Recent Posts

Friday, May 17, 2024
ಸುದ್ದಿ

ಕಲ್ಲಂಗಡಿ ಬೆಳೆದು ಉತ್ತಮ ಫಸಲು ಕಾಣುತ್ತಿರುವ ಉಡುಪಿ ರೈತರು – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು

ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳ ಮೂಲಕ ಕಲ್ಲಂಗಡಿ ಬೆಳೆಗಾರರಿಗೆ ಪೆÇ್ರೀತ್ಸಾಹ, ಜತೆಗೆ ತರಬೇತಿ ನೀಡಿ ಇದೀಗ ಉಡುಪಿ ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆಗಾರರ ಸಂಖ್ಯೆ ಹೆಚ್ಚಾಗುತ್ತಿದೆ, ಉ ಕಲ್ಲಂಗಡಿ ಬೆಳೆ ಉತ್ತಮ ಫಸಲನ್ನು ನೀಡುತ್ತಿದ್ದು ರೈತರು ಖುಷಿಯಾಗಿದ್ದಾರೆ. ಹನಿ ನೀರಾವರಿಗೆ, ಹಣ್ಣಿನ ಹೊದಿಕೆಯ ಶೀಟ್‍ಗಳಿಗೆ ಸಬ್ಸಿಡಿ ನೀಡಲಾಗುತ್ತಿದ್ದು ಮತ್ತಷ್ಟು ಬೆಳೆಗಾರರನ್ನು ತಲುಪುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ 10 ವರ್ಷಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕಲ್ಲಂಗಡಿ ಹಣ್ಣಿನ ಉತ್ಪಾದನೆ ಪ್ರಮಾಣ ವೃದ್ಧಿಯಾಗಿದೆ. 2010-11ರಲ್ಲಿ 13 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಈ ಬೆಳೆ 2018-19ನೇ ಸಾಲಿನಲ್ಲಿ 55 ಹೆಕ್ಟೇರ್ ಪ್ರದೇಶಕ್ಕೆ ಏರಿಕೆಯಾಗಿದೆ.

ಜಾಹೀರಾತು
ಜಾಹೀರಾತು

ಉಡುಪಿ ಜಿಲ್ಲೆಯಿಂದ ದಕ್ಷಿಣ ಕನ್ನಡ ಸೇರಿದಂತೆ ಉತ್ತರ ಕರ್ನಾಟಕ, ಮುಂಬಯಿ ಭಾಗಕ್ಕೆ ಹಣ್ಣುಗಳ ಪೂರೈಕೆ ಆಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಸುಮಾರು 100 ಮಂದಿ ಕಲ್ಲಂಗಡಿ ಬೆಳೆಗಾರರಿದ್ದು ಅಕ್ಟೋಬರ್ ಹಾಗೂ ಜನವರಿ ಭಾಗದಲ್ಲಿ ಒಟ್ಟು 2 ಬೆಳೆಗಳನ್ನು ತೆಗೆಯುತ್ತಿದ್ದಾರೆ.

