Monday, May 4, 2026

ಉಡುಪಿ

ಉಡುಪಿಕಾರ್ಕಳಬೆಂಗಳೂರುಸಂತಾಪಸುದ್ದಿ

ವೀರಪ್ಪ ಮೊಯ್ಲಿ ಅವರಿಗೆ ಪುತ್ರಿ ವಿಯೋಗ ; ಹಂಸ ಮೊಯ್ಲಿ ವಿಧಿವಶ – ಕಹಳೆ ನ್ಯೂಸ್

ಬೆಂಗಳೂರು/ಕಾರ್ಕಳ: ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಅವರಿಗೆ ಪುತ್ರಿ ವಿಯೋಗ ಉಂಟಾಗಿದೆ. ಮೊಯಿಲಿ ಪುತ್ರಿ, ಭರತನಾಟ್ಯ ಕಲಾವಿದೆ ಹಂಸ ಮೊಯ್ಲಿ ಅವರು ರವಿವಾರ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. 46 ವರ್ಷದ ಹಂಸ ಮೊಯ್ಲಿ ಅವರು ಇತ್ತೀಚೆಗೆ ಅಸೌಖ್ಯದಿಂದ ಬಳಲುತ್ತಿದ್ದರು. ಹಂಸ ಮೊಯ್ಲಿ ಅವರು ಭರತನಾಟ್ಯ ನೃತ್ಯಗಾರ್ತಿ ಮತ್ತು ಪ್ರಾಯೋಗಿಕ ನೃತ್ಯ ಸಂಯೋಜಕಿಯಾಗಿದ್ದರು. ಅವರು ದೇವದಾಸಿಯರ ಜೀವನವನ್ನು ಆಧರಿಸಿದ ತಮಿಳು ಚಲನಚಿತ್ರ ಶೃಂಗಾರಂನಲ್ಲಿ ನಟಿಸಿದ್ದರು....
ಉಡುಪಿಸುದ್ದಿ

ಸೌರ ವಿದ್ಯುತ್ ಫಲಕಗಳ ಸಮರ್ಪಣೆ ಮತ್ತು ಯಕ್ಷ ಶಿಕ್ಷಣ ತರಗತಿ ಉದ್ಘಾಟನೆ –ಕಹಳೆ ನ್ಯೂಸ್

ಉಡುಪಿ: ಕಟಪಾಡಿಯ ಎಸ್.ವಿ.ಎಸ್ ವಿದ್ಯಾವರ್ಧಕ ಸಂಘ(ರಿ) ಇದರ ಅಂಗಸAಸ್ಥೆಯಾದ ಎಸ್.ವಿ.ಎಸ್ ಆಂಗ್ಲಮಾಧ್ಯಮ ಶಾಲೆಯ ಕಟ್ಟಡದ ಮೂರನೇ ಮಹಡಿಯಲ್ಲಿ 25 KW ಸಾಮರ್ಥ್ಯದ ಸುಮಾರು 15ಲಕ್ಷ ರೂಪಾಯಿ ವೆಚ್ಚದ, ಮಂಗಳೂರಿನ ಇನ್‌ವೆಂಜರ್ ಟೆಕ್ನಿಲಿಜಿಸ್ ಪ್ರೈ.ಲಿ. ಕಂಪೆನಿಯವರಿAದ ಪ್ರಾಯೋಜಿಸಲ್ಪಟ್ಟ, ಸೌರ ವಿದ್ಯುತ್ ಉತ್ಪಾದನಾ ಫಲಕಗಳ ಅನಾವರಣ ಹಾಗೂ ಸಮರ್ಪಣೆ ಕಾರ್ಯಕ್ರಮವು ಜನಪ್ರಿಯ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ನೆರವೇರಿಸಿ. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ ಸತ್ಯೇಂದ್ರ ಪೈಯವರ ನಾಯಕತ್ವವನ್ನು ಪ್ರಶಂಸಿಸಿದರು. ಇದೇ ಸಂದರ್ಭದಲ್ಲಿ...
ಉಡುಪಿಕಾಪುಸುದ್ದಿ

ಕಾಪು :ಇನ್ನಂಜೆ ಪಂಚಾಯತ್ ವ್ಯಾಪ್ತಿಯಲ್ಲಿ 500ಗಿಡಗಳನ್ನು ನೆಟ್ಟು, 500ಗಿಡಗಳನ್ನು ನಾಗರೀಕರಿಗೆ ವಿತರಣೆ ಮಾಡಿ ಗಿಡಗಳ ಸಂಭ್ರಮ ಆಚರಣೆ ಕಾರ್ಯಕ್ರಮವನ್ನು ಆಸರೆ ಹಿರಿಯ ನಾಗರೀಕರ ಮನೆಯಲ್ಲಿ ಆಚರಿಸಲಾಯಿತು-ಕಹಳೆ ನ್ಯೂಸ್

ಕಾಪು : ತಾನು ಆಹಾರ ತಿಂದರೆ ಗಿಡಗಳಿಗೂ ಆಹಾರ ನೀಡುವೆ, ತಾನು ಈ ವರೆಗೆ ಸೇವೆ ಮಾಡಿ ಸಾಕಿದ 200 ಹಿರಿಯ ನಾಗರೀಕರಂತೆ ತನ್ನ ಸುತ್ತ ಮುತ್ತ ನೆಟ್ಟಿರುವ 500 ಗಿಡಗಳನ್ನು ಸಾಕುವೆ ನೀವು ಯಾವಾಗ ಬೇಕಾದರೂ ಬಂದುಕೇಳಿ ನಾನು ಬದುಕಿದ್ದರೆ ಗಿಡಗಳು ಬದುಕಿರುತ್ತವೆ ಎಂದು 500 ಗಿಡಗಳನ್ನು ನೆಡುವ ಮತ್ತು ಸಾಕುವ ಜವಾಬ್ದಾರಿ ತೆಗೆದುಕೊಂಡ ಪಾಂಗಳ ಗುಡ್ಡೆ ಆಸರೆ ಎಂಬ ಹಿರಿಯ ನಾಗರೀಕರ ಮನೆಯ ಪೆನ್ ವೆಲ್ ಸೋನ್ಸ್...
ಉಡುಪಿಸುದ್ದಿ

ಶ್ರೀ ಅಯ್ಯಣ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಿಗೆ “ನಿವೃತ್ತಿ ಬೀಳ್ಕೊಡುಗೆ”: ಗುರ್ಮೆ ಸುರೇಶ್ ಶೆಟ್ಟಿ ಬಾಗಿ-ಕಹಳೆ ನ್ಯೂಸ್

ಉಡುಪಿ: ಶ್ರೀ ಅಯ್ಯಣ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಹೊರ್ತಿ ಅಮಗೊಂಡ ಇವರಿಗೆ ಇಂದು ನಡೆದ "ನಿವೃತ್ತಿ ಬೀಳ್ಕೊಡುಗೆ" ಸಮಾರಂಭದಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಪ್ರವೀಣ್ ಕುಮಾರ್ ಗುರ್ಮೆ, ಕಿಶೋರ್ ಕುಮಾರ್ ಗುರ್ಮೆ, ಪಿ.ಕೆ.ಎಸ್ ಪ್ರೌಢ ಶಾಲೆಯ ಶಿಕ್ಷಕರಾದ ಚಂದ್ರಕಾAತ್ ಮಾಣಿ ನಾಯ್ಕ್, ಹಳೆ ವಿದ್ಯಾರ್ಥಿಗಳಾದ ಯೋಗೀಶ್ ಆಚಾರ್ಯ, ವಿನೇಶ್ವರಿ, ಗಣೇಶ್ ಶೆಟ್ಟಿ, ಅನಿಲ್ ಶೆಟ್ಟಿ, ರೋಹಿತ್, ಸಿಆರ್ ಪಿ...
ಉಡುಪಿಕಾರ್ಕಳಸುದ್ದಿ

ಕಾರ್ಕಳ: ಬೈಕ್ ಗೆ ಶ್ವಾನ ಅಡ್ಡ ಬಂದು ಬೈಕ್ ಪಲ್ಟಿ: ನವವಿವಾಹಿತೆ ಸಾವು –ಕಹಳೆ ನ್ಯೂಸ್

ಕಾರ್ಕಳ : ರಸ್ತೆಯಲ್ಲಿ ಶ್ವಾನ ಅಡ್ಡ ಬಂದ ಹಿನ್ನೆಲೆ ಬೈಕ್ ಪಲ್ಟಿಯಾಗಿ ನವವಿವಾಹಿತೆಯೊಬ್ಬಳು ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕಿನ ಈದು ಗ್ರಾಮದ ಹೊಸ್ಮಾರು ಸೇತುವೆ ಬಳಿ ನಡೆದಿದೆ. ಕಾರ್ಕಳ ತೆಳ್ಳಾರು ನಿವಾಸಿ ನೀಕ್ಷಾ ಮೃತ ಮಹಿಳೆ. ಎರಡು ತಿಂಗಳ ಹಿಂದೆಯಷ್ಟೇ ವಿಶಾಲ್ ಎಂಬವರೊAದಿಗೆ ದಾಂಪತ್ಯ ಬದುಕಿಗೆ ನೀಕ್ಷಾ ಕಾಲಿಟ್ಟಿದ್ದರು. ಶುಕ್ರವಾರ ಮಧ್ಯಾಹ್ನದ ವೇಳೆಗೆ ನೀಕ್ಷಾ ಮಂಗಳೂರಿಗೆ ಹೊರಟಿದ್ದು, ಹೊಸ್ಮಾರು, ಶಿರ್ತಾಡಿ ಮಾರ್ಗವಾಗಿ ಮಂಗಳೂರಿಗೆ ತೆರಳುವ ಖಾಸಗಿ ಬಸ್ಸು ಏರಲೆಂದು ಪತಿಯೊಂದಿಗೆ...
ಉಡುಪಿಸುದ್ದಿ

ನಮ‌ ತುಳುವೆರ್ ಕಲಾ ಸಂಘಟನೆ, ಮುದ್ರಾಡಿ, ಕರ್ನಾಟಕ ಬೀದಿ ನಾಟಕ ಅಕಾಡೆಮಿ ವತಿಯಿಂದ ರವಿರಾಜ್ ಎಚ್ ಪಿ ಹಾಗೂ ಶಶಿ ರಾಜ್ ಕಾವೂರ್ ಅವರಿಗೆ ಸಿಜಿಕೆ ರಂಗ ಪುರಸ್ಕಾರ-2024 ಪ್ರದಾನ– ಕಹಳೆ ನ್ಯೂಸ್

ಉಡುಪಿ: ನಮ‌ ತುಳುವೆರ್ ಕಲಾ ಸಂಘಟನೆ, ಮುದ್ರಾಡಿ, ಕರ್ನಾಟಕ ಬೀದಿ ನಾಟಕ ಅಕಾಡೆಮಿ ವತಿಯಿಂದ ಗುರುವಾರ ಉಡುಪಿಯ ಯಕ್ಷಗಾನ ಕಲಾರಂಗದ ಐ ವೈ ಸಿ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸಿಜಿಕೆ ರಂಗ ಪುರಸ್ಕಾರ-2024 ನ್ನು ರಂಗಕರ್ಮಿಗಳಾದ ಉಡುಪಿಯ ರವಿರಾಜ ಎಚ್ ಪಿ ಮತ್ತು ಮಂಗಳೂರಿನ ಶಶಿರಾಜ್ ಕಾವೂರು ಅವರಿಗೆ ಹಿರಿಯ ವಿದ್ವಾಂಸ ನಾಡೋಜ ಡಾ. ಕೆ. ಪಿ. ರಾವ್ ಅವರು ಪ್ರದಾನ ಮಾಡಿ ರಂಗಭೂಮಿಯಿಂದ ಸಾಮಾಜಿಕ ಬದಲಾವಣೆಯಾಗುತ್ತದೆ. ಬಿ ವಿ...
ಉಡುಪಿಕೃಷಿಸುದ್ದಿ

ಹೈನುಗಾರರ ರೂ. 1100 ಕೋಟಿ ಪ್ರೋತ್ಸಾಹ ಧನ ಶೀಘ್ರ ಬಿಡುಗಡೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಪತ್ರ– ಕಹಳೆ ನ್ಯೂಸ್

ಕಳೆದ 8 ತಿಂಗಳಿಂದ ರಾಜ್ಯದ ಹೈನುಗಾರರಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಗೆ ಬಾಕಿ ಇರುವ ಸುಮಾರು 1100 ಕೋಟಿ ಪ್ರೋತ್ಸಾಹ ಧನವನ್ನು ತಕ್ಷಣ ಏಕ ಕಂತಿನಲ್ಲಿ ಬಿಡುಗಡೆ ಮಾಡುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮುಖ್ಯ ಮಂತಿ ಸಿದ್ದರಾಮಯ್ಯ ರವರಿಗೆ ಪತ್ರ ಬರೆದು ಅಗ್ರಹಿಸಿದ್ದಾರೆ. ರಾಷ್ಟದಲ್ಲಿ ಎರಡನೇ ಅತೀ ದೊಡ್ಡ ಹಾಲು ಮಂಡಳವಾಗಿ ಕರ್ನಾಟಕ ಹಾಲು ಮಹಾ ಮಂಡಳ ಮೂಡಿ ಬಂದಿದ್ದು, ಇದರ ಆಶ್ರಯದಲ್ಲಿ 15 ಒಕ್ಕೂಟಗಳು ಕಾರ್ಯಾಚರಿಸುತ್ತಿದೆ. ಈ...
ಉಡುಪಿದಕ್ಷಿಣ ಕನ್ನಡಮಂಗಳೂರುಸುದ್ದಿ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ – ರೆಡ್ ಅಲರ್ಟ್ ; ನಾಳೆಯೂ ( ಜೂ.28 ) ದ.ಕ.ದಲ್ಲಿ ಶಾಲೆಗಳಿಗೆ ರಜೆ, ಉಡುಪಿಯಲ್ಲಿ ರಜೆ ಇಲ್ಲ – ಕಹಳೆ ನ್ಯೂಸ್

ಮಂಗಳೂರು/ಉಡುಪಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಾಗೂ ಪ್ರವಾಹದ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜೂನ್ 28 ಶುಕ್ರವಾರದಂದು ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಮುಂದುವರೆಯಲಿದೆ ಎಂದು ಜಿಲ್ಲಾಡಳಿತ ಘೋಷಿಸಿದೆ. ಜೂನ್ 27ರಂದು ಕೂಡ ಭಾರೀ ಮಳೆಯಿಂದಾಗಿ ಶಾಲೆಗಳಿಗೆ ರಜೆ ನೀಡಲಾಗಿತ್ತು.ಮುಂಜಾಗ್ರತಾ ಕ್ರಮವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿದ್ದು, ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಉಡುಪಿಯಲ್ಲಿ ರಜೆ ಇಲ್ಲ: ಡಿಸಿ ಉಡುಪಿಯಲ್ಲಿ...
1 60 61 62 63 64 120
Page 62 of 120