
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯದಲ್ಲಿ ಬೇಸಿಗೆ ಆರಂಭದಲ್ಲೇ ನೀರಿನ ಮಟ್ಟ ಇಳಿಕೆ ಕಂಡಿದೆ. ಒಂದು ವೇಳೆ ಮುಂಗಾರು ತಡವಾದ್ರೆ ಬೆಂಗಳೂರು ಮಾತ್ರವಲ್ಲದೇ ಕಾವೇರಿ ನೀರು ಅವಲಂಬಿಸಿರುವ ಜನರಿಗೆ ನೀರಿನ ಸಮಸ್ಯೆ ಎದುರಾಗುವ ಭೀತಿಯಿದೆ.
ಈ ವರ್ಷ ಕೆಆರ್ಎಸ್ ಅಣೆಕಟ್ಟೆ ಅವಧಿಗೂ ಮುನ್ನವೇ ಭರ್ತಿಯಾಗುವ ಮೂಲಕ ದಾಖಲೆ ಬರೆದಿತ್ತು. ಇದೀಗ 124.80 ಗರಿಷ್ಠ ಮಟ್ಟ ಸಂಗ್ರಹ ಸಾಮರ್ಥ್ಯದಲ್ಲಿ ನೀರಿನ ಮಟ್ಟ 99 ಅಡಿಗೆ ತಲುಪಿದೆ. ಒಳಹರಿವು 66 ಕ್ಯೂಸೆಕ್ ಇದ್ದು, 4,033 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದರೂ ಕೂಡ ಪ್ರಸ್ತುತ ಬೆಳೆದು ನಿಂತಿರುವ ಬೆಳೆಗಳಿಗೆ ಕಟ್ಟು ಪದ್ದತಿಯಂತೆ ನೀರು ನೀಡಲಾಗುತ್ತಿದೆ.
ಎಲ್ ನಿನೋ ಪ್ರಭಾವದಿಂದಾಗಿ ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗುವುದಿಲ್ಲ ಎನ್ನುವ ಹವಾಮಾನ ತಜ್ಞರ ವರದಿ ಆತಂಕಕ್ಕೆ ಕಾರಣವಾಗಿದೆ. ಮುಂಗಾರಿನ ಅವಧಿಯಲ್ಲಿ ರಾಜ್ಯದ ಬಹುತೇಕ ಕಡೆ ಮಳೆ ಕ್ಷೀಣಿಸುವ ಸಾಧ್ಯತೆ ಇದೆ. ಇದು ಆತಂಕ ಮೂಡಿಸಿದೆ. ಕುಡಿಯುವ ಮತ್ತು ಬೆಳೆಗೆ ನೀರೊದಗಿಸಲು ಮಳೆ ಅನಿವಾರ್ಯವಾಗಲಿದೆ.
ಕಳೆದ 10 ವರ್ಷದಲ್ಲಿ ನೀರಿನ ಸಂಗ್ರಹ(ಏ.18ಕ್ಕೆ)
ವರ್ಷ ನೀರಿನ ಮಟ್ಟ
2017 74.32 ಅಡಿ
2018 73.94 ಅಡಿ
2019 92.37 ಅಡಿ
2020 103.39 ಅಡಿ
2021 97.72 ಅಡಿ
2022 103.26 ಅಡಿ
2023 93.46 ಅಡಿ
2024 83.22 ಅಡಿ
2025 101.35 ಅಡಿ
2026 99 ಅಡಿ









