Sunday, May 19, 2024
ಅಂತಾರಾಷ್ಟ್ರೀಯಕ್ರೈಮ್ಸುದ್ದಿ

ಅಣ್ಣನನ್ನೇ ಭೀಕರ ಹತ್ಯೆಗೈದ ಅಪ್ತಾಪ್ತೆ : ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಾ–ಕಹಳೆ ನ್ಯೂಸ್

ರಾಯ್‌ಪುರ: ಹುಡುಗರ ಜೊತೆ ಫೋನ್‌ನಲ್ಲಿ ಮಾತನಾಡಬೇಡ ಎಂದು ಬುದ್ಧಿ ಹೇಳಿದ ಅಣ್ಣನನ್ನೇ ಅಪ್ತಾಪ್ತೆ ಸಹೋದರಿ ಹತ್ಯೆ ಮಾಡಿದ ಘಟನೆ ಛತ್ತೀಸ್‌ಗಢದ ಖೈರಗಢ – ಚುಯಿಖಾದನ್-ಗಂಡೈ (ಕೆಸಿಜಿ) ಜಿಲ್ಲೆಯ ಚುಯಿಖಾಡನ್ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಲಿದಿಹ್ ಕಾಲಾ ಗ್ರಾಮದಲ್ಲಿ ನಡೆದಿದೆ.
14 ವರ್ಷದ ಬಾಲಕಿ ಹುಡುಗರ ಜೊತೆ ಸದಾ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಇದನ್ನು ಗಮನಿಸಿದ ಆಕೆಯ 18 ವರ್ಷದ ಸಹೋದರ ಬುದ್ಧಿವಾದ ಹೇಳಿದ್ದ. ಹುಡುಗರ ಜೊತೆ ಮಾತನಾಡದಂತೆ ಎಚ್ಚರಿಕೆ ನೀಡಿದ್ದ. ಇದರಿಂದ ಕೋಪಗೊಂಡ ಆಕೆ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಣ್ಣ ಮಲಗಿದ್ದ ಸಂದರ್ಭದಲ್ಲಿ ಆತನ ಗಂಟಲಿಗೆ ಕೊಡಲಿಯಿಂದ ಕೊಚ್ಚಿದ್ದಾಳೆ.
ಘಟನೆ ಬಳಿಕ ಸ್ನಾನ ಮಾಡಿ, ರಕ್ತಸಿಕ್ತ ತನ್ನ ಬಟ್ಟೆಗಳನ್ನು ತೊಳೆಯಲು ಮುಂದಾಗಿದ್ದಾಳೆ. ಅಷ್ಟರಲ್ಲೇ ತಂದೆ – ತಾಯಿ ಮನೆಗೆ ಮರಳಿದ್ದಾರೆ. ಘಟನೆ ನೋಡಿ ಆಘಾತಕ್ಕೊಳಗಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ಎದುರು ಹತ್ಯೆ ಮಾಡಿರುವುದಾಗಿ ಅಪ್ತಾಪ್ತೆ ತಪ್ಪು ಒಪ್ಪಿಕೊಂಡಿದ್ದಾಳೆ.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು