ಹಿಂದೂ ಮಕ್ಕಳಿಗೆ ಇಸ್ಲಾಂ ಪ್ರವಚನ ವಿಚಾರ; ನಿಜಾಂಶ ಅರಿಯದೆ ಸದನದಲ್ಲಿ ಪ್ರಸ್ತಾಪಿಸಿದ ಉಳ್ಳಾಲ ಶಾಸಕರು; ಶಾಸಕ ಸಂಜೀವ ಮಠಂದೂರು ಆಕ್ರೋಶ -ಕಹಳೆ ನ್ಯೂಸ್
ವಿಟ್ಲದ ಅಡ್ಯನಡ್ಕದಲ್ಲಿ ಶಾಲಾ ಮಕ್ಕಳಿಗೆ ಇಸ್ಲಾಂ ಮತ ಪ್ರವಚನ ಮಾಡುತ್ತಿದ್ದಾಗ ಹಿಂದೂ ಸಂಘಟನೆ ದಾಳಿ ನಡೆಸಿದ ವಿಚಾರಕ್ಕೆ ಸಂಭಂಧಪಟ್ಟಂತೆ ಉಳ್ಳಾಲ ಶಾಸಕ ಯುಟಿ ಖಾದರ್ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿ ಶಾಸಕ ಸಂಜೀವ ಮಠಂದೂರು ಪ್ರತಿಕ್ರಿಯೆ ನೀಡಿದ್ದಾರೆ. ಶಿವರಾತ್ರಿಯಂದು ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳನ್ನು ಆ ಶಾಲೆಯ ಮುಖ್ಯೋಪಾಧ್ಯಯರೇ ಕರೆಸಿ ಪರೀಕ್ಷೆಗೆ ಸಂಬಂಧಪಟ್ಟಂತೆ ಮಾಹಿತಿ ನಿಡ್ತಾರೆ, ಖಡ್ಡಾಯವಾಗಿ ಹೋಗಬೇಕೆಂದು ತಿಳಿಸಿ ಶಾಲೆಯಲ್ಲಿ ಯಾವುದೇ ಕ್ಲಾಸ್ ತೆಗೆದುಕೊಳ್ಳದೇ ಶಾಲೆಯಿಂದ ದೂರಿವಿರುವ...







