Saturday, June 20, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಬದಲಾಗಲಿದೆ ಆಸ್ತಿ ನೋಂದಣಿ ವ್ಯವಸ್ಥೆ: ನವೆಂಬರ್ 2 ರಿಂದ ಸಂಪೂರ್ಣ ಆನ್ಲೈನ್-ಕಹಳೆ ನ್ಯೂಸ್

ಬೆಂಗಳೂರು: ಆಸ್ತಿ ನೋಂದಣಿಗೆ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಮತ್ತು ನೋಂದಣಿ ಪ್ರಕ್ರಿಯೆ ಸರಳಗೊಳಿಸುವ ಉದ್ದೇಶದಿಂದ ಸರ್ಕಾರ ಆಸ್ತಿ ನೊಂದಣಿಯನ್ನು ಸಂಪೂರ್ಣವಾಗಿ ಆನ್ಲೈನ್ ಮಾಡಲು ಮುಂದಾಗಿದೆ. 3 ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಆನ್ಲೈನ್ ನೋಂದಣಿ ಕಾರ್ಯ ನವೆಂಬರ್ 2 ರಿಂದ ಆರಂಭವಾಗಲಿದೆ. ಈಗಾಗಲೇ ಪ್ರಾಯೋಗಿಕವಾಗಿ 3 ಕಚೇರಿಗಳಲ್ಲಿ ಯೋಜನೆ ಜಾರಿಗೆ ಕ್ರಮ ಕೈಗೊಂಡಿದ್ದು ನಂತರದಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ಯೋಜಿಸಲಾಗಿದೆ. ನವೆಂಬರ್ 2 ರಿಂದ ರಾಜ್ಯದ ಮೂರು...
ಹೆಚ್ಚಿನ ಸುದ್ದಿ

ಪ್ರತಿಯೊಬ್ಬ ಭಾರತೀಯನಿಗೂ ಕೊರೋನಾ ಲಸಿಕೆ ನೀಡಲಾಗುವುದು : ಪ್ರಧಾನಿ ಮೋದಿ-ಕಹಳೆ ನ್ಯೂಸ್

ನವದೆಹಲಿ : ಎಲ್ಲಾ ಭಾರತೀಯರಿಗೆ ಕರೋನವೈರಸ್ ಲಸಿಕೆ ನೀಡಲಾಗುವುದು ಮತ್ತು ಯಾರೂ ಲಸಿಕೆಯಿಂದ ಹಿಂದೆ ಉಳಿಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲಸಿಕೆ ಆಡಳಿತವನ್ನು ನಿರ್ವಹಿಸಲು ಮತ್ತು ಮಾರ್ಗವನ್ನು ಗುರುತಿಸಲು ರಾಷ್ಟ್ರೀಯ ತಜ್ಞರ ಗುಂಪನ್ನು ರಚಿಸಲಾಗಿದೆ ಎಂದು ಪಿಎಂ ನರೇಂದ್ರ ಮೋದಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 'ಲಸಿಕೆ ಲಭ್ಯವಾದಾಗ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ನಾನು ರಾಷ್ಟ್ರಕ್ಕೆ ಭರವಸೆ ನೀಡಲು ಬಯಸುತ್ತೇನೆ. ಯಾರೂ ಹಿಂದೆ...
ಹೆಚ್ಚಿನ ಸುದ್ದಿ

