Saturday, June 13, 2026

ಸುದ್ದಿ

ಸುದ್ದಿ

ನಾಪತ್ತೆಯಾದ ಯುವಕನ ಶವ ಕೆರೆಯಲ್ಲಿ ಪತ್ತೆ | ಹಿಂದೂ ಯುವಕ ಹತ್ಯೆಯ ಹಿಂದೆ ಜಿಹಾದ್ ನ ಕರಿ ನೆರಳು

  ಹೊನ್ನಾವರ (ಉತ್ತರ ಕನ್ನಡ): ಕೋಮು ಗಲಭೆಗೆ ತತ್ತರಿಸಿರುವ ಹೊನ್ನಾವರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಡಿ.6ರಂದು ಗಲಭೆ ವೇಳೆ ನಾಪತ್ತೆಯಾಗಿದ್ದ ಪರೇಶ ಕಮಲಾಕರ ಮೇಸ್ತ (21) ಶವ ಶೆಟ್ಟಿಕೆರೆಯಲ್ಲಿ ಶುಕ್ರವಾರ ಪತ್ತೆಯಾಗಿದ್ದು, ಆಕ್ರೋಶ ಭುಗಿಲೆದ್ದಿದೆ. ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಐವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶುಕ್ರವಾರ ಬೆಳಗ್ಗೆ ಕೆರೆಯಲ್ಲಿ ಹಳದಿ ಅಂಗಿ ತೊಟ್ಟ ಶವ ತೇಲುತ್ತಿರುವುದನ್ನು ಕಂಡು ಜನ ಪೊಲೀಸರಿಗೆ ತಿಳಿಸಿದ್ದಾರೆ. ಮೀನುಗಾರರು ದೋಣಿ ತಂದು ಶವ ಮೇಲೆತ್ತಿದರು. ಆಕ್ರೋಶಗೊಂಡ ಜನತೆ ರಸ್ತೆಗಳನ್ನು ಬಂದ್‌ ಮಾಡಿ ಪ್ರತಿಭಟಿಸಿದರು. ಪರಿಸ್ಥಿತಿ ವಿಕೋಪಕ್ಕೆ...
ಸುದ್ದಿ

ಯಕ್ಷಗಾನದಿಂದ ದೇಶಾಭಿಮಾನದತ್ತ ; ಯಕ್ಷಸೇನೆ | ಮುಂಬಯಿಯಲ್ಲಿ ಯಕ್ಷಕುವರಿಯರ ದಧಿಗಿಣ ; ರಾಧಾವಿಲಾಸ

  ಮುಂಬಯಿ : ಯಕ್ಷಗಾನದಿಂದ ದೇಶಾಭಿಮಾನದತ್ತ ಎಂಬ ಶೀರ್ಶಿಕೆಯ ಅಡಿಯಲ್ಲಿ ಮುಂಬಯಿಯಲ್ಲಿ ಯಕ್ಷಸೇನೆ ತಂಡದ ಪ್ರಥಮ ವಾರ್ಷಿಕೋತ್ಸವ ವಿಭಿನ್ನ ಹಾಗೂ ವಿಶಿಷ್ಟವಾಗಿ ನಡೆಯಲಿದೆ. ಯಕ್ಷಗಾನ ಕರಾವಳಿಯ ಗಂಡುಕಲೆ, ದೇಶ ವಿದೇಶದಲ್ಲಿ ಮನ್ನಣೆ ಪಡೆದ ರಾಜ ಕಲೆ ಇದೀಗ ಆ ಕಲೆ ಕನಸಿನ ನಗರಿ ಮುಂಬಯಿಯಲ್ಲಿ ರಾಷ್ಟ್ರ ಸೇವೆಗೆ ನಾಂದಿಹಾಡುತ್ತಿದೆ. ಇದೇ ಬರುವ ಡಿಸೆಂಬರ್ 25 ರ ಸೋಮವಾರ ಮಧ್ಯಾಹ್ನ ಸಮಯ 2:30ಕ್ಕೆ ಸರಿಯಾಗಿ ನವಮುಂಬಯಿಯ " ಸಾಂಸ್ಕೃತಿಕ ಸೌರಭ "...
ಸುದ್ದಿ

