Saturday, June 20, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಬಂಟ್ವಾಳ ತಹಸೀಲ್ದಾರ್ ಆಗಿ ಮತ್ತೆ ಅಧಿಕಾರ ಸ್ವೀಕರಿಸಿದ ತಹಸೀಲ್ದಾರ್ ರಶ್ಮಿ.ಎಸ್.ಆರ್,-ಕಹಳೆ ನ್ಯೂಸ್

ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಪ್ರಕ್ರಿಯೆಗಳು ಮುಗಿಯುವವರೆಗೆ ಕಾಪುವಿಗೆ ವರ್ಗಾವಣೆಗೊಂಡಿದ್ದ ರಶ್ಮಿ.ಎಸ್.ಆರ್, ಅವರು ಮತ್ತೆ ಬಂಟ್ವಾಳ ತಹಸೀಲ್ದಾರ್ ಆಗಿ ಗುರುವಾರ ಅಧಿಕಾರವನ್ನು ಸ್ವೀಕರಿಸಿದರು. ಚುನಾವಣಾ ಸಂದರ್ಭದಲ್ಲಿ ಕರ್ತವ್ಯ ಸಲ್ಲಿಸಿದ್ದ ತಹಸೀಲ್ದಾರ್ ಅನಿತಾಲಕ್ಷ್ಮೀ ಅವರನ್ನು ಬೀಳ್ಕೊಡಲಾಯಿತು. ಸಹಾಯಕ ಕಮೀಷನರ್ ಮದನ್ ಮೋಹನ್ ಹಾಗೂ ತಾಲೂಕು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು....
ಹೆಚ್ಚಿನ ಸುದ್ದಿ

ಕೊಯಿಲ ಮತ್ತು ರಾಮಕುಂಜ ಗ್ರಾಮ ವ್ಯಾಪ್ತಿಯ ಲೋ ವೋಲ್ಟೇಜ್ ಸಮಸ್ಯೆ ಬಗೆಹರಿಸುವಂತೆ ಪುತ್ತೂರು ಮೆಸ್ಕಾಂ ಇಲಾಖೆಗೆ ಎಸ್ಡಿಪಿಐ ಮನವಿ ಸಲ್ಲಿಕೆ-ಕಹಳೆ ನ್ಯೂಸ್

ರಾಮಕುಂಜ: ಕೊಯಿಲ ಮತ್ತು ರಾಮಕುಂಜ ಗ್ರಾಮ ವ್ಯಾಪ್ತಿಯ ಹಲವಾರು ಪ್ರದೇಶಗಳಿಗೆ ಲೋ ವೋಲ್ಟೇಜ್ ಸಮಸ್ಯೆ ಉದ್ಭವಿಸಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವಂತೆ ಪುತ್ತೂರು ಮೆಸ್ಕಾಂ ಇಲಾಖೆಗೆ ಎಸ್ಡಿಪಿಐ ಆತೂರು ವಲಯದ ವತಿಯಿಂದ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್ಡಿಪಿಐ ಮುಂದಾಳು, ಗ್ರಾಮ ಪಂಚಾಯತ್ ಸದಸ್ಯ ಹಸನ್ ಸಜ್ಜಾದ್ ಅವರು, ಲೋ ವೋಲ್ಟೇಜ್ ಸಮಸ್ಯೆಯಿಂದಾಗಿ ಮನೆಯ ವಿದ್ಯುತ್ ಉಪಕರಣ ಸೇರಿದಂತೆ, ಕೃಷಿಯನ್ನೇ ಅವಲಂಬಿತರಾದ ರೈತರಿಗೆ ಪಂಪ್ ಸೆಟ್ ಮೂಲಕ ತೋಟಕ್ಕೆ ನೀರು ಹಾಯಿಸಲು...
ಹೆಚ್ಚಿನ ಸುದ್ದಿ

