
ಕರ್ನಾಟಕ ಹಿಂದು ಯುವ ವಾಹಿನಿ ಸಂಘ ವತಿಯಿಂದ ಅಭಿವೃದ್ಧಿಪಡಿಸಿ ನಿರ್ಮಿಸಲಾದ ಹುತಾತ್ಮ ವೀರ ಯೋಧ ಸುಬೇದಾರ್ ನಾಗೇಶ್ರವರ ಸ್ಮಾರಕ ಉದ್ಘಾಟನಾ ಸಮಾರಂಭ ಕಾರ್ಯಕ್ರಮವೂ ಹಾಸನದ ತೇಜೂರು ಬಳಿ ದಿನಾಂಕ 26/01/2019 ಶನಿವಾರ ಸಮಯ ಬೆಳಿಗ್ಗೆ 10 ಕ್ಕೆ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಶಿವಾನಂದ ಆಶ್ರಮದ ಶ್ರೀ ರಮಣಾನಂದ ಸ್ವಾಮೀಜಿ, ಶ್ರೀ ವಿದ್ಯಾ ಮಹಾಸಂಸ್ಥಾನಂನ ಅಧ್ಯಕ್ಷರಾದ ಶ್ರೀ ಸಾದ್ವಿ ಯೋಗಿನಿ ಮಾತಾ ಹಾಗೂ ಇತರ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ.

ಧರ್ಮ ರಕ್ಷಣೆ ನಮ್ಮೆಲ್ಲರ ಹೊಣೆ ಅನ್ನುವ ಘೋಷಣೆಯಡಿ ಮೊಳಗಿರುವ ಸಮಾರಂಭಕ್ಕೆ ಸಹಸ್ರ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ.













