
ಬಂಟ್ವಾಳ : ಗ್ರಾಮ ಶಿವಾಜಿ ಬಳಗ, ಶ್ರೀರಾಮನಗರ ಮಧ್ವ, ಇದರ ವತಿಯಿಂದ ಜೂನ್ 23, ಆದಿತ್ಯವಾರದಂದು ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಕಾವಳಪಡೂರು ಊರಿನ ಸುತ್ತ ಮುತ್ತಲ ಮನೆ ಮನೆಗೆ ತೆರಳಿ ಸಸಿ ನೆಡುವ ಉದ್ದೇಶವನ್ನು ವಿವರಿಸಿ ಗಿಡಗಳನ್ನು ವಿತರಿಸಿದರು. ಗಿಡ ಬೆಳೆಸಿ ಪರಿಸರ ಉಳಿಸಿ ಎಂಬ ಕಾರ್ಯದಲ್ಲಿ ಯುವಕರು ತಮ್ಮನ್ನ ತಾವು ತೊಡಗಿಸಿಕೊಂಡು, ಸಮಾಜ ಹೆಮ್ಮೆ ಪಡುವ ಉತ್ತಮ ಕಾರ್ಯವನ್ನು ಮಾಡಿದ್ದಾರೆ.











