Sunday, June 14, 2026
ಹೆಚ್ಚಿನ ಸುದ್ದಿ

ಹುತಾತ್ಮ ದೀಪಕ್ ರಾವ್ ಮನೆಯಲ್ಲಿ ಶಾಸಕ ಡಾ.ಭರತ್ ಶೆಟ್ಟಿಯವರಿಂದ ಶ್ರದ್ಧಾಂಜಲಿ ಅರ್ಪಣೆ-ಕಹಳೆ ನ್ಯೂಸ್

ಭಾರತೀಯ ಜನತಾ ಪಾರ್ಟಿಯ ನಿಷ್ಟಾವಂತ ಕಾರ್ಯಕರ್ತರಾಗಿದ್ದ, ದೇಶಪ್ರೇಮಿ ಯುವಕ ದೀಪಕ್ ರಾವ್ ಮತಾಂಧರ ರಕ್ತದಾಹಕ್ಕೆ ಬಲಿಯಾಗಿ ಇವತ್ತಿಗೆ ಮೂರು ವರ್ಷ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹುತಾತ್ಮ ದೀಪಕ್ ರಾವ್ ಕುಟುಂಬದೊಂದಿಗೆ ಆರಂಭದಿಂದಲೂ ನಿಕಟ ಸಂಪರ್ಕದಲ್ಲಿರುವ ಡಾ.ಭರತ್ ಶೆಟ್ಟಿಯವರು ಇವತ್ತು ಕಾಟಿಪಳ್ಳದಲ್ಲಿರುವ ದೀಪಕ್ ಮನೆಗೆ ತೆರಳಿ ಫೋಟೋಗೆ ಹಾರ ಹಾಕಿ ವೀರಪುತ್ರನನ್ನು ಕಳೆದುಕೊಂಡ ತಾಯಿಯ ಕಾಲಿಗೆ ನಮಸ್ಕರಿಸಿ ಕುಟುಂಬದೊಂದಿಗೆ ಕೆಲ ಹೊತ್ತು ಕಳೆದರು.

ಶಾಸಕರೊಂದಿಗೆ ಮನಪಾ ಸದಸ್ಯರಾದ ಲೋಕೇಶ್ ಬೊಳ್ಳಾಜೆ, ಯುವ ಮೋರ್ಚಾ ಅಧ್ಯಕ್ಷ ಭರತರಾಜ್ ಕೃಷ್ಣಾಪುರ, ಇನ್ನಿತರರ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.