Recent Posts

Monday, June 8, 2026

ಸುದ್ದಿ

ಸುದ್ದಿ

ಮೂರು ಲಕ್ಷ ಯುವಕರಿಗೆ ಬಂಪರ್ ಕೊಡುಗೆ ನೀಡಿದ ಮೋದಿ ಸರಕಾರ!

ದೆಹಲಿ : ಮೂರು ಲಕ್ಷ ಯುವಕರಿಗೆ ಜಪಾನ್‌ನಲ್ಲಿ ತರಬೇತಿ: ಕೇಂದ್ರ ಸರಕಾರದ ಹೊಸ ಯೋಜನೆ. ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಿರುವ ಕೇಂದ್ರ ಸರಕಾರ ಮತ್ತೊಂದು ಮಹತ್ವದ ಯೋಜನೆ ಕೈಗೊಂಡಿದೆ.ಜಪಾನ್‌ನಲ್ಲಿ ತರಬೇತಿ ಪಡೆಯಲು 3 ಲಕ್ಷ ಯುವ ಸಮುದಾಯವನ್ನು ಕಳುಹಿಸಿಕೊಡಲು ನಿರ್ಧರಿಸಿದೆ. ಈ ತರಬೇತಿಯ ಸಂಪೂರ್ಣ ವೆಚ್ಚವನ್ನು ಜಪಾನ್‌ ಭರಿಸಲಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ. ಭಾರತ ಮತ್ತು ಜಪಾನ್‌ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದು, ಟೆಕ್ನಿಕಲ್‌ ಇಂಟರ್ನ್‌ ಟ್ರೇನಿಂಗ್‌...
ಸುದ್ದಿ

ರೋಷನ್ ಬೇಗ್ ವಿರುದ್ಧ ಅರುಣ್ ಪುತ್ತಿಲರಿಂದ ಕಂಪ್ಲೇಂಟ್!, ಶೀಘ್ರ ಬಂಧನಕ್ಕೆ ಆಗ್ರಹ !

ಪುತ್ತೂರು : ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾದ ಮೋದಿ ಕುರಿತಾದ ರೋಷನ್ ಬೇಗ್ ಹೇಳಿಕೆಯ ವಿರುದ್ಧ ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಪುತ್ತೂರು ಠಾಣೆಯಲ್ಲಿ ಬೇಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ, ಕಹಳೆ ನ್ಯೂಸ್ ಜೊತೆ ಈ ಕುರಿತು ಮಾತನಾಡಿದ ಪುತ್ತಿಲ ಆರೋಪಿಯನ್ನು ಸಂಪುಟದಿಂದ ವಜಾಗೊಳಿಸಿ, ಶೀಘ್ರ ಬಂಧನಕ್ಕೆ ಆಗ್ರಹಿಸಿದ್ದಾರೆ....
ಸುದ್ದಿ

ದೇಶ ವಿರೋಧಿ ಘೋಷಣೆ.ಕನ್ನಯ್ಯ ಸೇರಿ 15 ಮಂದಿಗೆ ಜೈಲು ಶಿಕ್ಷೆ?

ದೆಹಲಿ : ದೇಶ ವಿರೋಧಿ ಘೋಷಣೆ ಮೂಲಕ ರಾತ್ರಿ ಬೆಳಗ್ಗೆ ಆಗುವುದರ ಒಳಗೆ ಸ್ಟಾರ್ ಆಗಲೂ ಹೋದ  ಜೆಎನ್,ಯ್ಯು ವಿಧ್ಯಾರ್ಥಿಗಳಿಗೆ ಈಗ ಜೈಲು ಶಿಕ್ಷೆ ಅನುಭವಿಸುವ ಕಾಲ ಸನಿಹವಾಗಿದೆ. ಭಾರತವನ್ನು ಎರಡು ಹೊಳು ಮಾಡುತ್ತೆವೆ ಎಂದು ಪಾಕಿಸ್ತಾನದ ಪರ ಘೋಷಣೆ ಕೂಗಿದ ಕನ್ಯಯ ಕುಮಾರ್ ಸೇರಿ‌  15  ಮಂದಿಯ ವಿರುದ್ದ ಪ್ರಕರಣ ದಾಖಲಾಗಿದ್ದು ಈಗ ಅದರ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದೆ. ನ್ಯಾಯಾಧೀಶ ವಿ.ಕೆ ರಾವ್ ಅವರು ಈ ಪ್ರಕರಣವನ್ನು...
ಸುದ್ದಿ

ರೋಷನ್ ಬೇಗ್ ಒಬ್ಬ ದೇಶದ್ರೋಹಿ – ಹರೀಶ್ ಪೂಂಜಾ.

ಮಂಗಳೂರು : ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಪ್ರಧಾನಿ ಮೋದಿ ವಿರುದ್ಧ ಸಚಿವ ರೋಷನ್ ಬೇಗ್ ರೋಷಾವೇಶದ ಮಾತುಗಳನ್ನಾಡಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ಎಲ್ಲರೂ 'ನಮ್ಮ ಮೋದಿ ನಮ್ಮ ಮೋದಿ' ಅಂತ ಹೊಗಳುತ್ತಿದ್ದರು. ಅಧಿಕಾರಕ್ಕೆ ಕೂಡಿಸಿದ ಜನರೇ ಈಗ ಮೋದಿಯನ್ನು ಶಪಿಸುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ. "ನೋಟ್ ಬ್ಯಾನ್ ಮಾಡಿದ ಮೇಲೆ ಏನಾಯ್ತು? ಜನರು 'ಈ ಸೂ.. ಮಗ ಏನೆಲ್ಲಾ ಮಾಡಿಬಿಟ್ಟ' ಎಂದು ಬೈಯುತ್ತಿದ್ದಾರೆ" ಎಂದು ರೋಷನ್ ಬೇಗ್ ಹೇಳಿಕೆ...
ಸುದ್ದಿ

399 ರೂ.ರಿಚಾರ್ಜ್ ಮಾಡಿಸಿದರೆ 100% ಕ್ಯಾಶ್ ಬ್ಯಾಕ್: ಜಿಯೋ ದೀಪಾವಳಿ ಬಂಪರ್ ಆಫರ್.

ಉಚಿತ ಕೊಡುಗೆಗಳ ಮೂಲಕ ದೂರ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿರುವ ರಿಲಾಯನ್ಸ್ ಒಡೆತನದ ಜಿಯೊ ಈ ಬಾರಿಯ ದೀಪಾವಳಿಗೆ ಭರ್ಜರಿ ಕೊಡುಗೆ ಪ್ರಕಟಿಸಿದೆ.ಕ್ಟೋಬರ್ 12ರಿಂದ 18ರವರೆಗೆ 399ರೂ.ಗೆ ರೀಚಾರ್ಜ್ ಮಾಡಿಸಿದರೆ ಶೇ.100ರಷ್ಟು ಹಣ ವಾಪಸ್ ದೊರೆಯಲಿದೆ. ದೀವಾಳಿ ಧನ್ ಧನಾ ಧನ್ ಹೆಸರಿನಲ್ಲಿ ಹೊಸ ಕೊಡುಗೆ ಪ್ರಕಟಿಸಲಾಗಿದ್ದು, 399 ರೂ. ರಿಚಾರ್ಜ್ ಮಾಡಿಸಿದರೆ ತಲಾ 50ರೂ. ನಂತೆ 8 ಬಾರಿ ಕ್ಯಾಶ್ ಬ್ಯಾಕ್ ಪಡೆಯಬಹುದು. ತಲಾ 50 ರೂ.ನ 8...
ಸುದ್ದಿ

ಡಿವಿಎಸ್‌ ವಿರುದ್ಧದ ಪ್ರಕರಣ ರದ್ದು! ಡಿವಿಎಸ್ ಗೆ ಬಿಗ್ ರಿಲೀಫ್!

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಪ್ರಕರಣ ಸಂಬಂಧ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ವಿರುದ್ಧ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಹೈಕೋರ್ಟ್‌ ಬುಧವಾರ ರದ್ದುಗೊಳಿಸಿದೆ. ಅಧೀನ ನ್ಯಾಯಾಲಯದ ವಿಚಾರಣೆ ರದ್ದುಕೋರಿ ಕೇಂದ್ರ ಸಚಿವ ಸದಾನಂದಗೌಡ ಸಲ್ಲಿಸಿದ್ದ,ರಿಟ್‌ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಅರವಿಂದಕುಮಾರ್‌ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರ ಸದಾನಂದಗೌಡರ ವಿರುದ್ಧ ಮಂಗಳೂರಿನ ಜೆಎಂಎಫ್ಸಿ ಕೋರ್ಟ್‌ನಲ್ಲಿ ನಡೆಯುತ್ತಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಿ...
ಸುದ್ದಿ

ಎಸ್ಐ ಆಗಿ ಅಧಿಕಾರ ಸ್ವೀಕರಿಸಿದ ಭಾರತದ ಮೊದಲ ಮಂಗಳಮುಖಿ ಪ್ರೀತಿಕಾ !

