ಡಿ.10ರಂದು ಮಂಗಳೂರಿನ ಪುರಭವನದಲ್ಲಿ ತುಳು ರಂಗಭೂಮಿಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕ್ಷುದ್ರ ಶಕ್ತಿಯೊಂದರ ಭಯಾನಕ ಕಥೆ ‘ಬ್ರಹ್ಮರಕ್ಕಸ’ ವಿನೂತನ ನಾಟಕ -ಕಹಳೆ ನ್ಯೂಸ್
ಮಂಗಳೂರು : ತುಳು ರಂಗಭೂಮಿಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕ್ಷುದ್ರ ಶಕ್ತಿಯೊಂದರ ಭಯಾನಕ ಕಥೆ ಅನಾವರಣಗೊಳ್ಳಲಿದೆ. ತ್ರಿನೇತ್ರ ಕಲಾವಿದರು ಕುಡ್ಲ ಅಭಿನಯಿಸುವ 'ಬ್ರಹ್ಮರಕ್ಕಸ' ವಿನೂತನ ನಾಟಕ ಜನಮನ ರಂಜಿಸಲು ಬರುತ್ತಿದೆ. ಅದ್ದೂರಿ ರಂಗ ವಿನ್ಯಾಸದ ಎಲ್ಇಡಿ ಹೊಸ ತಂತ್ರಜ್ಞಾನದ ತುಳು ನಾಟಕ ಇದಾಗಿದ್ದು, ಡಿಸೆಂಬರ್ 10 ರಂದು ಬುಧವಾರ 6 ಗಂಟೆಗೆ ಮಂಗಳೂರು ಪುರಭವನದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕಕ್ಕೆ ನರೇಶ್ ಕುಮಾರ್ ಸಸಿಹಿತ್ತು ಕಥೆ, ಸಂಭಾಷಣೆ, ಸಾಹಿತ್ಯ, ಪರಿಕಲ್ಪನೆ,...






