Monday, April 27, 2026

archivekahale news

ಸುದ್ದಿ

Breaking News : ಭಾರಿ ಭೂ ಕುಸಿತಕ್ಕೆ ಚಾರ್ಮಾಡಿ ಘಾಟಿ ಬಂದ್ ; ಮಧ್ಯದಲ್ಲಿ ಸಿಲುಕಿದ ಮೂವತ್ತಕ್ಕೂ ಅಧಿಕ ಪ್ರಯಾಣಿಕರ ಸ್ಥಿತಿ ಶೋಚನೀಯ – ಕಹಳೆ ನ್ಯೂಸ್

ಉಜಿರೆ : ರಾಜ್ಯಾದ್ಯಂತ ಮುಂದುವರಿದ ಮುಂಗಾರು ಅಬ್ಬರಕ್ಕೆ ಚಾರ್ಮಾಡಿ ಘಾಟ್​ ರಸ್ತೆಯಲ್ಲಿ ಗುಡ್ಡ ಕುಸಿತವಾದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇನ್ನು ಕೂಡಾ ಗುಡ್ಡ ಕುಸಿತ ಮುಂದುವರಿದೆ. ಘಾಟ್​​ನ ರಸ್ತೆಯ 2ನೇ ಮತ್ತು 3ನೇ ತಿರುವಿನಲ್ಲಿ ಮಂಗಳವಾರ ಗುಡ್ಡ ಕುಸಿತವಾಗಿದ್ದು, ಸದ್ಯ ಮಾರ್ಗ ಬದಲಾವಣೆ ಮಾಡಿ ಸಂಚಾರಕ್ಕೆ ಅನುಕೂಲ ಮಾಡಲಾಗಿದೆ. ಆದರೆ ಮಂಗಳೂರಿನಿಂದ ಬೆಂಗಳೂರಿಗೆ ಧರ್ಮಸ್ಥಳ ಹಾಗೂ ಉಜಿರೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಸೋಮವಾರ ಸಂಜೆ 7 ಗಂಟೆಗೆ ಸುಮಾರಿಗೆ...
ಸುದ್ದಿ

Breaking News : ರಮಾನಾಥ ರೈ ಆಪ್ತ ಸುರೇಂದ್ರ ಬಂಟ್ವಾಳ್ ಗ್ಯಾಂಗ್ ನಿಂದ ಬಿಜೆಪಿ ಕಾರ್ಯಕರ್ತರ ಕೊಲೆ ಯತ್ನ – ಕಹಳೆ ನ್ಯೂಸ್

ಬಂಟ್ವಾಳ: ಮಾಜಿ ಸಚಿವ ರಾಮನಾಥ ರೈ ಆಪ್ತರು ಗೂಂಡಾಗಿರಿ ನಡೆಸಿದ್ದಾರೆ. ಭಾರತಿಯ ಜನತಾ ಪಕ್ಷದ ಗಣೇಶ್ ಮಾಣಿ, ಪುಷ್ಪರಾಜ್ ಎಂಬ ಕಾರ್ಯಕರ್ತರ ಮೇಲೆ ಹಲ್ಲೆ ನಡುಬೀದಿಯಲ್ಲಿಯೇ ಹೊಡೆದು ತಲವಾರಿಂದ ದಾಳಿ ಮಾಡಿ ಕೊಲೆಗೆ ಪ್ರಯತ್ನಿಸಿದ್ದಾರೆ. ಘಟನೆಯಲ್ಲಿ ಮಾಜಿ ಸಚಿವ ರಾಮನಾಥ ರೈ ಆಪ್ತ ಸುರೇಂದ್ರ ಬಂಟ್ವಾಳ್ ತನ್ನ ಸಹಚರರೊಂದಿಗೆ ತಲ್ವಾರ್ ದಾಳಿ ನಡೆಸಿದ್ದಾನೆ.   ಆರೋಪಿ ಸುರೇಂದ್ರ ಬಂಟ್ವಾಳ ಬಿಜೆಪಿ ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗಿದ್ದು, ಪರೀಸ್ಥಿತಿ ಗಂಭೀರವಾಗಿದೆ....
ಸುದ್ದಿ

Breaking News : ಮಾಜಿ ಪ್ರಧಾನಿ ವಾಜಪೇಯಿ ಏಮ್ಸ್ ಆಸ್ಪತ್ರೆಗೆ ದಾಖಲು – ಕಹಳೆ ನ್ಯೂಸ್

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 93 ವರ್ಷದ ವಾಜಪೇಯಿ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಕೆಲ ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ವಾಜಪೇಯಿ ಅವರು 1991, 1996, 1998, 1999 ಹಾಗೂ 2004ರಲ್ಲಿ ಲಕ್ನೋ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಆಗಿದ್ದರು. 1924ರಲ್ಲಿ ಜನಿಸಿದ ವಾಜಪೇಯಿ ಅವರು 1942 `ಭಾರತ ಬಿಟ್ಟು ತೊಲಗಿ ಚಳುವಳಿ’ಯಲ್ಲಿ ರಾಜಕಾರಣಕ್ಕೆ ಪ್ರವೇಶಿಸಿದ್ದರು. ವಿಶ್ವಸಂಸ್ಥೆಯ ಸಾಮಾನ್ಯ...
ಸುದ್ದಿ

