ಕಲ್ಲಡ್ಕ : ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ ಕಲ್ಲಡ್ಕ ವತಿಯಿಂದ 80ನೇ ವರ್ಷದ ಸ್ವಾತ್ರಂತ್ರ್ಯ ದಿನಾಚರಣೆ ಆಚರಿಸಲಾಯಿತು. ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರುಕ್ಮಯ ಪೂಜಾರಿ,
ಕೆ.ಎನ್.ಬಿ. ಮಾಲಕರಾದ ನವಾಜ್, ಸುರಕ್ಷಾ ಸಂಗಮದ ಗೌರವ ಅಧ್ಯಕ್ಷರಾದ ವೆಂಕಟ್ರಾಯ ಪ್ರಭು, ಅಧ್ಯಕ್ಷ ಜಯಪ್ರಶಾಂತ್ ಕುದ್ರೆಮಾರು, ಅಂಗನವಾಡಿ ಕಾರ್ಯಕರ್ತೆ ಉಮಾವತಿ ಪೂರ್ಲಿಪ್ಪಾಡಿ, ಸುರಕ್ಷಾ ಸಂಗಮದ ಸದಸ್ಯರಾದ ವಿಕೇಶ್ ಕುಮಾರ್ ತೋಟ, ಹಿರಿಯರಾದ ದಯಾನಂದ ಏಳ್ತಿಮಾರು,ಯತೀನ್ ಕುಮಾರ್ ಏಳ್ತಿಮಾರು ಸ್ವಾಗತಿಸಿ, ನೀತೀನ್ ಕುಮಾರ್ ಬಿ.ಆರ್. ನಗರ ವಂದಿಸಿದರು.ಯೋಗೀಶ್ ತೋಟ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸುರಕ್ಷಾ ಸಂಗಮದ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.










