Monday, April 27, 2026

ಉಡುಪಿ

ಉಡುಪಿಜಿಲ್ಲೆಸುದ್ದಿ

ಗುರುವೆಂದರೆ ಗುರಿ,ಗುರು ಎಂದರೆ ಸನ್ಮಾರ್ಗ ,ಮುಗ್ಧ ಬಳ್ಳಿ ಗಳoತಿರುವ ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಮಹಾನ್ ಸಾಧಕ; ಪಾಂಗಳ ರಾಜೇಶ್ ರಾವ್ -ಕಹಳೆ ನ್ಯೂಸ್

ಉಡುಪಿ:ಗುರುವೆಂದರೆ ಗುರಿ,ಗುರು ಎಂದರೆ ಸನ್ಮಾರ್ಗ ,ಮುಗ್ಧ ಬಳ್ಳಿ ಗಳ oತಿರುವ ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಮಹಾನ್ ಸಾಧಕ ,ಆದ್ದರಿಂದ ಗುರು ಉಪಮತೀತ ಪಾಂಗ ಳ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ 32ವರ್ಷಗಳ ಕಾಲ ಸೇವೆ ಸಲ್ಲಿಸಿ ಗೌರವ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪಾಂಗಳ ರಾಜೇಶ್ ರಾವ್ ನುಡಿದರು. ಮಕ್ಕಳ ಭವಿಷ್ಯದ ಚಿಂತನೆಯೊಂದಿಗೆ ಜಗತ್ತಿಗೆ ಅನೇಕ ಕೊಡುಗೆಗಳನ್ನು ನೀಡುವ ಗುರುವಿನ ಪಾತ್ರಕ್ಕೆ ಸಮಾನಾದ ಕೆಲಸ ಬೇರೊಂದಿಲ್ಲ.ಕಾಣುವ ಸಾಧನೆ ಗಳು, ಮುಟ್ಟುವ ಗುರಿಯ...
ಉಡುಪಿಜಿಲ್ಲೆಸುದ್ದಿಹೆಚ್ಚಿನ ಸುದ್ದಿ

ಉಡುಪಿಯಲ್ಲಿ ಮಳೆಯ ನಡುವೆಯೂ ನಡೆಯಿತು ದೈವದ ನೇಮ -ಕಹಳೆ ನ್ಯೂಸ್

ಉಡುಪಿ : ಸುಡುಬಿಸಿಲಿನಿಂದ ಕಂಗೆಟ್ಟಿರುವ ಕರಾವಳಿಯಲ್ಲಿ ವರುಣಾಗಮನ ತಂಪೆರೆದಿದೆ. ಆದರೆ, ದಿಢೀರ್ ಆಗಿ ಸುರಿಯುವ ಮಳೆಯಿಂದಾಗಿ ಹಲವೆಡೆ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಪ್ರಮುಖವಾಗಿ ಜಾತ್ರೋತ್ಸವಗಳು ನಡೆಯುತ್ತಿರುವ ಊರುಗಳಲ್ಲಿ ಮಳೆಯಿಂದಾಗಿ ದೇವರ ಉತ್ಸವಕ್ಕೆ ಮಳೆ ಅಡ್ಡಿ ಪಡಿಸಿದ್ರೆ, ಜಾತ್ರೆಯ ವ್ಯಾಪಾರಿಗಳು ಪರದಾಡುವಂತೆ ಮಾಡಿದೆ. ಇದೀಗ ಅಂತಹುದೇ ಒಂದು ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ನಡೆದಿದೆ. ದೈವದ ನೇಮವೊಂದಕ್ಕೆ ಮಳೆ ವಿಘ್ನ ತಂದೊಡ್ಡಿದೆ. ಸಾಮಾನ್ಯವಾಗಿ ಮಳೆ ಸಂಜೆ ಸುರಿಯುತ್ತಿದ್ದಾದ್ರೂ ಇಂದು ಮುಂಜಾನೆಯೇ ಎಂಟ್ರಿ ಕೊಟ್ಟಿದ್ದಾನೆ....
ಉಡುಪಿಸುದ್ದಿ

ಮಣಿಪಾಲ : ವಿಷುಕಣಿ-ಕವಿದನಿ” ಬಹು ಭಾಷಾ ಕವಿಗೋಷ್ಠಿ ಸಂಪನ್ನ-ಕಹಳೆ ನ್ಯೂಸ್

ರೇಡಿಯೊ ಮಣಿಪಾಲ್ 90.4 MHz ಸಮುದಾಯ ಬಾನುಲಿ ಕೇಂದ್ರ, ಮಣಿಪಾಲ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗ ದೊಂದಿಗೆ "ವಿಷುಕಣಿ-ಕವಿದನಿ" ಬಹು ಭಾಷಾ ಕವಿಗೋಷ್ಠಿ ಮಾ.10 ಗುರುವಾರ ರೇಡಿಯೊ ಮಣಿಪಾಲ್, ಎಂ.ಐ.ಸಿ ಕ್ಯಾಂಪಸ್ ಮಣಿಪಾಲದಲ್ಲಿ ನಡೆಯಿತು. ಸಭಾ ಕ್ರಾಯಕ್ರಮ ಉದ್ಘಾಟನೆಯನ್ನು ಡಾ. ಶುಭ ಹೆಚ್. ಎಸ್‌. ನಿರ್ದೇಶಕರು, ಮಣಿಪಾಲ್ ಇನ್ಸಿಟ್ಯೂಟ್ ಆಫ್ ಕಮ್ಯುನಿಕೇಶನ್ ಮಾಹೆ ಮಣಿಪಾಲ ಇವರು ನೆರವೇರಿಸಿ ಮಾತನಾಡಿ, ಕವನಗಳಿಗೆ ಭಾವನೆಗಳನ್ನು ಮುಕ್ತವಾಗಿ...
ಉಡುಪಿಜಿಲ್ಲೆಮೂಡಬಿದಿರೆಸುದ್ದಿ

ಎಕ್ಸಲೆ೦ಟ್ ಮುಡುಬಿದಿರೆಯಲ್ಲಿ ಮಹಾವೀರ ಜಯ೦ತಿ ಆಚರಣೆ ; ನೇರ೦ಕಿ ಪಾರ್ಶ್ವನಾಥ ಅವರಿಗೆ ವಿಶೇಷ ಗೌರವ ಪುರಸ್ಕಾರ-ಕಹಳೆ ನ್ಯೂಸ್

ಮೂಡುಬಿದಿರೆ: ಜೈನ್ ಪರ೦ಪರೆಯ ೨೪ ನೇ ತೀರ್ಥ೦ಕರರಾದ ಶ್ರೀ ಮಹಾವೀರ ಜನ್ಮ ಕಲ್ಯಾಣದ ಪ್ರಯುಕ್ತ ಎಕ್ಸಲೆ೦ಟ್ ಮೂಡುಬಿದಿರೆಯಲ್ಲಿ ನಡೆದ ಮಹಾವೀರ ಜಯ೦ತಿ ಕಾರ್ಯಕ್ರಮದಲ್ಲಿ ರಾಜ್ಯದ ನೂರಕ್ಕೂ ಹೆಚ್ಚು ಜಿನಮ೦ದಿರಗಳ ಸಚಿತ್ರ ದಾಖಲೀಕರಣ, ಚ೦ದನ ಟಿವಿ, ರತ್ನತ್ರಯ ಟಿವಿ ಚಾನಲ್‌ಗಳ ಮೂಲಕ ಜೀವನದರ್ಶನ ಕಾರ್ಯಕ್ರಮ, ಬಸದಿಗಳ ಸಾಕ್ಷ್ಯಚಿತ್ರ ಪ್ರದರ್ಶನ, ಕರ್ನಾಟಕ ಭಗವಾನ ಶ್ರೀ ಬಾಹುಬಲಿ ವೈಭವ ಶೀರ್ಷಿಕೆಯಲ್ಲಿ ಗೊಮ್ಮಟೇಶ್ವರ ಪ್ರತಿಮೆಗಳ ಪೋಸ್ಟಲ್ ಕಾರ್ಡ್ ಬಿಡುಗಡೆ, ನೇರ೦ಕಿ ಯೂಟ್ಯೂಬ್ ವಾಹಿನಿ ಹಾಗೂ ನೇರ೦ಕಿ...
ಉಡುಪಿಜಿಲ್ಲೆಸುದ್ದಿ

ಮನೆಬಿಟ್ಟು ಬಂದ ಹೈದರಾಬಾದ್ ಯುವತಿಯ ರಕ್ಷಣೆ -ಕಹಳೆ ನ್ಯೂಸ್

ಉಡುಪಿ‌ ನಗರದ ಕರಾವಳಿ ಬೈಪಾಸ್ ಬಳಿ ನನಗೆ ಯಾರೂ ತೊಂದರೆ ಕೊಡಬೇಡಿ ನನಗೆ ಹೆದರಿಕೆ ಆಗುತ್ತಿದೆ ಎಂದು ರೋದಿಸುತ್ತಿದ್ದ ಯುವತಿಯೊಬ್ಬಳನ್ನು ವಿಶುಶೆಟ್ಟಿಯವರು ರಕ್ಷಿಸಿ ಸಖಿ ಸೆಂಟರಿಗೆ ದಾಖಲಿಸಿದ್ದಾರೆ. ಯುವತಿಯ ಹೆಸರು ಸೌಮ್ಯ (19 ವರ್ಷ) ಹೈದರಾಬಾದ್ ಮೂಲದವಳೆಂದು ಹೇಳಿದ್ದು, ಮೈಯೆಲ್ಲ ಕೊಳಕ್ಕಾಗಿದ್ದು ರಾತ್ರಿ ರಸ್ತೆ ಬದಿಯಲ್ಲಿಯೇ ಕಳೆದಿರುವ ಬಗ್ಗೆ ಮೇಲ್ನೋಟಕ್ಕೆ ತೋರುತ್ತಿದ್ದು, ಯುವತಿಯು ತಾನು ಹೆದರಿ ಊರು ಬಿಟ್ಟು ಬಂದಿರುತ್ತೇನೆ ಎಂದಿದ್ದಾಳೆ. ರಕ್ಷಣಾ ಸಮಯದಲ್ಲಿ ಬಹಳಷ್ಟು ಹೆದರಿ ಅಳುತ್ತಿದ್ದಳು. ಈ...
ಉಡುಪಿಜಿಲ್ಲೆಸುದ್ದಿಹೆಚ್ಚಿನ ಸುದ್ದಿ

ಉಡುಪಿ ಶ್ರೀಕೃಷ್ಣ ಮಠದ ಮುಂಭಾಗದಲ್ಲಿ ಮತ್ತು ರಥಬೀದಿಯಲ್ಲಿ ಪ್ರಿ ವೆಡ್ಡಿಂಗ್‌ ಫೋಟೋ- ವಿಡಿಯೋ ಚಿತ್ರೀಕರಣ ನಿಷೇಧ -ಕಹಳೆ ನ್ಯೂಸ್

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಮುಂಭಾಗದಲ್ಲಿ ಮತ್ತು ರಥಬೀದಿಯಲ್ಲಿ ಪ್ರಿ ವೆಡ್ಡಿಂಗ್‌ ಫೋಟೋ- ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ. ಪರ್ಯಾಯ ಪುತ್ತಿಗೆ ಮಠದಿಂದ ಈ ಬಗ್ಗೆ ಸೂಚನೆ ನೀಡಲಾಗಿದೆ. ಗುರುವಾರ (ಏ.10) ಈ ಬಗ್ಗೆ ಪ್ರಕಟಣೆ ನೀಡಿರುವ ಮಠದ ವಿದ್ವಾನ್‌ ಗೋಪಾಲ ಆಚಾರ್ಯ ಅವರು, ಯಾವುದೇ ದೇವಸ್ಥಾನದ ರಥಬೀದಿಗೆ ಪಾವಿತ್ರ್ಯತೆ,‌ ಅದರದೇ ಆದ ನಿಯಮ ಇರುತ್ತದೆ. ಭಕ್ತರು ಅದನ್ನು ಶೃದ್ಧೆಯ ತಾಣವಾಗಿ ಗೌರವಿಸುತ್ತಾರೆ. ಅಲ್ಲಿ ಉತ್ಸವ ನಡೆಯುತ್ತದೆ. ಹೀಗಾಗಿ ಅದು...
ಉಡುಪಿಶಿಕ್ಷಣಸುದ್ದಿ

ಕಾರ್ಕಳ ಶಾಸಕ ಸುನೀಲ್ ಕುಮಾರ್ ಪುತ್ರಿ ಪ್ರೇರಣಾಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.97 ಅಂಕ ; ಶಹಬ್ಬಾಸ್ ಮಗಳೇ.. ಎಂದ ಸುನಿಲ್..!- ಕಹಳೆ ನ್ಯೂಸ್

ಉಡುಪಿ: ಕಾರ್ಕಳದ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರ ಮಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡ 97 ಅಂಕದೊಂದಿಗೆ ಪಾಸಾಗಿದ್ದಾರೆ. ಈ ವಿಚಾರವನ್ನು ಸುನೀಲ್ ಕುಮಾರ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಮಗಳ ಸಾಧನೆಯ ಬಗ್ಗೆ ವಿವರವಾಗಿ ಬರೆದುಕೊಂಡ ಸುನೀಲ್ ಕುಮಾರ್ ಕೊನೆಯಲ್ಲಿ ಪುಸ್ತಕದ ಪಾಠದಷ್ಟೇ ಜೀವನ ಪಾಠ ಕೂಡಾ ಮುಕ್ಯವಾಗಿದ್ದು, ಆ ಸವಾಲನ್ನು ಅರ್ಥ ಮಾಡಿಕೊಳ್ಳೂವುದು ನಿಜವಾದ ಭವಿಷ್ಯ ಎಂದು ಸಲಹೆ ನೀಡಿದ್ದಾರೆ....
ಉಡುಪಿಜಿಲ್ಲೆಸುದ್ದಿ

ಉಡುಪಿ: ಮದುವೆ ನಿಶ್ಚಯವಾಗಿದ್ದ ಯುವಕ ನಾಪತ್ತೆ-ಕಹಳೆ ನ್ಯೂಸ್

ಉಡುಪಿ: ಮದುವೆ ನಿಶ್ಚಯವಾದ ಹಿನ್ನೆಲೆ, ಮದುವೆ ತಯಾರಿ ಮಾಡಿಕೊಳ್ಳುವ ಸಲುವಾಗಿ ಉಡುಪಿಯಿಂದ ತನ್ನ ಸ್ವಂತ ಊರಿಗೆ ಹೋಗುವುದಾಗಿ ತಿಳಿಸಿ ಹೋದ ಯುವಕನೋರ್ವ ಈವರೆಗೂ ಊರಿಗೂ ಹೋಗದೆ, ಕೆಲಸದ ಸ್ಥಳಕ್ಕೂ ಬಾರದೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ನಾಪತ್ತೆಯಾದ ಯುವಕ ನಗರದ ಬಿಲ್ಡಿಂಗ್ ಒಂದರಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ದೀಪಕ್ ನಿಶಾದ್ (26) ಎಂದು ತಿಳಿದು ಬಂದಿದೆ. ಹಿಂದಿ ಹಾಗೂ ಭೋಜ್‌ಪುರಿ ಭಾಷೆ ಮಾತನಾಡುತ್ತಾರೆ. ಅವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್‌...
1 24 25 26 27 28 120
Page 26 of 120