ಭಾರತ್ ಬಂದ್ : ಮಂಗಳೂರಿಗೆ ತಟ್ಟದ ಬಂದ್ ಬಿಸಿ, ವಾಹನ ಸಂಚಾರ ಎಂದಿನಂತೆ – ಕಹಳೆ ನ್ಯೂಸ್
ಮಂಗಳೂರು: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಬಿಸಿ ಮಂಗಳೂರು ನಗರಕ್ಕೆ ತಟ್ಟಿಲ್ಲ. ಮಂಗಳೂರಿನಲ್ಲಿ ಎಂದಿನಂತೆ ಕಾರ್ಯ ನಿರ್ವಹಿಸಲಾಗುತ್ತಿದೆ. ಮಂಗಳವಾರ ಬೆಳಗ್ಗಿನಿಂದಲೇ ಕೆಎಸ್ಆರ್ ಟಿಸಿ, ಸಿಟಿ ಮತ್ತು ಖಾಸಗಿ ಬಸ್ ಗಳು ಎಂದಿನಂತೆ ಸಂಚರಿಸುತ್ತಿದೆ. ಉಳಿದಂತೆ ಆಟೋ ರಿಕ್ಷಾಗಳ ಒಡಾಟವೂ ಇದ್ದು, ಹೋಟೆಲ್ ಗಳು, ಅಂಗಡಿಗಳು ಗ್ರಾಹಕರ ಸೇವೆಗೆ ತೆರೆದಿದೆ. ಇಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ನಂತೂರಿನಲ್ಲಿ ವಿವಿಧ...







