Wednesday, May 22, 2024
ಕಾಸರಗೋಡುಯಕ್ಷಗಾನ / ಕಲೆ

ಕುಂಬಳೆಯಲ್ಲಿ ಪ್ರಥಮ ಪ್ರದರ್ಶನ ಕಂಡ “ಕಣಿಪುರ ಶ್ರೀ ಬಾಲಗೋಪಾಲ” ನೃತ್ಯ ರೂಪಕ -ಕಹಳೆ ನ್ಯೂಸ್

ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ದೇವರ ಪುನಃ ಪ್ರತಿಷ್ಠಾ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಧಾನ ವೇದಿಕೆಯಲ್ಲಿ ಪುತ್ತೂರಿನ ವೈಷ್ಣವೀ ನಾಟ್ಯಾಲಯದ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಇವರು ನೃತ್ಯ ಸಂಯೋಜನೆ ಹಾಗೂ ನಿರ್ದೇಶನವನ್ನು ಮಾಡಿದ ” ಶ್ರೀ ಬಾಲಗೋಪಾಲ” ಎನ್ನುವ ವಿನೂತನ ನೃತ್ಯ ರೂಪಕ ಪ್ರಪ್ರಥಮ ಬಾರಿಗೆ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರವಾಯಿತು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ನೃತ್ಯ ರೂಪಕ ಹಾಗೂ ಭರತನಾಟ್ಯ ಪ್ರದರ್ಶನದಲ್ಲಿ ಬದಿಯಡ್ಕ ಹಾಗೂ ಕುಂಬಳೆ ಶಾಖೆಯ ಸುಮಾರು 50 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ಸಾಹಿತ್ಯ ರಚನೆ ಮಾಡಿದ ಡಾಕ್ಟರ್ ರಾಜೇಶ್ ಬೆಜ್ಜಂಗಳ, ರಾಗ ಸಂಯೋಜನೆ ಮಾಡಿ ಹಾಡುಗಾರಿಕೆಯಲ್ಲಿ ಸಹಕರಿಸಿದ ರಾಷ್ಟ್ರಪ್ರಶಸ್ತಿ ವಿಜೇತ ವಿದ್ವಾನ್ ವೆಳ್ಳಿಕ್ಕೋತ್ ವಿಷ್ಣು ಭಟ್, ರೂಪಕ ರಚನೆಗೆ ಸಹಕರಿಸಿದ ಲಕ್ಷ್ಮಣ ಅಡೂರು ಹಾಗೂ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವವನ್ನು ನೀಡಿ ಸಹಕರಿಸಿದ ಉದ್ಯಮಿ ಶಿವಶಂಕರ ನೆಕ್ರಾಜೆ ಕುಟುಂಬದವರನ್ನು ವೈಷ್ಣವೀ ತಂಡದ ವತಿಯಿಂದ ಗೌರವಿಸಲಾಯಿತು.

ಜಾಹೀರಾತು