Sunday, April 26, 2026
ರಾಜಕೀಯಸುದ್ದಿ

ಬಿಜೆಪಿಯಲ್ಲಿದ್ದುಕೊಂಡು ಕಾಂಗ್ರೆಸ್‍ಗೆ ಮತ ಹಾಕು ಎಂದರೆ ಜನ ಬಿಟ್ಟಾರೆ: ರಮೇಶ ಜಿಗಜಿಣಗಿ – ಕಹಳೆ ನ್ಯೂಸ್

ನನಗೂ ಟಿಕೇಟ್ ಬೇಕು ಎಂದು ಬಿಜೆಪಿ ಕಚೇರಿಗೆ ಯಾರೂ ಮನವಿ ಮಾಡಿಲ್ಲ. ನನ್ನನೊಂದು ಅರ್ಜಿ ಮಾತ್ರ ಕಚೇರಿಯಲ್ಲಿದೆ. ಹೀಗಾಗಿ ನನ್ನ ಪ್ರಚಾರ ಕಾರ್ಯವನ್ನು ಮುಂದೆವರೆಸಿದ್ದೇನೆ ಎಂದು ರಮೇಶ ಜಿಗಜಿಣಗಿ ವಿಜಯಪುರದಲ್ಲಿ ಹೇಳಿಕೆ ನೀಡಿದ್ದಾರೆ.

ಶಾಸಕ ಯತ್ನಾಳ ಸಾಹೇಬರು ಬಿಜೆಪಿಯವರೇ. ಅವರೇನು ಕಾಂಗ್ರೆಸ್ ಅಥವಾ ಇನ್ನೊಂದು ಹೊಲಸು ಪಕ್ಷದವರಲ್ಲ. ಈ ಪಕ್ಷದಿಂದ ಶಾಸಕ, ಸಚಿವರಾಗಿದ್ದಾರೆ ಯಾರಾದರು ಬಿಜೆಪಿಯಲ್ಲಿದ್ದುಕೊಂಡು ಜನರಿಗೆ ಕಾಂಗ್ರೆಸ್ ಗೆ ಮತ ಹಾಕು ಎಂದರೆ ಜನ ಜಾಡಿಸಿ ಒದೆಯುತ್ತಾರೆ ಎಂದು ಜಿಗಜಿಣಗಿ ಪರೋಕ್ಷವಾಗಿ ಪಕ್ಷದವರಿಗೆ ಕುಟಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು