ಸಮಾಜದ ಶೋಷಿತರ ದನಿಯಾಗಿರುವ ತಹಶಿಲ್ದಾರ್ ಕಾರ್ಯಕ್ಕೆ ಊರವರ ಸಲಾಂ- ಕಹಳೆ ನ್ಯೂಸ್
ಉಡುಪಿ: ಹಲವು ವರ್ಷಗಳಿಂದ ಕರೆಂಟು, ನೀರು ಇಲ್ಲದೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಪರಿಶಿಷ್ಟ ವರ್ಗದ ಕುಟುಂಬ ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ತಾಲೂಕಿನ ತಹಶಿಲ್ದಾರ್ ಅವರ ಪ್ರಾಮಾಣಿಕ ಪ್ರಯತ್ನದಿಂದ ಇಂದು ಮನೆ ಬೆಳಕು ಕಾಣುವಂತಾಗಿದೆ. ಈ ಮೊದಲು ಜನವರಿ 20 ರಂದು ತಹಶಿಲ್ದಾರ್ ಕಚೇರಿಯಲ್ಲಿ ನಡೆದ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆಯಲ್ಲಿ ತಾಲೂಕಿನ ಸುಪ್ರೀತಾ ಬಂದು ಕಣ್ಣೀರಿಡುತ್ತಾ "ಹಲವು ವರ್ಷಗಳಿಂದ ಮನೆಯಲ್ಲಿ ಕರೆಂಟ್, ನೀರಿನ...