ಸುಬ್ರಹ್ಮಣ್ಯದಲ್ಲಿ ಉದ್ಯಮಿಯಾಗಿರುವ ಆರ್ಯಭಟ ಪ್ರಶಸ್ತಿ ಪುರಸ್ಕೃತ ಜೇಸಿ ರವಿ ಕಕ್ಕೆಪದವುರವರಿಗೆ ಲಭಿಸಿತು 2020ರ ಸಾಲಿನ ಜೇಸಿರತ್ನ ಪುರಸ್ಕಾರ-ಕಹಳೆ ನ್ಯೂಸ್

ಸುಬ್ರಹ್ಮಣ್ಯದಲ್ಲಿ ಉದ್ಯಮಿಯಾಗಿರುವ ಆರ್ಯಭಟ ಪ್ರಶಸ್ತಿ ಪುರಸ್ಕೃತ ಜೇಸಿ ರವಿ ಕಕ್ಕೆಪದವುರವರಿಗೆ 2020ರ ಸಾಲಿನ ಜೇಸಿರತ್ನ ಪುರಸ್ಕಾರ ಲಭಿಸಿದೆ. ಅದಲ್ಲದೇ ಇವರು ಸುಬ್ರಹ್ಮಣ್ಯದಲ್ಲಿ ಉದ್ಯಮಿಯಾಗಿರುವ ಶ್ರೀಯುತರು ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ, ಕಲಿಕಾ ಸಾಮಗ್ರಿ ವಿತರಣೆ, ಆಶಕ್ತರಿಗೆ ಆರ್ಥಿಕ ನೆರವು, ಆಹಾರ ಸಾಮಗ್ರಿ ವಿತರಣೆ, ಅನಾರೋಗ್ಯ ಪೀಡಿತರ ಆರೈಕೆ, ಸುಬ್ರಹ್ಮಣ್ಯ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ....
ಹೆಚ್ಚಿನ ಸುದ್ದಿ

ಭಾರ್ಗವಿ ಬಿಲ್ಡರ್ಸ್‍ರವರ ನೂತನ ವೆಬ್‍ಸೈಟ್ www.bhargavibuilders.com ಲೋಕಾರ್ಪಣೆ ಮತ್ತು ನಿರ್ಮಾಣ್ ಹೋಮ್ಸ್ ಸಹಭಾಗಿತ್ವದಲ್ಲಿ ಶೀಘ್ರದಲ್ಲೇ ಕೊಟ್ಟಾರದಲ್ಲಿ ಕೈಲಾಶ್ ವಸತಿ ಸಮುಚ್ಚಯದ ಭೂಮಿ ಪೂಜೆ-ಕಹಳೆ ನ್ಯೂಸ್

ಮಂಗಳೂರಿನಲ್ಲಿ ಐಶಾರಾಮಿಯಾದ ಆದರೆ ಕೈಗೆಟುಕುವ ರೀತಿಯಲ್ಲಿ ಮನೆಗಳನ್ನು ನಿರ್ಮಿಸುವ ಸಂಸ್ಥೆ ನಿರ್ಮಾಣ್ ಹೋಮ್ಸ್ ಇದೀಗ ನಗರದ ಜನತೆಗೆ ಎಲ್ಲಾ ಸೌಕರ್ಯಗಳನ್ನೊಳಗೊಂಡ ಅಪಾರ್ಟ್‍ಮೆಂಟ್‍ಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡಬೇಕೆನ್ನುವ ನಿಟ್ಟಿನಲ್ಲಿ ಭಾರ್ಗವಿ ಬಿಲ್ಡರ್ಸ್‍ರವರ ಸಹಭಾಗಿತ್ವದಲ್ಲಿ ಕೈಲಾಶ್ ಎಂಬ ವಸತಿ ಸಮುಚ್ಚಯವನ್ನು ಶೀಘ್ರದಲ್ಲೇ ಕೊಟ್ಟಾರದಲ್ಲಿ ನಿರ್ಮಾಣಗೊಳಿಸಲಿದೆ. ನಿರ್ಮಾಣ್ ಹೋಮ್ಸ್ ಸಂಸ್ಥೆಯು "ಎಫರ್ಡೇಬಲ್ ಲಕ್ಶುರಿ" ಎಂಬ ಧ್ಯೇಯವನ್ನು ಹೊಂದಿದ್ದರೆ, ಭಾರ್ಗವಿ ಬಿಲ್ಡರ್ಸ್ ಸಂಸ್ಥೆಯು "ಹೈ ಲಿವಿಂಗ್ ಲಕ್ಶುರಿ ಹೋಮ್ಸ್" ಅನ್ನು ಕೈಗೆಟುಕುವ ಬೆಲೆಯಲ್ಲಿ ಜನತೆಗೆ ನೀಡುವ...
ಹೆಚ್ಚಿನ ಸುದ್ದಿ