ಬೆಂಗಳೂರಿಗರಿಗೆ ತುಳು ಕಲಿಸುತ್ತಾರೆ ಕರಾವಳಿ ಪ್ರಾಧ್ಯಾಪಕಿ | ರಾಜಧಾನಿಯಲ್ಲೂ ತುಳು ಕಲರವ

  ಬೆಂಗಳೂರು: ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ಬೇಡಿಕೆ ಬಹು ಹಿಂದಿನದ್ದು. ಇದಕ್ಕೆ ಪೂರಕವಾಗಿ ತುಳು ಭಾಷೆಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ತುಳು ಜಾನಪದ ಸಂಶೋಧಕಿ ಡಾ. ಲಕ್ಷ್ಮೀ ಜಿ. ಪ್ರಸಾದ್‌ ಅವರು ಆಸಕ್ತರಿಗೆ ಉಚಿತವಾಗಿ ತುಳು ಕಲಿಸಲು ವೇದಿಕೆ ರೂಪಿಸಿದ್ದಾರೆ. ಅದರ ಮೊದಲ ತರಗತಿ ಬೆಂಗಳೂರಿನ ಕಲಾಗ್ರಾಮದಲ್ಲಿ ಡಿ.10ರ ಭಾನುವಾರ ನಡೆಯಲಿದೆ. ಬೆಂಗಳೂರಿನ ನೆಲಮಂಗಲದ ಸರಕಾರಿ ಪಿಯು ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ. ಲಕ್ಷ್ಮೀ ಅವರು...
ಸುದ್ದಿ

ಯದು ವಂಶಕ್ಕೆ ಪುತ್ರ ಸಂತಾನ | 55 ವರ್ಷಗಳ ನಂತರ ರಾಜವಂದಲ್ಲಿ ಮನೆ ಮಾಡಿದ ಸಂಭ್ರಮ

  ಬೆಂಗಳೂರು: ಮೈಸೂರು ಸಂಸ್ಥಾನದ ಯುವ ರಾಜ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಪತ್ನಿ ತ್ರಿಷಿಕಾ ಕುಮಾರಿ ಬುಧವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯ ಖಾಸಗಿ ಆಸ್ಪತ್ರೆಗೆ ಮಂಗಳವಾರ ಸಂಜೆ ಅವರು ದಾಖಲಾಗಿದ್ದರು. ಬುಧವಾರ ರಾತ್ರಿ 10ರ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮಗು ಸುಮಾರು 2.5 ಕೆ.ಜಿ.ತೂಕವಿದ್ದು, ಲವಲವಿಕೆಯಿಂದಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.  55...
ಸುದ್ದಿ

ಕುಂದರನಾಡಿನಲ್ಲಿ ಸಾಹಿತ್ಯ ಜಾತ್ರೆ | ಕವಯತ್ರಿ ಶಾಂತ ಕುಂಟಿನಿಯವರ ಕವತೆಗಳ ವಾಚನ, ಸನ್ಮಾನ

  ಬೆಳಗಾವಿ : ಸೃಜನಶೀಲ ಸಾಹಿತ್ಯ ಬಳಗದವರು ಆಯೋಜಿಸಿದ್ದ ರಾಜ್ಯ ಘಟಕದ ವಾರ್ಷಿಕೋತ್ಸವ ಮತ್ತು ರಾಜ್ಯ ಮಟ್ಟದ ಸಾಹಿತ್ಯಿಗಳ ಕವಿಗೋಷ್ಠಿ ಕಾರ್ಯಕ್ರಮವು ಕುಂದರನಾಡು ಬೆಳಗಾವಿಯ ಹಳ್ಳಿಗಾಡಿನ ಸುಂದರ ಪಕೃತಿಯ ಮಡಿಲು ಹುಕ್ಕೇರಿಯ ಪಾಶ್ಯಾಪುರದ ಉಜ್ಜೇಶ್ವರ ಸಂಸ್ಥಾನದಲ್ಲಿ ನಡೆಯಿತು. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಯುವ ಸಾಹಿತಿಗಳ ಬಳಗ ಸೃಜನಶೀಲ ಸಾಹಿತ್ಯ ಬಳಗವು ಯುವ ಸಾಹಿತಿಗಳನ್ನು ಒಗ್ಗುಡಿಸಿ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಪರಿಚಯಿಸುವ ಕಾರ್ಯವನ್ನು ಮಾಡುತ್ತಿದೆ. ಸಾಹಿತಿ, ಕವಯತ್ರಿ...
ಸುದ್ದಿ

ದಕ್ಷಿಣ ಕನ್ನಡದ ಈ ಹನುಮನ ಕೃಪೆಯಿಂದ ಯದುವೀರ್ -ತ್ರಿಷಿಕಾಗೆ ಪುತ್ರ ಸಂತಾನ!

