ನಾಪತ್ತೆಯಾದ ಯುವಕನ ಶವ ಕೆರೆಯಲ್ಲಿ ಪತ್ತೆ | ಹಿಂದೂ ಯುವಕ ಹತ್ಯೆಯ ಹಿಂದೆ ಜಿಹಾದ್ ನ ಕರಿ ನೆರಳು
ಹೊನ್ನಾವರ (ಉತ್ತರ ಕನ್ನಡ): ಕೋಮು ಗಲಭೆಗೆ ತತ್ತರಿಸಿರುವ ಹೊನ್ನಾವರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಡಿ.6ರಂದು ಗಲಭೆ ವೇಳೆ ನಾಪತ್ತೆಯಾಗಿದ್ದ ಪರೇಶ ಕಮಲಾಕರ ಮೇಸ್ತ (21) ಶವ ಶೆಟ್ಟಿಕೆರೆಯಲ್ಲಿ ಶುಕ್ರವಾರ ಪತ್ತೆಯಾಗಿದ್ದು, ಆಕ್ರೋಶ ಭುಗಿಲೆದ್ದಿದೆ. ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಐವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶುಕ್ರವಾರ ಬೆಳಗ್ಗೆ ಕೆರೆಯಲ್ಲಿ ಹಳದಿ ಅಂಗಿ ತೊಟ್ಟ ಶವ ತೇಲುತ್ತಿರುವುದನ್ನು ಕಂಡು ಜನ ಪೊಲೀಸರಿಗೆ ತಿಳಿಸಿದ್ದಾರೆ. ಮೀನುಗಾರರು ದೋಣಿ ತಂದು ಶವ ಮೇಲೆತ್ತಿದರು. ಆಕ್ರೋಶಗೊಂಡ ಜನತೆ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟಿಸಿದರು. ಪರಿಸ್ಥಿತಿ ವಿಕೋಪಕ್ಕೆ...