ನೆಲ್ಯಾಡಿಯಲ್ಲಿ ಮೈಗೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಯುವತಿ-ಕಹಳೆ ನ್ಯೂಸ್

ನೆಲ್ಯಾಡಿ: ಯುವತಿಯೋರ್ವರು ಮೈಗೆ ಸೀಮೆಎಣ್ಣೆ ಸುರಿದು, ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿ ನವ್ಯಾ ಜೋಸೆಫ್, ನೆಲ್ಯಾಡಿ ನವೀನ್ ಇಂಟರ್‍ಲಾಕ್ ಮಾಲಕ, ನೆಲ್ಯಾಡಿ ನಿವಾಸಿ ವಿ.ಜೆ.ಜೋಸೆಫ್ ಎಂಬವರ ಪುತ್ರಿಯಾಗಿದ್ದು, ಇವರು ಕಳೆದ ಶೈಕ್ಷಣಿಕ ಸಾಲಿನಲ್ಲಿ ಮಂಗಳೂರು ಸೈಂಟ್ ಅಲೋಸಿಯಸ್ ಕಾಲೇಜಿನಲ್ಲಿ ಬಿಬಿಎ ಪದವಿ ಮುಗಿಸಿದ್ದ ನವ್ಯಾ ಜೋಸೆಫ್ ಬಳಿಕ ಮನೆಯಲ್ಲಿದ್ದರು. ನಿನ್ನೆ ರಾತ್ರಿ ತನ್ನ ಕೊಠಡಿಯೊಳಗೆ ಮಲಗಿದ್ದ ನವ್ಯಾ ಇಂದು ಬೆಳಗ್ಗೆ...
ಹೆಚ್ಚಿನ ಸುದ್ದಿ

ಉಪ್ಪಿನಂಗಡಿಯಲ್ಲಿ ಶುಭಾರಂಭಗೊಂಡ ದಿನಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ :6 ವರ್ಷಗಳಿಂದ ಗ್ರಾಹಕ ನಂಬಿಕೆಗೆ ಹೆಸರುವಾಸಿಯಾದ ಚಿನ್ನಾಭರಣ ಮಳಿಗೆ – ನಿಮಗಾಗಿ ಕಾಯುತ್ತಿದೆ ವಿನೂತನವಾದ ಸೌಲಭ್ಯಗಳ ಜೊತೆಗೆ ಅಭೂತಪೂರ್ವ ಕಲೆಕ್ಷನ್ – ಕಹಳೆ ನ್ಯೂಸ್

ಉಪ್ಪಿನಂಗಡಿ : ನಿಮ್ಮ ಸೌಂದರ್ಯವನ್ನ ಹೆಚ್ಚಿಸುವ ನಿಮ್ಮ ಮನದಿಚ್ಚೆಯ, ಚಿನ್ನಾಭರಣಗಳ ಸೂಪರ್ ಕಲೆಕ್ಷನ್‍ಗಳು ಇದೀಗ ಒಂದೇ ಸೂರಿನಡಿಯಲ್ಲಿ ಲಭ್ಯವಿದೆ. ವಿನೂತನವಾದ ಸೌಲಭ್ಯಗಳ ಜೊತೆಗೆ ಅಭೂತಪೂರ್ವ ಕಲೆಕ್ಷನ್‍ಗಳು ನಿಮಗಾಗಿ ಕಾಯುತ್ತಿದೆ. ಇಂದೇ ಭೇಟಿ ಕೊಡಿ ದಿನಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‍ಗೆ. ವಿನೂತನ ಶೈಲಿಯ ಟ್ರೆಂಡಿ ಡಿಸೈನ್‍ನ ಚಿನ್ನಾಭರಣಗಳ ಮಳಿಗೆ ದಿನಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಇಂದು ಉಪ್ಪಿನಂಗಡಿಯಲ್ಲಿ ಶುಭಾರಂಭಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಿಸಿರೋಡ್ ಮತ್ತು ಸುಳ್ಯದಲ್ಲಿ ಆಭರಣ ಕ್ಷೇತ್ರದಲ್ಲಿ ಕಳೆದ...
ಹೆಚ್ಚಿನ ಸುದ್ದಿ