ಜಾಹೀರಾತು

ಉಡುಪಿ ಜಿಲ್ಲಾ ತೋಟಗಾರಿಕೆ ಇಲಾಖೆಯ ಅಂಕಿ-ಅಂಶಗಳ ಪ್ರಕಾರ 2010-11ರಲ್ಲಿ 13 ಹೆಕ್ಟೇರ್‍ಗಳಲ್ಲಿ 520 ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿತ್ತು. 1 ಹೆಕ್ಟೇರ್ ಪ್ರದೇಶದಲ್ಲಿ 40 ಮೆಟ್ರಿಕ್ ಟನ್ ಇಳುವರಿ ಇದ್ದು, ಅದರ ಒಟ್ಟು ಮೌಲ್ಯ 23 ಲಕ್ಷ ರೂ.ಗಳಾಗಿತ್ತು. ಪ್ರಸ್ತುತ 2018-19ರಲ್ಲಿ 55 ಹೆಕ್ಟೇರ್ ಪ್ರದೇಶದಲ್ಲಿ 2,200 ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ. 1 ಹೆಕ್ಟೇರ್ ಪ್ರದೇಶದಲ್ಲಿ 40 ಮೆಟ್ರಿಕ್ ಟನ್ ಇಳುವರಿ ಆಗುತ್ತಿದೆ. ಒಟ್ಟು ಮೌಲ್ಯ 2.20 ಕೋ.ರೂ.ಗೆ ಏರಿಕೆಯಾಗಿದೆ.
ಉಡುಪಿ ಜಿಲ್ಲೆಯ ಮಟ್ಟು, ಕೋಟ, ಮಣೂರು, ಗಂಗೊಳ್ಳಿ, ಬೈಂದೂರು, ಶಿರೂರು, ಕಿರಿಮಂಜೇಶ್ವರ, ಹಿರಿಯಡಕ ಮೊದಲಾದ ಭಾಗಗಳಲ್ಲಿ ಬೆಳೆಗಾರರ ಪ್ರಮಾಣ ಹೆಚ್ಚು ಇದೆ. ಮುಖ್ಯವಾಗಿ ಕರಾವಳಿ ಭಾಗದಲ್ಲಿ ಜಾತ್ರೆ, ಭೂತಾರಾಧನೆ, ಯಕ್ಷಗಾನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಿರುವ ಕಾರಣ ಕಲ್ಲಂಗಡಿಗೆ ಬೇಡಿಕೆ ಹೆಚ್ಚಿದೆ. ಉಳಿದಂತೆ ಮಹಾರಾಷ್ಟ್ರದ ಭಾಗಕ್ಕೂ ಹಣ್ಣುಗಳು ಪೂರೈಕೆ ಆಗುವುದರಿಂದ ಬೆಳೆಗಾರರಿಗೂ ಅನುಕೂಲವಾಗಿದೆ.
ತೋಟಗಾರಿಕೆ ಇಲಾಖೆ ಕಲ್ಲಂಗಡಿ ಬೆಳೆಗಾರರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು. 2012-13ರಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹನಿ ನೀರಾವರಿ ಮಲ್ಚಿಂಗ್ ಶೀಟ್‍ಗಳ ಬಳಕೆಯ ಕುರಿತು ತರಬೇತಿ ನೀಡಿ ಹೆಚ್ಚಿನ ಒಲವು ಮೂಡಲು ಸಾಧ್ಯವಾಗಿದೆ. ಹೊಸದಾಗಿ ಕಲ್ಲಂಗಡಿ ಬೆಳೆ ಪ್ರಾರಂಭಿ ಸುವವರಿಗೆ ಹೆಕ್ಟೇರ್ ಪ್ರಕಾರ 20 ಸಾವಿರ ರೂ. ಸಬ್ಸಿಡಿ, ಹನಿ ನೀರಾವರಿಗಾಗಿ ಶೇ. 90ರಷ್ಟು ಸಬ್ಸಿಡಿ, ಪ್ಲಾಸ್ಟಿಕ್ ಮಲಿಛಿಂಗ್ ಶೀಟ್‍ಗೆ ಹೆಕ್ಟೇರ್‍ಗೆ 16,000 ರೂ. ಸಬ್ಸಿಡಿಯನ್ನು ಇಲಾಖೆ ನೀಡುತ್ತಿದೆ.

ದ. ಕ. ಭಾಗದಲ್ಲಿ ಕಲ್ಲಂಗಡಿ ಬೆಳೆಗೆ ಕೃಷಿಕರು ಅμÉ್ಟೂಂದು ಮನಸ್ಸು ಮಾಡಿಲ್ಲ. ಸೀಮಿತ ಸಂಖ್ಯೆಯ ರೈತರು ಮಾತ್ರ ಗಮನ ಹರಿಸುತ್ತಿದ್ದಾರೆ. ಮಂಗಳೂರು ತೋಟಗಾರಿಕೆ ಇಲಾಖೆಯಲ್ಲಿ ಕಲ್ಲಂಗಡಿ ಬೆಳೆಗಾರರ ಅಂಕಿ-ಅಂಶ ಇಲ್ಲ. ಶೂನ್ಯ ದಾಖಲೆ ಆಗಿದೆ ಅಂತಾರೆ ಮಂಗಳೂರು ತೋಟಗಾರಿಕೆ ಇಲಾಖೆ ಕೇಂದ್ರ ಕಚೇರಿ ಸಹಾಯಕ ಕೆ. ಪ್ರವೀಣ್.