Saturday, June 20, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಭಾರತ್ ಬಂದ್ : ಮಂಗಳೂರಿಗೆ ತಟ್ಟದ ಬಂದ್ ಬಿಸಿ, ವಾಹನ ಸಂಚಾರ ಎಂದಿನಂತೆ – ಕಹಳೆ ನ್ಯೂಸ್

ಮಂಗಳೂರು: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಬಿಸಿ ಮಂಗಳೂರು ನಗರಕ್ಕೆ ತಟ್ಟಿಲ್ಲ. ಮಂಗಳೂರಿನಲ್ಲಿ ಎಂದಿನಂತೆ ಕಾರ್ಯ ನಿರ್ವಹಿಸಲಾಗುತ್ತಿದೆ. ಮಂಗಳವಾರ ಬೆಳಗ್ಗಿನಿಂದಲೇ ಕೆಎಸ್‌ಆರ್ ಟಿಸಿ, ಸಿಟಿ ಮತ್ತು ಖಾಸಗಿ ಬಸ್ ಗಳು ಎಂದಿನಂತೆ ಸಂಚರಿಸುತ್ತಿದೆ. ಉಳಿದಂತೆ ಆಟೋ ರಿಕ್ಷಾಗಳ ಒಡಾಟವೂ ಇದ್ದು, ಹೋಟೆಲ್ ಗಳು, ಅಂಗಡಿಗಳು ಗ್ರಾಹಕರ ಸೇವೆಗೆ ತೆರೆದಿದೆ. ಇಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ನಂತೂರಿನಲ್ಲಿ ವಿವಿಧ...
ಹೆಚ್ಚಿನ ಸುದ್ದಿ

ಕೇಪು ಶ್ರೀ ಉಳ್ಳಾಲ್ತಿ ದೇವರ ಡಿಸೆಂಬರ್ 16ರಂದು ವಾರ್ಷಿಕ ಕಜಂಬು ಜಾತ್ರೋತ್ಸವ-ಕಹಳೆ ನ್ಯೂಸ್

ವಿಟ್ಲ: ಕೇಪು ಶ್ರೀ ಉಳ್ಳಾಲ್ತಿ ದೇವರ ವಾರ್ಷಿಕ ಕಜಂಬು ಜಾತ್ರೋತ್ಸವ ಡಿ.16ರಂದು ನಡೆಯಲಿದೆ, ಪ್ರಾರಂಭದ ಪ್ರಕ್ರಿಯೆ 'ಆಗಿನೆ ಆಪುನೆ' ಅಂದರೆ ಆಜ್ಞೆ ಆಗುವುದು ವಿಟ್ಲ ಅರಮನೆಯಲ್ಲಿ ಪರಂಪರಾಗತ ಕ್ರಿಯಾವಿಧಿಗಳೊಂದಿಗೆ ಭಾನುವಾರ ನಡೆದಿದೆ. ಹಾಗೆಯೇ ಡೊಂಬ ಹೆಗ್ಗಡೆ ಅರಸು ಮನೆತನದ ದಿ.ರವಿವರ್ಮ ನರಸಿಂಹ ರಾಜರ ಪುತ್ರ ಮತ್ತು ಸ್ವೀಕೃತ ಉತ್ತರಾಧಿಕಾರಿ ದಿ.ಆದಿತ್ಯ ವರ್ಮ ರಾಜರ ಪುತ್ರ ಬಂಗಾರು ಅರಸರು ಅನುವಂಶಿಕ ಮೊಕ್ತೇಸರರಾಗಿ ವಿಧಿ ವಿಧಾನಗಳನ್ನು ನೆರವೇರಿಸಿದರು. ಮತ್ತು ದಿ. ರಾಮವರ್ಮ ರಾಜರ...
ಹೆಚ್ಚಿನ ಸುದ್ದಿ

