ಸ್ವಚ್ಛಮಂಗಳೂರು 4ನೇ ಹಂತದ ಸ್ವಚ್ಛತಾ ಅಭಿಯಾನಕ್ಕೆ ನವೆಂಬರ್ ನಲ್ಲಿ ಚಾಲನೆ | ಸ್ವಚ್ಛ ಭಾರತ ಯೋಜನೆ ಸಹಕಾರಕ್ಕೆ ರಾಮಕೃಷ್ಣ ಮಿಷನ್ ನಿಂದ ವಿನೂತನ ಕಾರ್ಯಕ್ರಮ.
ಮಂಗಳೂರು: ಪ್ರಧಾನಿಯವರ ಕನಸಿನ ಯೋಜನೆ ಸ್ವಚ್ಛ ಭಾರತ ಅಭಿಯಾನವನ್ನು ಕೇಂದ್ರ ಸರಕಾರದ ವಿಶೇಷ ವಿನಂತಿಯ ಮೇರೆಗೆ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಎಂಬ ಹೆಸರಿನಲ್ಲಿ “ಸ್ವಚ್ಛತೆಯೇ ದೇವರು” ಎಂಬ ನೆಲೆಗಟ್ಟಿನಲ್ಲಿ ಆಯೋಜಿಸಿಕೊಂಡು ಬರುತ್ತಲಿದೆ. ಕಳೆದ ಎರಡೂವರೆ ವರುಷಗಳಿಂದ ಮಂಗಳೂರಿನಲ್ಲಿ ಉತ್ತಮ ಜನಸ್ಪಂದನೆ ದೊರೆತಿದೆ. ಜನರಿಂದ ಜನರಿಗಾಗಿ ಜನರೇ ಮಾಡುವ ಕಾರ್ಯಕ್ರಮ ಎಂಬ ಭಾವಜಾಗೃತವಾದುದರ ಪರಿಣಾಮ ಇಂದು ಯಶಸ್ವಿಯಾಗಿ ನಾಲ್ಕನೇ ಹಂತಕ್ಕೆ ಮುನ್ನಡಿಯಿಡುತ್ತಿದೆ. ನಾಲ್ಕನೇ ಹಂತ ನವೆಂಬರ್ 3, 4...