ಹುತಾತ್ಮ ದೀಪಕ್ ರಾವ್ ಮನೆಯಲ್ಲಿ ಶಾಸಕ ಡಾ.ಭರತ್ ಶೆಟ್ಟಿಯವರಿಂದ ಶ್ರದ್ಧಾಂಜಲಿ ಅರ್ಪಣೆ-ಕಹಳೆ ನ್ಯೂಸ್

ಭಾರತೀಯ ಜನತಾ ಪಾರ್ಟಿಯ ನಿಷ್ಟಾವಂತ ಕಾರ್ಯಕರ್ತರಾಗಿದ್ದ, ದೇಶಪ್ರೇಮಿ ಯುವಕ ದೀಪಕ್ ರಾವ್ ಮತಾಂಧರ ರಕ್ತದಾಹಕ್ಕೆ ಬಲಿಯಾಗಿ ಇವತ್ತಿಗೆ ಮೂರು ವರ್ಷ. ಹುತಾತ್ಮ ದೀಪಕ್ ರಾವ್ ಕುಟುಂಬದೊಂದಿಗೆ ಆರಂಭದಿಂದಲೂ ನಿಕಟ ಸಂಪರ್ಕದಲ್ಲಿರುವ ಡಾ.ಭರತ್ ಶೆಟ್ಟಿಯವರು ಇವತ್ತು ಕಾಟಿಪಳ್ಳದಲ್ಲಿರುವ ದೀಪಕ್ ಮನೆಗೆ ತೆರಳಿ ಫೋಟೋಗೆ ಹಾರ ಹಾಕಿ ವೀರಪುತ್ರನನ್ನು ಕಳೆದುಕೊಂಡ ತಾಯಿಯ ಕಾಲಿಗೆ ನಮಸ್ಕರಿಸಿ ಕುಟುಂಬದೊಂದಿಗೆ ಕೆಲ ಹೊತ್ತು ಕಳೆದರು. ಶಾಸಕರೊಂದಿಗೆ ಮನಪಾ ಸದಸ್ಯರಾದ ಲೋಕೇಶ್ ಬೊಳ್ಳಾಜೆ, ಯುವ ಮೋರ್ಚಾ ಅಧ್ಯಕ್ಷ ಭರತರಾಜ್...
ಹೆಚ್ಚಿನ ಸುದ್ದಿ

ಲಕ್ನೋ:ಮಹಿಳಾ ಪಿಎಸ್ ಐ ಆರ್ಜೋ ಪವಾರ್ ನೇಣಿಗೆ ಶರಣು-ಕಹಳೆ ನ್ಯೂಸ್

ಲಕ್ನೋ: ಮಹಿಳಾ ಪಿಎಸ್ ಐ ಒಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಲಂದರ್ ಶಹರ್ ಜಿಲ್ಲೆಯಲ್ಲಿ ನಡೆದಿದೆ. ಅನೂಪ್ ಶಹರ್ ಕೊಟ್ಟಾಲಿ ಪೆÇಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಪಿಎಸ್ ಐ 30 ವರ್ಷದ ಆರ್ಜೋ ಪವಾರ್. ಇವರಿಗೆ ಇವರು ವಾಸವಿದ್ದ ಬಾಡಿಗೆ ಮನೆಯ ಮಾಲಕಿ ಆರ್ಜೋ ಅವರಿಗೆ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ, ಕರೆ ಸ್ವೀಕರಿಸಿದ್ದ ವೇಳೆ ಅನುಮಾನಗೊಂಡು ಬಾಗಿಲು...
1 119 120 121 122 123 174
Page 121 of 174