ಕೊರತಿಕಟ್ಟೆಯ ಮಾಡತ್ತಾರು ಎಂಬಲ್ಲಿ ಸಂಪೂರ್ಣ ಜೀರ್ಣಾವಸ್ಥೆಯಲ್ಲಿರುವ ಕಾರಣಿಕದ ಕ್ಷೇತ್ರ. ಈ ಕ್ಷೇತ್ರಕ್ಕೆ ಸರಿಯಾದ ಕಾಯಕಲ್ಪ ಕೊಡುವುದೆಂದು ಈಶ್ವರ ಪ್ರಸನ್ನ ಭಟ್ ಪೆರ್ನೆ ಕೋಡಿ ಇವರ ನೇತೃತ್ವದಲ್ಲಿ ತೀರ್ಮಾನಿಸಲಾಗಿದೆ.

ಸ್ಥಳಕ್ಕೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿ ನಂತರ ಸಭೆ ಸೇರಿ ಇದೇ ಬರುವ ಗುರುವಾರದಂದು ಬೆಳಿಗ್ಗೆ 9ಕ್ಕೆ ಎಲ್ಲರನ್ನು ಸೇರಿಸಿ ಮುಂದಿನ ಕೆಲಸ ಕಾರ್ಯಗಳನ್ನು ಚರ್ಚಿಸಲಾಗುವುದೆಂದು ಊರಿನ ಜನತೆಯ ಸಂಮುಖದಲ್ಲಿ ತಿರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೋಡಿ ವಿಶ್ವೇಶ್ವರ ಭಟ್, ಶ್ರೀಧರ ಗೌಡ, ಕೃಷ್ಣ ಕುಮಾರ್ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು









