Recent Posts

Saturday, April 25, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ಶ್ರೀ ದುರ್ಗಾ ಭಜನಾ ಮಂದಿರ ಕುಂಜೂರುಪಂಜ ಇದರ 23ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ನೂತನ ಪದಾಧಿಕಾರಿಗಳ ಆಯ್ಕೆ – ಕಹಳೆ ನ್ಯೂಸ್

ಪುತ್ತೂರು : ಶ್ರೀ ದುರ್ಗಾ ಭಜನಾ ಮಂದಿರ ಕುಂಜೂರುಪಂಜ ಇಲ್ಲಿ ನಡೆಯುವ 23 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಶ್ರೀದುರ್ಗಾ ಸೇವಾ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ಗೌಡ ಗೆಣಸಿನಕುಮೇರು ಹಾಗೂ ಸೇವಾ ಸಮಿತಿಯ ಎಲ್ಲಾ ಸದಸ್ಯರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ, ಸಾರ್ವಜನಿಕ ಗಣೇಶೋತ್ಸದ ಅಧ್ಯಕ್ಷರಾಗಿ ಸಂದೀಪ್ ಕುಲಾಲ್ ಕಂಪ, ಉಪಾಧ್ಯಕ್ಷರಾಗಿ ಉಮೇಶ್ ಪೂಜಾರಿ ಮೇಗಿನಪಂಜ, ಕಾರ್ಯದರ್ಶಿಯಾಗಿ ಅರುಣ್ ರೈ ಕಲ್ಕೋಟೆ, ಜೊತೆ ಕಾರ್ಯದರ್ಶಿಯಾಗಿ ರಂಜಿತ್ ಶೆಟ್ಟಿ ದೇವಸ್ಯ , ಕೋಶಾಧಿಕಾರಿಯಾಗಿ ಈಶ್ವರ್ ಎಂ.ಎಸ್. ಆಯ್ಕೆಯಾದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಭೆಯಲ್ಲಿ ಗಣೇಶೋತ್ಸವ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರುಗಳಾದ ಜಯಂತ್ ಕುಂಜೂರು ಪಂಜ, ಮಚ್ಚಿಮಲೆ ವಿರೂಪಾಕ್ಷ ಭಟ್ ಉಪಸ್ಥಿತರಿದ್ದರು. ಹಾಗೂ ಶ್ರೀದುರ್ಗಾ ಸೇವಾ ಸಮಿತಿಯ ಕಾರ್ಯದರ್ಶಿಯಾದ ಜಗದೀಶ್ ಪೂಜಾರಿ ವಳತ್ತಡ್ಕ, ರಮನಾಥ ಶೆಟ್ಟಿ,ಗುರುರಾಜ್ ಕಲ್ಲೂರಾಯ,ಸುರೇಶ್ ದೇವಸ್ಯ,ರಾಜೇಶ್ ಗೌಡ, ಯಶೋಧರ ಆರಿಗ,ನವೀನ್ ರೈ, ಲವ ಕುಮಾರ್,ರಂಜಿತ್ ಶೆಟ್ಟಿ,ಚಂದ್ರ ಶೇಖರ್ ವಿಶ್ವಕರ್ಮ,ಪ್ರಮೋದ್ ಕುಮಾರ್ ಜೈನ್, ಬಾಲಕೃಷ್ಣ ಪೂಜಾರಿ,ವಿನಯ ಕೆ. ಪಿ, ಸುರೇಶ್ ಪೂಜಾರಿ,ಮೋಕ್ಷಿತ್, ಅಭಿಲಾಷ್ ರೈ,ಯತೀಶ್ ಪೂಜಾರಿ,ದಯಾನಂದ, ಚೇತನ್ ಕುಲಾಲ್,ನವೀನ್ ಕುಲಾಲ್,ತಿಮ್ಮಪ್ಪ ನಾಯ್ಕ,ವಸಂತ ಕುಲಾಲ್ ಹಾಗೂ ಊರಿನ ಸಮಸ್ತ ಗಣ್ಯರು ಉಪಸ್ಥಿತರಿದ್ದರು.