Monday, April 27, 2026

ಉಡುಪಿ

ಉಡುಪಿಜಿಲ್ಲೆಸುದ್ದಿ

ಇಬ್ಬರು ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯದಂತೆ ಅನ್ಯರಿಂದ ಒತ್ತಡ -ಕಹಳೆ ನ್ಯೂಸ್

ಉಪ್ಪಿನಂಗಡಿ : ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪದ್ಮುಂಜ ಸರಕಾರಿ ಪ್ರೌಢಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಿಂದ 2 ಹೆಣ್ಣುಮಕ್ಕಳನ್ನು ಅವಕಾಶ ವಂಚಿತರಾಗಿಸಿದ ಘಟನೆ ವರದಿಯಾಗಿದೆ. ಖಾಸಗಿ ಶಾಲೆಗಳು ಶೇ. ನೂರು ಫ‌ಲಿತಾಂಶಕ್ಕಾಗಿ ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಒಂಬತ್ತನೇ ತರಗತಿಯಿಂದಲೇ ಬೇರೆ ಶಾಲೆಗೆ ವರ್ಗಾಯಿಸುತ್ತಿರುವ ಬಗ್ಗೆ ದೂರುಗಳಿದ್ದು, ಸರಕಾರಿ ಶಾಲೆಗಳಲ್ಲೂ ಈ ಪ್ರವೃತ್ತಿ ಆರಂಭವಾಗಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ಮಕ್ಕಳ ಹಕ್ಕುಗಳ ಆಯೋಗ,...
ಉಡುಪಿಕುಂದಾಪುರಜಿಲ್ಲೆಸುದ್ದಿ

ಕಾರು ಮತ್ತು ದ್ವಿಚಕ್ರವಾನ ಮುಖಾಮುಖಿ ಡಿಕ್ಕಿ -ಕಹಳೆ ನ್ಯೂಸ್

ಕುಂದಾಪುರ: ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಳ್ಕೂರು ಎಂಬಲ್ಲಿ ಕಾರು ಢಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಸವಾರರಿಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ. ಮೃತಪಟ್ಟ ದ್ವಿಚಕ್ರ ವಾಹನ ಸವಾರರನ್ನು ರಾಜೀವ ಶೆಟ್ಟಿ (55) ಹಾಗೂ ಸುಧೀರ ದೇವಾಡಿಗ (35) ಎಂದು ಗುರುತಿಸಲಾಗಿದೆ. ಕಂಡ್ಲೂರು ಕಡೆಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಬಸ್ರೂರು ಸಮೀಪದ ಬಿ.ಎಚ್.ನಿಂದ ಕಂಡ್ಲೂರಿನತ್ತ ತೆರಳುತ್ತಿದ್ದ ಸ್ಕೂಟಿ ಮುಖಾಮುಖಿ ಡಿಕ್ಕಿಯಾಗಿದ್ದು ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ...
ಉಡುಪಿಜಿಲ್ಲೆಸುದ್ದಿ

ಉಡುಪಿ ತಾಲೂಕು 15 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ. ಎಂ.ಎಲ್.ಸಾಮಗ ಆಯ್ಕೆ -ಕಹಳೆ ನ್ಯೂಸ್

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೇ 17 ಮತ್ತು 18ರಂದು ಎರಡು ದಿನಗಳ ಕಾಲ ಅದ್ದೂರಿಯಿಂದ ನಡೆಯಲಿದ್ದು , ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿಕ್ಷಣ ತಜ್ಞ , ಯಕ್ಷಗಾನ ಕಲಾವಿದ, ವಾಗ್ಮಿ, ಮಾಜಿ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎಲ್.ಸಾಮಗ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೊಡವೂರು ಶಂಕನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ....
ಉಡುಪಿಜಿಲ್ಲೆಸುದ್ದಿ

ಉಡುಪಿಯಲ್ಲಿ ಮೂರು ವಿಭಿನ್ನ ಬಣ್ಣಗಳು ಸೇರಿದಂತೆ ನಾಲ್ಕು ಕಲರ್ ನ ಕಲ್ಲಂಗಡಿ ಕೃಷಿಯನ್ನು ಮಾಡಿ ಯಶಸ್ವಿ-ಕಹಳೆ ನ್ಯೂಸ್

ಉಡುಪಿ: ಕಲ್ಲಂಗಡಿ ಹಣ್ಣು ಅಂದರೆ ಎಲ್ಲರಿಗೂ ಬಹಳ ಪ್ರಿಯವಾದ ಹಣ್ಣು.ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣು ಕಾಣ ಸಿಗುವುದು ಕೆಂಪು ಬಣ್ಣದಲ್ಲಿ ಮಾತ್ರ.ಉಡುಪಿ ಜಿಲ್ಲೆಯ ಕೃಷಿಕರಾದ ಹಿರಿಯಡ್ಕದ ಪ್ರಗತಿಪರ ಕೃಷಿಕ ಸುರೇಶ್ ನಾಯಕ್ ಮತ್ತು ಮಟ್ಟುವಿನ ಯಶೋದರ್ ಉಡುಪಿಯಲ್ಲಿ ಮೂರು ವಿಭಿನ್ನ ಬಣ್ಣಗಳು ಸೇರಿದಂತೆ ನಾಲ್ಕು ಕಲರ್ ನ ಕಲ್ಲಂಗಡಿ ಕೃಷಿಯನ್ನು ಮಾಡಿ ಯಶಸ್ವಿಯಾಗಿದ್ದಾರೆ. ಕೃಷಿಕ ಯಶೋದರ್ ಅವರ ಸಾಧನೆ ಮೆಚ್ಚಲೆಬೇಕು. ಹೆಚ್ಚಾಗಿ ಮಟ್ಟು ಪ್ರದೇಶಕ್ಕೆ ಸಮುದ್ರ ಹತ್ತಿರವಾಗಿರುವುದರಿಂದ ಈ ಪ್ರದೇಶವು ಉಪ್ಪಿ...
ಉಡುಪಿಕುಂದಾಪುರಜಿಲ್ಲೆಸುದ್ದಿ

ಸರ್ಕಾರಿ ಜಮೀನಿಗೆ ತಂತಿಬೇಲಿ‌ ಅಳವಡಿಕೆ: ಕಂದಾಯ ಅಧಿಕಾರಿಗಳಿಂದ ತೆರವು-ಕಹಳೆ ನ್ಯೂಸ್

ಕುಂದಾಪುರ: ಆಜ್ರಿ ಗ್ರಾ.ಪಂ‌ ವ್ಯಾಪ್ತಿಯ ಬಾಂಡ್ಯ ಸರಕಾರಿ ಪ್ರಾಥಮಿಕ ಶಾಲೆಯ ಹಿಂಭಾಗ ಖಾಸಗಿ ವ್ಯಕ್ತಿಯೋರ್ವರು ಸರ್ಕಾರಿ ಜಾಗಕ್ಕೆ ತಂತಿಬೇಲಿ ಅಳವಡಿಸಿದ ಬಗ್ಗೆ ಸಾರ್ವಜನಿಕ‌ ದೂರು ಬಂದ‌ ಹಿನ್ನೆಲೆ ವಂಡ್ಸೆ ಹೋಬಳಿ ಕಂದಾಯ ಇಲಾಖೆ ಕಾರ್ಯಚರಣೆ ನಡೆಸಿ ತಂತಿಬೇಲಿಯನ್ನು ತೆರವುಗೊಳಿಸಿ ಜಮೀನನ್ನು ಸರ್ಕಾರದ ಸುಪರ್ದಿಗೆ ಪಡೆದ ಘಟನೆ ಗುರುವಾರ ನಡೆದಿದೆ. ಕಳೆದ ವಾರಗಳ ಹಿಂದೆ ಬಾಂಡ್ಯ ಸರ್ಕಾರಿ ಶಾಲೆಯ ಹಿಂಭಾಗ ಕೊಡ್ಲಾಡಿ ಗ್ರಾಮದ ಸರ್ವೇ ನಂಬರ್ 118/* ರಲ್ಲಿ ಸುಮಾರು 10...
ಉಡುಪಿಜಿಲ್ಲೆಸುದ್ದಿ

ಶ್ರೀರಾಮ ಗೆಳೆಯರ ಬಳಗ (ರಿ.), ಕೋಡಿ ಕನ್ಯಾಣ ಇವರ ತೃತೀಯ ವರ್ಷದ ರಾಮ ಪರ್ವದ ಪ್ರಯುಕ್ತ ವಿದ್ಯಾರ್ಥಿ ವೇತನ ವಿತರಣೆ-ಕಹಳೆ ನ್ಯೂಸ್

