Wednesday, May 22, 2024
ಉಡುಪಿಕಾಪುಸುದ್ದಿ

ಕಾಪು: ಬಿಜೆಪಿ ಕಾಪು ಮಂಡಲ ಯುವ ಮೋರ್ಚಾ, ಮಹಿಳಾ ಮೋರ್ಚಾದಿಂದ ಬೃಹತ್ ರೋಡ್ ಶೋ : ಮೈಸೂರು ಸಂಸದ ಪ್ರತಾಪ್ ಸಿಂಹ ಭಾಗಿ – ಕಹಳೆ ನ್ಯೂಸ್

ಕಾಪು: ಬಿಜೆಪಿ ಕಾಪು ಮಂಡಲ ಯುವ ಮೋರ್ಚಾ, ಮಹಿಳಾ ಮೋರ್ಚಾ ಆಯೋಜಿಸಿದ ಬೃಹತ್ ರೋಡ್ ಶೋ ಕಾರ್ಯಕ್ರಮವು ಕಾಪು ಪೇಟೆಯಲ್ಲಿ ಭಾನುವಾರ ಸಂಜೆ ನಡೆದಿದ್ದು ಮೈಸೂರು ಸಂಸದ ಪ್ರತಾಪ್ ಸಿಂಹ ಸ್ಟಾರ್ ಆಗಮಿಸಿದ್ದರು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜನಾರ್ಧನ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ರೋಡ್‌ಶೋಗೆ ಚಾಲನೆ ನೀಡಲಾಯಿತು. ಸಾರ್ವಜನಿಕರನ್ನು ಉದ್ದೇಶಿಸಿ ಪ್ರತಾಪ್ ಸಿಂಹ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ, ಜನಪರ ಕಲ್ಯಾಣ ಕಾರ್ಯಕ್ರಮಗಳು ಮತ್ತಷ್ಟು ಮುಂದುವರೆಯಲು ಭಾರತ ಮಾತೆಯ ಸುಪುತ್ರ ಮೂರನೇ ಬಾರಿಗೆ ಪ್ರಧಾನಿ ಆಗಬೇಕು. ಅವರು ಪ್ರಧಾನಿ ಆಗಲು ಕೈ ಎತ್ತಲು ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಕೋಟ ಶ್ರೀನಿವಾಸ ಪೂಜಾರಿ ಬೃಜೇಶ್ ಚೌಟ ಸಹಿತ ರಾಜ್ಯದಿಂದ ಬಿಜೆಪಿ, ಜೆಡಿಎಸ್‌ನ ಎಲ್ಲಾ 28 ಅಭ್ಯರ್ಥಿಗಳು ಗೆದ್ದು ಬರುವಲ್ಲಿ ಮತದಾನ ಮಾಡಿರಿ ಎಂದು ಕರೆ ನೀಡಿದರು.

ಜಾಹೀರಾತು
ಜಾಹೀರಾತು

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಭಾರತದ ದೇಶದ ಭವಿಷ್ಯವನ್ನು ಬರೆಯುವ ಚುನಾವಣೆ. ಸಮರ್ಥ, ಶಕ್ತಿಶಾಲಿ, ಸ್ವಾಭಿಮಾನ ಭಾರತವನ್ನು ನಿರ್ಮಾಣ ಮಾಡುವ ತಾಕತ್ತು ಇರುವ ಏಕೈಕ ವ್ಯಕ್ತಿ ಭಾರತದ ಪ್ರಧಾನ ಮಂತ್ರಿನರೇAದ್ರ ಮೋದಿ ಅವರೇ ಸಮರ್ಥ ನಾಯಕ. ಸಮರ್ಥ ಭಾರತದ ಸಮರ್ಥ ನಾಯಕರಾಗಬಲ್ಲ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಬಿಜೆಪಿಗೆ ಮತವನ್ನು ನೀಡಿ ಗೆಲ್ಲಿಸುವಂತೆ ಕರೆ ನೀಡಿದರು.

ಜಾಹೀರಾತು

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಳೆದ 10 ವರ್ಷಗಳ ಆಡಳಿತದಲ್ಲಿ ಹಗರಣಗಳಿಗೆ ಮುಕ್ತಿ ನೀಡಿದ ಪ್ರಧಾನಿ ನರೇಂದ, ಮೋದಿ ಅವರ ಸಂಕಲದಿAದ ಭಾರತ ಜಗತ್ತಿಗೆ ದಾರಿ ದೀಪ ವಾಗುತ್ತಿದೆ ಎಂದರು

ಈ ಸಂದರ್ಭ ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ ಲಾಲಾಜಿ ಆರ್. ಮೆಂಡನ್, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಬಿಜೆಪಿ ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಯುವಮೋರ್ಚ ಜಿಲ್ಲಾ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಕಾಪು ಮಂಡಲ ಅಧ್ಯಕ್ಷ ಸೋ,.. ಪಾಂಗಾಳ, ಮಹಿಳಾ ಮೋರ್ಚ ಅಧ್ಯಕ್ಷೆ ನೀತಾ ಗುರುರಾಜ್, ರಾಜ್ಯ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಚುನಾವಣಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ಹೆಜಮಾಡಿ, ಮೊದಲಾದವರು ಪಾಲ್ಗೊ0ಡಿದ್ದರು.

ಕಾಪು ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಹೊರಟ ರೋಡ್ ಶೋ, ಕಾಪು ಪೇಟೆ ಪೊಲಿಪು ಜಂಕ್ಷನ್ ವರೆಗೆ ಸಾಗಿ ಹಿಂತಿರುಗಿ ಬ0ದು, ಕಾಪು ಪೇಟೆಯಲ್ಲಿ ಸಮಾಪನೆಗೊಂಡಿತು