‘ನಟಿ ಸಂಜನಾ’ ಆರೋಗ್ಯ ತಪಾಸಣೆಗೆ ‘ಹೈಕೋರ್ಟ್’ ಆದೇಶ – ಕಹಳೆ ನ್ಯೂಸ್

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿರುವಂತ ನಟಿ ಸಂಜನಾ, ಅನಾರೋಗ್ಯದ ಹಿನ್ನಲೆಯಲ್ಲಿ ಜಾಮೀನು ನೀಡುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿರುವಂತ ನ್ಯಾಯಪೀಠವು, ನಟಿ ಸಂಜನಾ ಆರೋಗ್ಯ ತಪಾಸಣೆ ಮಾಡಿ, ವರದಿ ಸಲ್ಲಿಸಲು ಆದೇಶಿಸಿದೆ. ಇಂದು ನಟಿ ಸಂಜನಾ ಅನಾರೋಗ್ಯದ ಹಿನ್ನಲೆಯಲ್ಲಿ ಜಾಮೀನು ಕೋರಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು. ಇಂತಹ ಅರ್ಜಿಯ...
ಹೆಚ್ಚಿನ ಸುದ್ದಿ

ನಾಳೆಯ `ಭಾರತ್ ಬಂದ್’ ಗೆ ಖಾಸಗಿ ಶಾಲೆಗಳ ಬೆಂಬಲ : ಆನ್ ಲೈನ್ ಕ್ಲಾಸ್ ಸ್ಥಗಿತ – ಕಹಳೆ ನ್ಯೂಸ್

ಬೆಂಗಳೂರು : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ರೈತ ಸಂಘಟನೆಗಳು ಡಿಸೆಂಬರ್ 8 ರ ನಾಳೆಯ ಭಾರತ್ ಬಂದ್ ಗೆ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟ ಬೆಂಬಲ ನೀಡಿದ್ದು, ನಾಳೆ ಆನ್ ಲೈನ್ ಕ್ಲಾಸ್ ನಡೆಯುವುದಿಲ್ಲ. ರಾಜ್ಯದಲ್ಲೂ ಹಸಿರು ಸೇನೆ, ರಾಜ್ಯ ರೈತ ಸಂಘ ಸೇರಿದಂತೆ ಹಲವು ರೈತ ಸಂಘಟನೆಗಳು ಭಾರತ್ ಬಂದ್ ಗೆ ಬೆಂಬಲ ಸೂಚಿಸಿವೆ. ಈ ನಡುವೆ ನಾಳಿನ ಬಂದ್ ಗೆ ಖಾಸಗಿ...
ಹೆಚ್ಚಿನ ಸುದ್ದಿ

ನಾಳೆ ಕರ್ನಾಟಕ ಬಂದ್‌ : ಭಾರತ ಬಂದ್‌ಗೆ ಪೂರಕವಾಗಿ ನಿರ್ಧಾರ – ಕಹಳೆ ನ್ಯೂಸ್

ಬೆಂಗಳೂರು : ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಂಗಳವಾರ ನಡೆಯಲಿರುವ ಭಾರತ ಬಂದ್‌ಗೆ ಕರ್ನಾಟಕದಲ್ಲೂ ಬೆಂಬಲ ವ್ಯಕ್ತವಾಗಿದೆ. ರಾಜ್ಯದಲ್ಲಿಯೂ ರೈತ ಸಂಘಟನೆಗಳು ಬಂದ್‌ ನಡೆಸಲಿವೆ. ದೇಶದ ಒಟ್ಟು 40 ರೈತ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದು, ಕಾಂಗ್ರೆಸ್‌, ಟಿಎಂಸಿ, ಟಿಆರ್‌ಎಸ್‌, ಆಪ್‌ ಸಹಿತ 8 ವಿಪಕ್ಷಗಳು ಬೆಂಬಲ ನೀಡಿವೆ. ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರಬೂರು ಶಾಂತಕುಮಾರ್‌, ರಾಜ್ಯ ರೈತ...
ಹೆಚ್ಚಿನ ಸುದ್ದಿ