ಉಡುಪಿ :ಶ್ರೀರಾಮ ಗೆಳೆಯರ ಬಳಗ (ರಿ.), ಕೋಡಿ ಕನ್ಯಾಣ ಇವರ ತೃತೀಯ ವರ್ಷದ ರಾಮ ಪರ್ವದ ಪ್ರಯುಕ್ತ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬ್ರಹ್ಮಾವರ ಮತ್ತು ಕುಂದಾಪುರ ತಾಲೂಕಿನ ಪ್ರತಿಭಾವಂತ ಎಸ್. ಎಸ್. ಎಲ್. ಸಿ. ಹಾಗೂ ದ್ವಿತೀಯ ಪಿ. ಯು. ಸಿ. ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಟ್ಟು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ವಿದ್ಯಾರ್ಥಿ ವೇತನವನ್ನು ರಿಸಲಾಯಿತು....
ಉಡುಪಿಜಿಲ್ಲೆಸುದ್ದಿ

ಮಾನವಿಯತೆಗೆ ಆದರ್ಶವಾದ ಉಡುಪಿ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕರು ಅದ ಡಾ.ಚಂದ್ರಶೇಖರ್-ಕಹಳೆ ನ್ಯೂಸ್

ಉಡುಪಿ: ಎರಡು ದಿನಗಳ ಹಿಂದೆ ಕಟಫಾಡಿಯಲ್ಲಿ ರಿಕ್ಷಾ ಚಲಾಯಿಸುವ ವ್ಯಕ್ತಿಗೆ ಮಧ್ಯರಾತ್ರಿ ತೀವ್ರ ಹೃದಯ ಬೇನೆ ಆಗಿದ್ದು ಉಸಿರಾಟದ ತೊಂದರೆಯಿಂದ ಸಂಕಟ ಪಡುತ್ತಿದ್ದಾಗ ಅವರ ಹೆಂಡತಿ ಉಡುಪಿ ಜಿಲ್ಲೆ ಸರಕಾರಿ ಆಸ್ಪತ್ರೆಗೆ ರಾತ್ರಿ 4ಗಂಟೆ ಸಮಯದಲ್ಲಿ ಹೋದಾಗ ಪರಿಶೀಲನೆ ನಡೆಸಿದ ಡ್ಯೂಟಿ ಡಾಕ್ಟರ್ ಕೂಡಲೇ ಚಿಕಿತ್ಸೆ ನೀಡಬೇಕು,ಈ ಬಗ್ಗೆ ನಮ್ಮಲ್ಲಿ ವ್ಯವಸ್ಥೆ ಇಲ್ಲದೆ ಇರುವ ಕಾರಣ ಬೇರೆ ಆಸ್ಪತ್ರೆ ಗೆ ಹೋಗಬೇಕು ಎಂದಾಗ ಅದೇ ಸಮಯಕ್ಕೆ ಜಿಲ್ಲೆಯ ಸಾವಿರಾರು ಮತ್ತು...
ಉಡುಪಿಜಿಲ್ಲೆಸುದ್ದಿ

ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ -ಕಹಳೆ ನ್ಯೂಸ್

ಉಡುಪಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವ್ಯಕ್ತಿಯೊಬ್ಬರನ್ನು ನಂಬಿಸಿ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ. ಉಮೇಶ್‌ (41) ವಂಚನೆಗೆ ಒಳಗಾದವರು. ಇವರು ಕೆಲಸದ ಬಗ್ಗೆ ತನ್ನ ಸ್ನೇಹಿತನಲ್ಲಿ ವಿಚಾರಿಸಿದ್ದು, ವಾಟ್ಸ್‌ ಆಯಪ್‌ ಮೂಲಕ ಕೆಲಸದ ಪಟ್ಟಿಯನ್ನು ಕಳುಹಿಸಿದ್ದರು. ಅದರಂತೆ ವಿದೇಶದಲ್ಲಿ ಒಳ್ಳೆಯ ಉದ್ಯೋಗ ನೀಡುವುದಾಗಿ ವಂಚಕ ನಂಬಿಸಿದ್ದ. ಇದಕ್ಕಾಗಿ 2,32,060 ರೂ. ಹಣವನ್ನು ತೆಗೆದುಕೊಂಡಿದ್ದ. ಮಾ. 20ರಂದು ವಿದೇಶಕ್ಕೆ ತೆರಳಲು ಮುಂಬಯಿಗೆ ಹೋಗಿ ಅಪರಿಚಿತ ವ್ಯಕ್ತಿಗಳ ನಂಬರ್‌ಗೆ ಕರೆ ಮಾಡಿದ್ದು,...
1 26 27 28 29 30 120
Page 28 of 120