  ಮಂಗಳೂರು: ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ದಂಪತಿಗೆ ಗಂಡು ಮಗು ಜನಿಸಿರುವ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ಸಂಭ್ರಮ ಮನೆ ಮಾಡಲು ಹನುಮಂತನ ಕೃಪೆ ಕಾರಣ ಎನ್ನುವ ಮಾತುಗಳು ಈಗ ಕೇಳಿ ಬಂದಿವೆ. ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲದಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿರುವ ಹನುಮಂತ ಕೃಪೆಯಿಂದ ಗಂಡು ಮಗು ಜನಿಸಿದೆ ಎನ್ನುವ ಮಾತನ್ನು ಆ ಕ್ಷೇತ್ರವನ್ನು ನಂಬುತ್ತಿರುವ...
ಸುದ್ದಿ

ರಕ್ತದಲ್ಲಿ ಬರೆದ ಅಭಯಾಕ್ಷರ ಪತ್ರ ; ಗೋಹತ್ಯೆ ನಿಷೇಧಕ್ಕಾಗಿ ರಕ್ತ ಬರಹ

  ಉತ್ತರಕನ್ನಡ : ಜಿಲ್ಲೆಯ ಕುಮಟಾ ತಾಲೂಕು ಕಡತೋಕಾ ಗ್ರಾಮದ ಬಗ್ಗೋಣ ಭಟ್ಟರ ಮನೆಯ ಸುರೇಶ್ ತಿಮ್ಮಣ್ಣ ಭಟ್ ರವರು ತಮ್ಮ ರಕ್ತದಿಂದ ಬರೆದ ಅಭಯಾಕ್ಷರ ಪತ್ರವನ್ನು ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಗೆ ಸಮರ್ಪಿಸಿದರು.ಇವರು ಮೂಲತಃ ಕೃಷಿಕರಾಗಿದ್ದು ಪತ್ನಿ ಮಕ್ಕಳೊಂದಿಗೆ ಕೃಷಿ ಮತ್ತು ಗೋಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಶ್ರೀ ರಾಮಚಂದ್ರಾಪುರಮಠ ಗೋಯಾತ್ರೆಗಳಲ್ಲಿ ಗೋಕಿಂಕರರಾಗಿಯೂ ಸೇವೆ ಸಲ್ಲಿಸಿದವರಾಗಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಇಂತಹ ಹಲವು ಪ್ರೇರಣಾದಯಿ ವಿಚಾರಗಳು ನಡೆದಿರುವುದು ಕಂಡುಬರುತ್ತದೆ.ಈ ರಕ್ತಾಕ್ಷರ ಅಭಯಗೋಯಾತ್ರೆಯ...
ಸುದ್ದಿ

ಮೌಲ್ವಿಯ ತಲೆ ಕಡಿದು ತಂದವರಿಗೆ 10 ಲಕ್ಷ ರೂಪಾಯಿ ಬಹುಮಾನ – ಬಸವರಾಜ್ ಯಂಕಂಚಿ

  ಬಾಗಲಕೋಟೆ : ಹುಬ್ಬಳ್ಳಿಯ ಗಣೇಶ್ ಪೇಟೆಯನ್ನು ನೋಡಿದರೆ ಪಾಕಿಸ್ತಾನಕ್ಕೆ ಹೋಗಬೇಕಾಗಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮೌಲ್ವಿಯ ತಲೆ ಕಡಿದು ತಂದವರಿಗೆ 10 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಸೋಮವಾರ ಘೋಷಿಸಿದ್ದಾರೆ. ಮೌಲ್ವಿ ಮೆಹಮೂದ್ ಖೈರಾತಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ನನಗೆ ಹುಬ್ಬಳ್ಳಿಯ ಗಣೇಶ ಪೇಟೆಯನ್ನು ನೋಡಿದರೆ ಪಾಕಿಸ್ತಾನದಂತಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾದ ಬಸವರಾಜ...
1 3,352 3,353 3,354 3,355 3,356 3,391
Page 3354 of 3391