
ಮಂಗಳೂರು: ಈ ಕಡಲ ನಗರಿ ಮಂಗಳೂರು ಒಂದಲ್ಲ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿದೆ. ಈ ಬಾರಿ ಮಂಗಳೂರಿನ ನಂತೂರಿನಲ್ಲಿ ನಡೆದ ಐದನೇ ಜನನುಡಿ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ನಟ ಪ್ರಕಾಶ್ ರೈ ಆಗಮಿಸಿದ್ದಾರೆ.
ಇದು ಮಂಗಳೂರಿನ ಜನತೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುವಂತೆ ಮಾಡಿದೆ. ಈ ಸಂಧರ್ಭದಲ್ಲಿ ಕೆಲ ಕಾರ್ಯಕರ್ತರು ನಟ ಪ್ರಕಾಶ್ ರೈ ವಿರುದ್ದ ಧಿಕ್ಕಾರ ಕೂಗಿ ಸಮಾವೇಶ ಸ್ಥಳಕ್ಕೆ ನುಗ್ಗಲು ಯತ್ನಿಸಿದ್ದಾರೆ.
ಸದ್ಯದಲ್ಲೆ ಎಚ್ಚೆತ್ತುಕೊಂಡ ಮಂಗಳೂರು ಪೊಲೀಸರು ಐದು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಈಗಾಗಲೇ ಬಂಧಿತರಾದವರು ಹಿಂದೂ ಜಾಗರಣ ವೇದಿಕೆಯ ಕಾರ್ಯುಕರ್ತರು ಎಂದು ತಿಳಿದುಬಂದಿದೆ.









