ಭಯೋತ್ಪಾದಕರ ಮೂಲ ನೆಲಕ್ಕೆ ನುಗ್ಗಿ ಉಗ್ರ ಸಂಹಾರಕ್ಕೆ ಭಾರತದ ಸಿಂಧೂರ ಅಸ್ತ್ರ : ಶ್ರೀನಿಧಿ ಹೆಗ್ಡೆ-ಕಹಳೆ ನ್ಯೂಸ್
ಉಡುಪಿ :ರಾಷ್ಟ್ರದ ಮುಕಟ ಮಣಿ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಅಮಾನುಷ ರೀತಿಯಲ್ಲಿ ದಾಳಿ ನಡೆಸಿದ ಪಾಕಿಸ್ತಾನ ಪೋಷಿತ ಉಗ್ರರ ನೆಲೆಗಳನ್ನು ನಿಖರವಾಗಿ ಗುರುತಿಸಿ ಹೊಡೆದು ನೂರಾರು ಭಯೋತ್ಪಾದಕರನ್ನು ಸಂಹಾರ ಮಾಡಿದ ನಮ್ಮ ಹೆಮ್ಮೆಯ ಪರಾಕ್ರಮ ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಬಿಜೆಪಿ ಉಡುಪಿ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ತಿಳಿಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ ಮಾತ್ರ ಅಲ್ಲ ಭಾರತದ ಸುದ್ದಿಗೆ ಹಾಗೂ ಭಾರತೀಯ ನಾಗರಿಕರ ತಂಟೆಗೆ ಬಂದಲ್ಲಿ ಪಾಕಿಸ್ತಾನದೊಳಗೆ ನುಗ್ಗಿ...






