ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ ಕುಲಕರ್ಣಿ ಸೇರಿ ಇತರ ಇಬ್ಬರ ವಿರುದ್ದ ಆರೋಪಪಟ್ಟಿ ದಾಖಲು-ಕಹಳೆ ನ್ಯೂಸ್
ನವದೆಹಲಿ : ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಇತರ ಇಬ್ಬರ ವಿರುದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಆರೋಪಪಟ್ಟಿ ದಾಖಲಿಸಿದೆ. ವಿನಯ ಕುಲಕರ್ಣಿ ಅಲ್ಲದೇ, ಶಿವಾನಂದ ಬಿರಾದಾರ್ ಮತ್ತು ಚಂದ್ರಶೇಖರ ಇಂಡಿ ಅವರ ವಿರುದ್ದ ಧಾರವಾಡದಲ್ಲಿನ ವಿಶೇಷ ಕೋರ್ಟ್ನಲ್ಲಿ ಆರೋಪಪಟ್ಟಿ ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. 2016ರಲ್ಲಿ ಪಂಚಾಯತ್ ಚುನಾವಣೆಗೆ ಸಂಬಂಧಪಟ್ಟಂತೆ ಮೃತನೊಂದಿಗೆ ಆರೋಪಿಗಳು ರಾಜಕೀಯ ಮತ್ತು ವೈಯುಕ್ತಿಕ ದ್ವೇಷ ಹೊಂದಿದ್ದು, ಮಾಜಿ ಸಚಿವರು...