ಮೇಕಪ್ ಆಗಿ ಬಳಕೆಯಾಯ್ತು ಮೆಹಂದಿ-ಕಹಳೆ ನ್ಯೂಸ್

ಮದರಂಗಿಯನ್ನ ಸಾಮಾನ್ಯವಾಗಿ ಕೈಯನ್ನ ಅಲಂಕಾರ ಮಾಡಿಕೊಳ್ಳೋಕೆ ಬಳಕೆ ಮಾಡ್ತೇವೆ. ಇದನ್ನ ಬಿಟ್ರೆ ಕೂದಲಿನ ಆರೈಕೆಗೆ ಬಳಕೆ ಮಾಡಬಹುದು. ಆದರೆ ಚಿಕಾಗೋದ ಮಾಡೆಲ್​ ಒಬ್ರು ಮೇಕಪ್​ ಮಾಡಿಕೊಳ್ಳಲು ಮದರಂಗಿ ಬಳಕೆ ಮಾಡುವ ಮೂಲಕ ಟ್ರೋಲ್​ ಆಗಿದ್ದಾರೆ. ಬ್ರಿನ್ನಾ ಎಂಬ ಹೆಸರಿನ ಮಹಿಳೆ ಬೀಟ್​ರೂಟ್​ ಹಾಗೂ ರೋಸ್​ವಾಟರ್​ ಜೊತೆ ಮದರಂಗಿಯನ್ನೂ ಮುಖದ ಅಲಂಕಾರಕ್ಕೆ ಬಳಸಿ ನಗೆಪಾಟಲಿಗೀಡಾಗಿದ್ದಾರೆ. ಅಲ್ಲದೇ ಅನೇಕರು ಈ ರೀತಿಯ ಮೆಹಂದಿ ಬಳಕೆಯಿಂದ ಮುಖದ ಆರೋಗ್ಯಕ್ಕೆ ಸಂಚಕಾರವಾಗಲಿದೆ ಅಂತಾ ವಾರ್ನಿಂಗ್​ ಕೂಡ...
ಹೆಚ್ಚಿನ ಸುದ್ದಿ

2021ರ ಆರಂಭದಲ್ಲೇ ರಾಜ್ಯದ ಜನರಿಗೆ ಸಿಗಲಿದೆ ಕೋವಿಡ್ ಲಸಿಕೆ: ಸಚಿವ ಸುಧಾಕರ್-ಕಹಳೆ ನ್ಯೂಸ್

ಬೆಂಗಳೂರು: ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೊನಾ ಸೋಂಕಿಗೆ ಲಸಿಕೆ ಕಂಡುಹಿಡಿಯಲು ಹಲವಾರು ಸಂಶೋಧನೆಗಳು ನಡೆಯುತ್ತಿದ್ದು, 2021ರ ಆರಂಭದಲಿ ರಾಜ್ಯದಲ್ಲೇ ಮೊದಲು ಲಸಿಕೆ ಸಿದ್ಧವಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಕ್ಸ್ ಫರ್ಡ್ ವಿವಿಯ ಆಸ್ಟ್ರಾಜನಿಕಾ ಸಂಸ್ಥೆಯ ಎಂಡಿ ಗಗನ್ ದೀಪ್ ಜೊತೆ ಇಂದು ಅಧಿಕಾರಿಗಳ ಸಭೆ ನಡೆದಿದ್ದು, ಸಭೆಯಲ್ಲಿ ಕೊರೊನಾ ಲಸಿಕೆ ಬಗ್ಗೆ ಅವರು ಹಲವು ಮಹತ್ವದ ಮಾಹಿತಿ ನೀಡಿದರು...
ಹೆಚ್ಚಿನ ಸುದ್ದಿ

ಮಾಸ್ಕ್ ಧರಿಸದಿದ್ದರೆ ದಂಡ: ಮಾರ್ಷಲ್ ಗಳಿಗೆ ದಿನಕ್ಕೆ 20 ಕೇಸ್ ಟಾರ್ಗೆಟ್-ಕಹಳೆ ನ್ಯೂಸ್

ಬೆಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದವರಿಗೆ ದಂಡ ವಿಧಿಸಲು ಬಿಬಿಎಂಪಿ ಮಾರ್ಷಲ್ ಗಳಿಗೆ ಟಾರ್ಗೆಟ್ ನೀಡಿದ್ದು, ದಿನಕ್ಕೆ 20 ಕೇಸ್ ಗಳ ಟಾರ್ಗೆಟ್ ನೀಡಲಾಗಿದೆ. ರಾಜ್ಯ ಸರ್ಕಾರವು ದಿನಕ್ಕೆ ಮಾಸ್ಕ್ ಹಾಕದ 20 ಜನರಿಗೆ ದಂಡ ಹಾಕಲೇಬೇಕು ಎಂದು ಮಾರ್ಷಲ್ ಗಳಿಗೆ ಟಾರ್ಗೆಟ್ ನೀಡಿದೆ. ಮಾಸ್ಕ್ ಹಾಕದವರಿಂದ, ಸಾಮಾಜಿಕ ಅಂತರ ಕಾಪಾಡದವರಿಂದ 250 ರೂ. ದಂಡ ವಸೂಲಿ ಮಾಡಬೇಕು. ಟಾರ್ಗೆಟ್ ರೀಚ್ ಆಗ್ಲಿಲ್ಲ ಅಂದ್ರೆ ವಿಪತ್ತು ನಿರ್ವಹಣಾ ಕಾಯಿದೆ...
ಹೆಚ್ಚಿನ ಸುದ್ದಿ

ಸದ್ಯದಲ್ಲೇ ದೇಶದಲ್ಲಿ ‘ಡೇಟಾ’ಗೆ ಕನಿಷ್ಟ ಶುಲ್ಕ ನಿಗದಿ-ಕಹಳೆ ನ್ಯೂಸ್

ನವದೆಹಲಿ : ದೇಶಾದ್ಯಂತ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇಂತಹ ಏರಿಕೆಗೆ ಅನುಗುಣವಾಗಿ ಡೇಟಾ ದರದಲ್ಲಿ ಕಡಿಮೆಗೊಳಿಸಬೇಕಿದ್ದಂತ ಒಂದೊಂದು ಮೊಬೈಲ್ ಸೇವಾ ಕಂಪನಿಗಳು ದುಪ್ಪಟ್ಟು ಶುಲ್ಕ ವಿಧಿಸುತ್ತಿವೆ ಎನ್ನಲಾಗಿದೆ. ಹೀಗಾಗಿ ದೇಶದಲ್ಲಿ ಡೇಟಾ ಸೇವೆಗಳಿಗೆ ಕನಿಷ್ಠ ದರ ನಿಗದಿ ಮಾಡುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ದೂರಸಂಪರ್ಕ ಕಂಪನಿಗಳು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವನ್ನು(ಟ್ರಾಯ್) ಒತ್ತಾಯಿಸಿವೆ. ಹೀಗಾಗಿ ಸದ್ಯದಲ್ಲಿಯೇ ಡೇಟಾ ಸೇವೆಗಳಿಗೆ ಕನಿಷ್ಠ ದರ ನಿಗದಿಯಾಗಲಿದೆ...
ಹೆಚ್ಚಿನ ಸುದ್ದಿ

ಇಂದು ರಾಜ್ಯೋತ್ಸವ ಪ್ರಶಸ್ತಿ ಪ್ರಕಟ : ನವೆಂಬರ್ 1 ಕ್ಕೆ ಸಮಾರಂಭ ಖಚಿತ!?-ಕಹಳೆ ನ್ಯೂಸ್

ಬೆಂಗಳೂರು : ರಾಜ್ಯ ಸರ್ಕಾರವು ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪಟ್ಟಿ ಇಂದುಉ ಪ್ರಕಟಿಸುವ ಸಾಧ್ಯತೆ ಇದ್ದು, ನವೆಂಬರ್ 1 ರಂದು ಪ್ರಶಸ್ತಿ ಸಮಾರಂಭ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎನ್ನಲಾಗಿದೆ. ರಾಜ್ಯ ಸರ್ಕಾರವು ಈ ವರ್ಷ 65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕಾಗಿತ್ತು. ಆದರೆ ಅಂತಿಮವಾಗಿ 80 ಜನರ ಆಯ್ಕೆಯಾಗಿದೆ. ಈ ಪಟ್ಟಿಯಲ್ಲಿ 15 ಹೆಸರಗಳನ್ನು ತೆಗೆಯುವ ಕಸರತ್ತು ನಡೆದಿದ್ದು, ಮೈಸೂರು ದಸರಾ ಮುಗಿದ ಬಳಿಕ...
ಹೆಚ್ಚಿನ ಸುದ್ದಿ

ದಸರಾ ಮೆರವಣಿಗೆಗೆ ಚಾಲನೆ ನೀಡಿದ ಸಿಎಂ-ಕಹಳೆ ನ್ಯೂಸ್

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ದಸರಾ ಮೆರವಣಿಗೆಗೆ ಚಾಲನೆ ನೀಡಿದರು. ಮೈಸೂರು ಅರಮನೆ ಆವರಣದಲ್ಲಿರುವ ನಂದಿಧ್ವಜಕ್ಕೆ ಮಧ್ಯಾಹ್ನ 2:59ರಿಂದ 3:20ರ ಶುಭ ಮಕರ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ದಸರಾ ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ ಎಂದರು....
1 154 155 156 157 158 174
Page 156 of 174