದರ್ಶಿಯಾದ ರಮನಾಥ ರಾಯಿ ಕ್ಷೇತ್ರ ಕೋಶಾಧಿಕಾರಿ...
ಕ್ರೀಡೆದಕ್ಷಿಣ ಕನ್ನಡಪುತ್ತೂರುಸುದ್ದಿ

ಮಂಗಳೂರು ವಿವಿ ಫುಟ್ ಬಾಲ್ ಕ್ರೀಡಾಕೂಟ: ಸಂತ ಫಿಲೋಮಿನಾ ಕಾಲೇಜು ಚಾಂಪಿಯನ್- ಕಹಳೆ ನ್ಯೂಸ್

ಪುತ್ತೂರು: ಮಂಗಳೂರು ವಿಶ್ವವಿದ್ಯಾಲಯದ ವಲಯ ಮಟ್ಟದ ಫುಟ್ ಬಾಲ್ ಕ್ರೀಡಾಕೂಟದಲ್ಲಿ ಸಂತ ಫಿಲೋಮಿನಾ ಕಾಲೇಜು ಚಾಂಪಿಯನ್ ಆಗಿ ಮೂಡಿ ಬಂದಿದೆ. ಮಂಗಳೂರು ವಿಶ್ವವಿದ್ಯಾಲಯ ಮತ್ತು ಮೂಡಬಿದಿರೆಯ ಆಳ್ವಾಸ್ ಕಾಲೇಜು ವತಿಯಿಂದ ಆಳ್ವಾಸ್ ಕಾಲೇಜಿನಲ್ಲಿ ಫುಟ್ ಬಾಲ್ ಕ್ರಿಡಾಕೂಟವನ್ನು ಆಯೋಜಿಸಲಾಗಿತ್ತು. ಮಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದ ಕಾಲೇಜುಗಳನ್ನು ಉಡುಪಿ ಮತ್ತು ಮಂಗಳೂರು ವಲಯಗಳಾಗಿ ವರ್ಗೀಕರಿಸಿ ಮೊದಲ ಸುತ್ತಿನ ಸ್ಪರ್ಧೆ ನಡೆದು, ಪ್ರತಿ ವಲಯದಿಂದ ಮೊದಲೆರಡು ಸ್ಥಾನ ಪಡೆದ ನಾಲ್ಕು ಕಾಲೇಜುಗಳ ನಡುವೆ ಕ್ವಾರ್ಟರ್...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬಿಜೆಪಿ ಮಹಿಳಾ ಮೋರ್ಚಾ ಪುತ್ತೂರು ನಗರ ಮಂಡಲದಿಂದ ಇ-ಶ್ರಮಿಕ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಎಪಿಯಲ್ ರೇಷನ್ ಕಾರ್ಡ್ ನವೀಕರಣ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು: ಬಿಜೆಪಿ ಮಹಿಳಾ ಮೋರ್ಚಾ ಪುತ್ತೂರು ನಗರ ಮಂಡಲದ ವತಿಯಿಂದ ಇ-ಶ್ರಮಿಕ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಎಪಿಯಲ್ ರೇಷನ್ ಕಾರ್ಡ್ ನವೀಕರಣ ಕಾರ್ಯಕ್ರಮ ಡಿ.16ರಂದು ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಸಹಕಾರ ಜ್ಯೋತಿ ಸಭಾಭವನದಲ್ಲಿ ನಡೆದಿದೆ. 'ಸಹಕಾರ ಜ್ಯೋತಿ ಸಭಾಭವನದಲ್ಲಿ 'ಸರ್ಕಾರದ ಯೋಜನೆಯ ಅಭಿಯಾನದ ಅಂಗವಾಗಿ ಈ ಕಾರ್ಯಕ್ರಮ ನಡೆದಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿ ಹಾಗೂ ಎಸ್.ಡಿ.ಪಿ. ಸಂಸ್ಥೆಯ ಪಾಲುದಾರರಾದ ರೂಪಲೇಖ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ...
1 680 681 682 683 684 887
Page 682 of 887