ಶ್ರೀಕೃಷ್ಣಮಠದಲ್ಲಿ ಕೈಮಗ್ಗದ ಸೀರೆ ಉಟ್ಟ ನಾಗಕನ್ನಿಕೆ, ಗ್ಯಾಸ್ಲೈಟ್ ಬೆಳಕಿನಲ್ಲಿ ನಡೆದ ನಾಗಮಂಡಲೋತ್ಸವ – ಕಹಳೆ ನ್ಯೂಸ್
ಉಡುಪಿ: ಶ್ರೀಕೃಷ್ಣಮಠದಲ್ಲಿ ಪ್ರತಿ ಪರ್ಯಾಯದಲ್ಲಿ ನಡೆಯುವ ನಾಗಮಂಡಲವು ಶುಕ್ರವಾರ ನಡೆದಿದೆ. ನಿನ್ನೆ ನಡೆದ ನಾಗಮಂಡಲವು ಹಲವು ವಿಶಿಷ್ಟತೆಯಿಂದ ಕೂಡಿತ್ತು. ಸುಮಾರು 40-50 ವರ್ಷಗಳ ಹಿಂದಿನ ನಾಗಮಂಡಲೋತ್ಸವದ ಕ್ಷಣಗಳು ಇಲ್ಲಿ ಮತ್ತೆ ನೋಡಲು ಸಿಕ್ಕಿದೆ. ನಾಗಕನ್ನಿಕೆ ಕೈಮಗ್ಗದ ಸೀರೆ ಉಟ್ಟು ನರ್ತನ ಮಾಡಿದರೆ, ಇತ್ತ ಗ್ಯಾಸ್ಲೈಟ್ ಬೆಳಕಿನಲ್ಲೆ ಸಂಪೂರ್ಣ ನಾಗಮಂಡಲೋತ್ಸವ ನಡೆದಿದ್ದು ವಿಶೇಷವಾಗಿತ್ತು. ನಾಗಕನ್ನಿಕೆಯ ಪಾತ್ರ ವಹಿಸಿದ ಡಮರು ಕಲಾವಿದ ಮುದ್ದೂರು ನಟರಾಜ ವೈದ್ಯರು ಕೈಮಗ್ಗದ, ನೈಸರ್ಗಿಕ ಬಣ್ಣ ಹಾಕಿದ ಸೀರೆಯನ್ನು...