ನಾಳೆ ಘೋಷಣೆಯಾಗಲಿದೆ `ಮೌಂಟ್ ಎವರೆಸ್ಟ್’ ಶಿಖರದ ಪರಿಷ್ಕೃತ ಎತ್ತರ! – ಕಹಳೆ ನ್ಯೂಸ್

ನವದೆಹಲಿ : ನೇಪಾಳ ಸರ್ಕಾರವು ವಿಶ್ವದ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ ಎತ್ತರದ ಕುರಿತು ನಾಳೆ ನೇಪಾಳ ಸರ್ಕಾರ ಘೋಷಣೆ ಮಾಡಲಿದೆ. ವಿಶ್ವದ ಅತಿ ಎತ್ತರದ ಶಿಖರದ ಅಳತೆಗೆ ಸಂಬಂಧಿಸಿದ ದತ್ತಾಂಶಗಳನ್ನು ಸಂಸ್ಕರಿಸುವ ಒಂದು ವರ್ಷದ ವರೆಗೆ ಕೆಲಸ ಮಾಡಿದ ನಂತರ, ಹೊಸದಾಗಿ ಮೌಂಟ್ ಎವರೆಸ್ಟ್ ನ ಎತ್ತರವನ್ನು ನೇಪಾಳ ಮಂಗಳವಾರ ಘೋಷಿಸಲಿದೆ. ಭಾನುವಾರ ಎಲ್ಲ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಪ್ರತಿನಿಧಿಗಳಿಗೆ ಆಹ್ವಾನ ಪತ್ರಿಕೆ ರವಾನಿಸಿದ ಸರ್ವೇ...
ಹೆಚ್ಚಿನ ಸುದ್ದಿ

2021ರ ಮಾರ್ಚ್ 31ರವರೆಗೂ 1 ರಿಂದ 8ನೇ ತರಗತಿ ಬಂದ್: ಈ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ – ಕಹಳೆ ನ್ಯೂಸ್

ಮಧ್ಯಪ್ರದೇಶ: ಕೋವಿಡ್ -19 ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, 1 ರಿಂದ 8ನೇ ತರಗತಿಯವರೆಗಿನ ಶಾಲೆಗಳನ್ನು 2021ರ ಮಾರ್ಚ್ 31 ರವರೆಗೂ ತೆರೆಯುವುದಿಲ್ಲ ಎಂದು ತಿಳಿಸಿದ್ದಾರೆ. ಮಾತ್ರವಲ್ಲದೆ 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಪರೀಕ್ಷೆಗಳನ್ನು ಎದುರಿಸಬೇಕಾಗಿಲ್ಲ. ಪ್ರೊಜೆಕ್ಟ್ ವರ್ಕ್ ಗಳ ಆಧಾರದ ಮೇಲೆ ಮೌಲ್ಯಮಾಪನ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಶಾಲಾ ಆಡಳಿತ ಮಂಡಳಿಯೊಂದಿಗಿನ ಸಭೆಯ ಬಳಿಕ...
ಹೆಚ್ಚಿನ ಸುದ್ದಿ

ಡಿಸೆಂಬರ್ 7ರಂದು ಸಿಟಿ ರೈಡ್ ಮೋಟರ್ ಶೋ ರೂಂ ಶುಭಾರಂಭ – ಕಹಳೆ ನ್ಯೂಸ್

ಕಾರ್ಕಳ : ಇಲೆಕ್ಟ್ರಿಕ್ ದ್ವಿಚಕ್ರ ವಾಹನದ ಶೋ ರೂಂ ಆದ ಸಿಟಿ ರೈಡ್ ಮೋಟರ್ ಡಿಸೆಂಬರ್ 7ರಂದು ಶುಭರಾಂಭಗೊಳ್ಳಲಿದೆ. ಕಾರ್ಕಳ ಆನೆಕೆರೆ ಬೈಪಾಸ್ ರೋಡ್‍ನಲ್ಲಿ ಇರುವ ಚೇತನ ಸ್ಪೆಷಲ್ ಸ್ಕೂಲ್‍ನ ಎದುರುಗಡೆ ಇರುವ ಲಕ್ಷ್ಮೀ ಕಾಂಪ್ಲೆಸ್‍ನಲ್ಲಿ ಸಿಟಿ ರೈಡ್ ಮೋಟರ್ ಅದ್ದೂರಿ ಶುಭಾರಂಭಗೊಳ್ಳಲಿದೆ. ಇಲೆಕ್ಟ್ರಿಕ್ ದ್ವಿಚಕ್ರ ವಾಹನದಿಂದ ವಾಯುಮಾಲಿನ್ಯ ಆಗುವುದನ್ನು ತಡೆಯ ಬಹುದು. ಇನ್ನೂ ಇಲೆಕ್ಟ್ರಿಕ್ ದ್ವಿಚಕ್ರ ವಾಹನದಲ್ಲಿ 20 ಪೈಸೆ ಪರ್ ಕಿಲೋ ಮೀಟರ್‍ನಷ್ಟು ಖರ್ಚಾಗುತ್ತದೆ. ಆರಾಮದಾಯಕ ಡ್ರೈವಿಂಗ್‍ನ್ನು...
1 136 137 138 139 140 174
Page 138 of 174