Tuesday, May 21, 2024
ಮಾರುಕಟ್ಟೆರಾಷ್ಟ್ರೀಯವಾಣಿಜ್ಯಸುದ್ದಿ

ಬ್ಯಾಂಕ್‍ಗಳಿಗೆ 4 ದಿನ ರಜೆ ; ತುರ್ತು ವಹಿವಾಟುಗಳನ್ನು ಇಂದೇ ಮುಗಿಸಿಕೊಳ್ಳಿ – ಕಹಳೆ ನ್ಯೂಸ್

ನವದೆಹಲಿ: ಭಾರತದಲ್ಲಿ ಮುಂದಿನ ವಾರದಲ್ಲಿ ಒಟ್ಟು ನಾಲ್ಕು ದಿನಗಳು ಬ್ಯಾಂಕ್‍ಗೆ ರಜೆ ಇರಲಿದೆ. ಹೀಗಾಗಿ ಜನರು ಅಗತ್ಯವಿರುವ ಬ್ಯಾಂಕ್ ವಹಿವಾಟುಗಳನ್ನು ಆದಷ್ಟು ಬೇಗವೇ ಮುಗಿಸಿದರೆ ಮುಂದೆ ಎದುರಾಗಬಹುದಾದ ಸಮಸ್ಯೆಗಳನ್ನು ತಡೆಯಬಹುದು.

ಜಾಹೀರಾತು
ಜಾಹೀರಾತು

ಮುಂದಿನ ವಾರದಲ್ಲಿ ಒಟ್ಟು ನಾಲ್ಕು ದಿನಗಳವರೆಗೆ ಬ್ಯಾಂಕ್‍ಗಳಿಗೆ ರಜೆ ಇರಲಿದ್ದು, ಜನರು ತಮ್ಮ ಬ್ಯಾಂಕ್‍ಗಳಲ್ಲಿ ಅತ್ಯಂತ ಅಗತ್ಯ ಹಾಗೂ ತುರ್ತು ವಹಿವಾಟುಗಳ ಬಾಕಿ ಉಳಿಸಿದ್ದಲ್ಲಿ ಆದಷ್ಟು ಬೇಗ ಅದನ್ನು ಮುಗಿಸಿಕೊಳ್ಳಲು ಸೂಚನೆ ನೀಡಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ಯಾಂಕ್‍ಗಳಿಗೆ 4 ದಿನ ರಜೆ- ತುರ್ತು ವಹಿವಾಟುಗಳನ್ನು ಇಂದೇ ಮುಗಿಸಿಕೊಳ್ಳಿ

ಜಾಹೀರಾತು
ಜಾಹೀರಾತು

ಬ್ಯಾಂಕ್ ರಜೆಯ ಸಮಯದಲ್ಲಿ ಗ್ರಾಹಕರು ಪ್ರಮುಖ ಕೆಲಸಗಳಿಗೆ ಬೌತಿಕವಾಗಿ ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಆದರೆ ಈ ಸಮಯದಲ್ಲಿ ಎಲ್ಲಾ ಆನ್‍ಲೈನ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಚಟುವಟಿಕೆಗಳು ಯಾವುದೇ ಅಡೆತಡೆಗಳಿಲ್ಲದೇ ಬಳಕೆ ಮಾಡಬಹುದು ಎಂಬುದನ್ನು ಗಮನಿಸಬೇಕು.

ಜಾಹೀರಾತು

ಬ್ಯಾಂಕ್ ಖಾಸಗೀಕರಣವನ್ನು ವಿರೋಧಿಸಿ ಮುಂದಿನ ವಾರದಲ್ಲಿ 2 ದಿನಗಳ ಮುಷ್ಕರವನ್ನು ಬ್ಯಾಂಕ್ ಒಕ್ಕೂಟಗಳು ಘೋಷಿಸಿದೆ. ಈ ಮುಷ್ಕರದಿಂದ ಡಿಸೆಂಬರ್ 16(ಗುರುವಾರ) ಹಾಗೂ 17(ಶುಕ್ರವಾರ)ರಂದು ಬ್ಯಾಂಕ್‍ಗಳು ಮುಚ್ಚಲ್ಪಡುತ್ತವೆ.

