Recent Posts

Saturday, April 25, 2026
ಸುದ್ದಿ

ರಾಕೇಶ್ ಕೊಲೆ ಪ್ರಕರಣ: ಮೂವರ ಸೆರೆ – ಕಹಳೆ ನ್ಯೂಸ್

ಮಂಗಳೂರು: ಕಾವೂರು ಠಾಣಾ ವ್ಯಾಪ್ತಿಯ ಪಂಜಿಮೊಗರಿನಲ್ಲಿ ನಡೆದಿದ್ದ ರಾಕೇಶ್ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪಂಜಿಮೊಗರು ಮಂಜೊಟ್ಟಿ ನಿವಾಸಿ ಸುನಿಲ್ ಕುಮಾರ್ ಆಲಿಯಾಸ್ ಕೌಟಿ ೨೬ ಕೋಡಿಕಲ್ ೬ನೇ ಕ್ರಾಸ್ ಪ್ರವೀಣ್ ಪೂಜಾರಿ ೨೩ ಆಗುವಷ್ಟು ಸುಂಕದಕಟ್ಟೆ ನಿವಾಸಿ ಪ್ರೀತಮ್ ೨೨ ಬಂಧಿತ ಆರೋಪಿಗಳಾಗಿದ್ದು ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜನವರಿ ೩ ರಂದು ರಾತ್ರಿ ಮಂಗಳೂರು ಬಳಿಯ ಹಾಲಾಡಿಯಲ್ಲಿ ಕ್ಷುಲ್ಲಕ ಕಾರಣ ಮುಂದಿಟ್ಟು ರಾಕೇಶನನ್ನು ಮೂವರು ತಲವಾರಿನಿಂದ ಕಡಿದು ಕೊಲೆ ನಡೆಸಿದ ಕೃತ್ಯವನ್ನು ಕುಮಾರ್ ಪ್ರವೀಣ್ ಪೂಜಾರಿ ಅವರು ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿತ್ತು.

ಬಂಧಿತ ಪೈಕಿ ಸುನಿಲ್ ಕುಮಾರ್ ವಿರುದ್ಧ ಹಿಂದೆ ಊರಿನಲ್ಲಿ ಎರಡು ಹಲ್ಲೆ ಪ್ರಕರಣಗಳು ದಾಖಲಾಗಿದ್ದವು ಅಲ್ಲದೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಕಲಿಯುವ ಸೂಚನೆಯಂತೆ ೨೦೧೪ ಉದ್ಯಮಿಗಳನ್ನು ಸಂಚು ರೂಪಿಸಿದ ಆರೋಪದಲ್ಲಿ ಬಂಧಿಸಲಾಗಿತ್ತು.

ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಕೂಡಾ ಕೋಕಾ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿತ್ತು ಪ್ರವೀಣ್ ಪೂಜಾರಿ ವಿರುದ್ಧ ಹಿಂದೆ ಕದ್ರಿ ದರೋಡೆ ಪ್ರಕರಣ ಮಂಗಳೂರು ದಕ್ಷಿಣ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ಹಾಗೂ ಮೈಸೂರು ನಗರಗಳ ಹಳ್ಳಿಯಲ್ಲಿ ಪೊಲೀಸ್ ಠಾಣೆಯಲ್ಲಿ ರಾಜ್ಯ ಸಾಗಾಟ ಪ್ರಕರಣ ದಾಖಲಾಗಿದೆ. ಠಾಣೆಯಲ್ಲಿ ಪ್ರಕರಣ ಹಾಗೂ ಗಾಂಜಾ ಮಾರಾಟಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ.