
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಜೂನ್ 23 ಮಂಗಳವಾರದಂದು ಬೆಳಿಗ್ಗೆ 9.30ಕ್ಕೆ ಆಗತ ಸ್ವಾಗತ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷರು , ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಮಾನ್ಯ ಶಾಂತರಾಮ ಬುದ್ನಾ ಸಿದ್ಧಿ ವಿಧಾನ ಪರಿಷತ್ ಸದಸ್ಯರು ಶಿರಸಿ ಉತ್ತರ ಕನ್ನಡ, ದಿವಾಕರ ದಾಸ್ ಚೈರ್ ಮ್ಯಾನ್ ಮೆ/ ಎಸ್.ಎಲ್.ವಿ. ಗ್ರೂಪ್ ಮೈಸೂರು, ನಿತೀಶ್ ಗೌಡ, ಮ್ಯಾನೇಜಿಂಗ್ ಪಾರ್ಟನರ್ ಬನ್ಯಾನ್ ಎಂಟರ್ಪ್ರೈಸಸ್ ಚಿಕ್ಕಮಗಳೂರು, ಶ್ರೀಮತಿ ಮೋನಿಶಾ ನರಸಿಂಹ ಮೂರ್ತಿ ಚಿಕ್ಕಮಗಳೂರು, ಶ್ರೀಮತಿ ನಾಗರತ್ನ ವಿಷ್ಣು ಹೆಬ್ಬಾರ್ ಸ್ಥಾಪಕರು ಬೇಕಲ ಗೋಕುಲಂ ಗೋಶಾಲೆ ಪರಂಪರಾ ವಿದ್ಯಾಪೀಠಂ ಅಲಕೋಡ್ ಕೇರಳ, ಸಂಜಯ್ ಮೇಲಾಂಟ ಉದ್ಯಮಿ ಮಂಗಳೂರು ಭಾಗವಹಿಸಲಿದ್ದಾರೆ.