ಬ್ಯಾಂಕ್‍ಗಳಿಗೆ 4 ದಿನ ರಜೆ- ತುರ್ತು ವಹಿವಾಟುಗಳನ್ನು ಇಂದೇ ಮುಗಿಸಿಕೊಳ್ಳಿ

ಭಾರತದ ಎಲ್ಲಾ ರಾಜ್ಯಗಳಲ್ಲಿ ನಾಲ್ಕೂ ದಿನಗಳ ಕಾಲ ಬ್ಯಾಂಕ್‍ಗಳು ಮುಚ್ಚಿರುವುದಿಲ್ಲ ಎಂಬುದನ್ನೂ ಗಮನಿಸಬೇಕು. ಬ್ಯಾಂಕ್ ಮುಷ್ಕರ ಹೊರತುಪಡಿಸಿ ಕೆಲವು ರಾಜ್ಯಗಳಲ್ಲಿ ಸ್ಥಳೀಯವಾಗಿ ಆಚರಿಸುವ ಹಬ್ಬಗಳಿಗಾಗಿ ಉಳಿದ ಒಂದು ದಿನದ ರಜೆಯನ್ನು ಹೊಂದಿರುತ್ತದೆ.

ರಜಾ ದಿನಗಳು ಹೀಗಿವೆ:
ಡಿಸೆಂಬರ್ 16- ಬ್ಯಾಂಕ್ ಯೂನಿಯನ್ ಮುಷ್ಕರ
ಡಿಸೆಂಬರ್ 17- ಬ್ಯಾಂಕ್ ಯೂನಿಯನ್ ಮುಷ್ಕರ
ಡಿಸೆಂಬರ್ 18- ಯು ಸೋಸೋ ಮರಣ ವಾರ್ಷಿಕೋತ್ಸವ (ಶಿಲ್ಲಾಂಗ್)
ಡಿಸೆಂಬರ್ 19- ಭಾನುವಾರ

ಬ್ಯಾಂಕ್‍ಗಳಿಗೆ 4 ದಿನ ರಜೆ- ತುರ್ತು ವಹಿವಾಟುಗಳನ್ನು ಇಂದೇ ಮುಗಿಸಿಕೊಳ್ಳಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎರಡು ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಇತ್ತೀಚೆಗೆ ಹೇಳಿದ್ದರು. ಈ ನಿರ್ಧಾರ ದೇಶಾದ್ಯಂತ ಹಲವಾರು ಬ್ಯಾಂಕ್ ಉದ್ಯೋಗಿಗಳ ಹಿನ್ನೆಡೆಗೆ ಕಾರಣವಾಗಿದೆ.

ಬ್ಯಾಂಕ್‍ಗಳಿಗೆ 4 ದಿನ ರಜೆ- ತುರ್ತು ವಹಿವಾಟುಗಳನ್ನು ಇಂದೇ ಮುಗಿಸಿಕೊಳ್ಳಿ

ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ)ದ ಪ್ರಧಾನ ಕಾರ್ಯದರ್ಶಿ ಸಂಜಯ್ ದಾಸ್ ಅವರು ಖಾಸಗೀಕರಣದ ಯೋಜನೆಯನ್ನು ಕೈಬಿಡದಿದ್ದರೆ ಎರಡು ದಿನಗಳ ಮುಷ್ಕರದೊಂದಿಗೆ ಇತರ ಆಂದೋಲನ ಕಾರ್ಯಕ್ರಮಗಳನ್ನೂ ನಡೆಸಲಾಗುವುದು ಎಂದು ಹೇಳಿದ್ದರು.