ಚೆನ್ನೈ: ಭಾರತದ ಮೊದಲ ಮಂಗಳಮುಖಿ ಪೊಲೀಸ್ ಅಧಿಕಾರಿ ಕೆ. ಪ್ರೀತಿಕಾ ಯಾಶಿನಿ, ಇಂದು ಚೂಲೈಮೇಡು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಆಗಿ ಚಾರ್ಜ್ ತೆಗೆದುಕೊಂಡಿದ್ದಾರೆ. ಪ್ರೀತಿಕಾ ವಿಶೇಷವಾಗಿ ಮಂಗಳಮುಖಿಯರನ್ನ ನಿಭಾಯಿಸುವಲ್ಲಿ ತುಂಬಾ ಸಹಾಯಕರಾಗಿದ್ದಾರೆ. ಚೂಲೈಮೇಡು ಪೊಲೀಸ್ ಠಾಣೆಯಲ್ಲಿ ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗುವುದು ಮತ್ತು ನಮ್ಮಲ್ಲಿ ಯಾವುದೇ ತಾರತಮ್ಯವಿಲ್ಲ ಎಂದು ಠಾಣೆ ಇನ್ಸ್ ಪೆಕ್ಟರ್ ಜೆ.ಶಿವಕುಮಾರ್ ಹೇಳಿದ್ದಾರೆ. ಪ್ರೀತಿಕಾ ಪೊಲೀಸ್ ಸರ್ವೀಸ್ ಗೆ ಸೇರುವುದಕ್ಕೂ ಮೊದಲು ಅನೇಕ ಸಮಸ್ಯೆಗಳನ್ನ ಫೇಸ್...
ಸುದ್ದಿ

ಕಪಾಲಿ ಥಿಯೇಟರ್ ಇನ್ನು ನೆನಪು ಮಾತ್ರ! ಇಂದು ಕೊನೆಯ ಪ್ರದರ್ಶನ.

ಬೆಂಗಳೂರು: ನಗರದ ಮೆಜೆಸ್ಟಿಕ್ ನಲ್ಲಿರುವ ಸುಪ್ರಸಿದ್ಧ ಕಪಾಲಿ ಚಿತ್ರಮಂದಿರದಲ್ಲಿ ಗುರುವಾರ ತಡರಾತ್ರಿ ಕೊನೆಯ ಪ್ರದರ್ಶನದೊಂದಿಗೆ ಇನ್ನು ನೆನಪಾಗಿಯಷ್ಟೇ ಉಳಿಯಲಿದೆ. ಹೌದು ಬರೋಬ್ಬರಿ 49 ವರ್ಷಗಳ ಬಳಿಕ ಕಪಾಲಿ ಥಿಯೇಟರ್ ಶಾಶ್ವತವಾಗಿ ಸ್ಥಗಿತಗೊಳ್ಳುವ ಮೂಲಕ ಇತಿಹಾಸದ ಪುಟ ಸೇರಲಿದೆ. ಶುಕ್ರವಾರದಿಂದ ಕಪಾಲಿ ಚಿತ್ರಮಂದಿರಲ್ಲಿ ಯಾವುದೇ ಚಿತ್ರಪ್ರದರ್ಶನ ಇಲ್ಲ. ಇನ್ನು ಕೆಲವೇ ದಿನಗಳಲ್ಲಿ ಚಿತ್ರಮಂದಿರದ ನೆಲಸಮ ಕಾರ್ಯ ಆರಂಭವಾಗಲಿದ್ದು, ಈ ಸ್ಥಳದಲ್ಲಿ ಬೃಹತ್ ಮಾಲ್ ತಲೆಎತ್ತಲಿದೆ. 1,465 ಆಸನಗಳನ್ನು ಹೊಂದಿದ್ದ ಕಪಾಲಿ ಚಿತ್ರವನ್ನು 1968ರಲ್ಲಿ...
1 3,369 3,370 3,371 3,372 3,373 3,384
Page 3371 of 3384