ಚೀನಾ ರಸ್ತೆ ಯೋಜನೆ ತಿರಸ್ಕಾರ ; ಭಾರತದ ದಿಟ್ಟ ನಿರ್ಧಾರ – ಕಹಳೆ ನ್ಯೂಸ್

ಚೀನಾ : ಐರೋಪ್ಯ ರಾಷ್ಟ್ರಗಳನ್ನು ಏಷ್ಯಾ ರಾಷ್ಟ್ರಗಳೊಂದಿಗೆ ಬೆಸೆಯುವ ಚೀನಾದ ಮಹತ್ವಾಕಾಂಕ್ಷಿ ಅರ್ಥಿಕ ಕಾರಿಡಾರ್ ಯೋಜನೆಯಾದ ಬೆಲ್ಟ್ ಆಂಡ್ ರೋಡ್ ಅನ್ನು ಭಾರತ ಮತ್ತೊಮ್ಮೆ ತಿರಸ್ಕರಿಸಿ ಚೀನಾಗೆ ಟಾಂಗ್ ನೀಡಿದೆ. ಈ ಯೋಜನೆಯಡಿ ಪಾಕ್ ಅಕ್ರಮಿತ ಕಾಶ್ಮೀರ ಮೂಲಕ ರಸ್ತೆ ಹಾದು ಹೋಗುತ್ತದೆ ಎಂಬ ಕಾರಣಕ್ಕಾಗಿ ಭಾರತ ಆರಂಭದಿಂದಲೂ ಇದನ್ನು ವಿರೋಧಿಸುತ್ತಲೇ ಬಂದಿದೆ. ಎಸ್ ಸಿ ಒ ಶೃಂಗದಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ ಮೋದಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಬೃಹತ್ ಸಂಪರ್ಕ...
ಸುದ್ದಿ

ಮನೆ ದುರಸ್ತಿ ಮಾಡಿಕೊಡುವುದಾಗಿ ಸಂತ್ರಸ್ತೆಗೆ ಅಶೋಕ್ ಕುಮಾರ್ ರೈ ಅಭಯ – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ಕಸಬಾ ಆನಂದಾಶ್ರಮ ಬಳಿಯ ಸಿಂಹವನ ನಿವಾಸಿ ಕಮಲ ಎಂಬುವವರ ಮನೆಯು ಗಾಳಿ, ಮಳೆಗೆ ಕುಸಿದು ಬಿದ್ದಿದ್ದು, ವಿಷಯ ತಿಳಿದು ಕಮಲ ಅವರ ಮನೆಗೆ ಭೇಟಿ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಮನೆ ದುರಸ್ತಿಗೆ ಬೇಕಾದ ಬ್ಲಾಕ್, ಸಿಮೆಂಟ್ ಶೀಟ್ ಒದಗಿಸಿ ಮನೆ ದುರಸ್ತಿ ಮಾಡಿಕೊಡುವುದಾಗಿ ಅಶೋಕ್​ ಕುಮಾರ್​ ರೈ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಈ ವೇಳೆ...
ಸುದ್ದಿ

ಬೆಂಗಳೂರಿನ ಹವ್ಯಕ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು ‘ಉಚಿತ ವೈದ್ಯಕೀಯ ತಪಾಸಣಾ ಶಿಬಿರ’ – ಕಹಳೆ ನ್ಯೂಸ್

ಬೆಂಗಳೂರು :  ಅಖಿಲ ಹವ್ಯಕ ಮಹಾಸಭೆ(ರಿ) ಬೆಂಗಳೂರು  ಇದರ ವತಿಯಿಂದ ಇಂದು ಸಾರ್ವಜನಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ನಾಡಿನ ಸುಪ್ರಸಿದ್ದ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ ಮಲ್ಲೇಶ್ವರದಲ್ಲಿರುವ ಹವ್ಯಕ ಮಹಾಸಭೆಯ ಸಭಾಭವನದಲ್ಲಿ ಇಂದು ಬೆಳಗ್ಗೆ 10.00 ರಿಂದ ಶಿಬಿರ ನಡೆಯಿತು. ಪ್ರಸಿದ್ಧ ಹೃದಯ ತಜ್ಞ ಡಾ. ದಿವಾಕರ್ ಭಟ್ , ಡಾ. ರವಿಶಂಕರ್, ಡಾ. ಬಿ ಎಸ್ ಭಟ್,  ಡಾ. ಅರುಣ್ ಅಡಕ್ಕೋಳಿ, ಡಾ. ಬಾಲಮುರಳಿ,  ಡಾ. ಪ್ರಭಾಕರ್ ಅಲಗೋಡು,  ಡಾ. ಎಸ್ ಆರ್ ಹೆಗಡೆ ಹಾಗೂ ಮಹಾಸಭೆಯ ಅಧ್ಯಕ್ಷರು...
ಸುದ್ದಿ

” ಬೋಟ್ ತರಲೇ !? ” ಹತ್ತೂರಿಗೂ ಗಬ್ಬುವಾಸನೆ ಬೀರುತ್ತಿದ್ದ ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಧಿಕಾರಿಗಳ ಬೆವರಿಳಿಸಿದ ನೂತನ ಶಾಸಕ ಸಂಜೀವ ಮಠಂದೂರು – ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಹಲವು ಸಮಸ್ಯೆಗಳಿವೆ. ಆದರೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಒಮ್ಮೆಗೇ ಪರಿಹಾರ ಕಷ್ಟ. ಆದರೂ ಮಳೆಗಾಲದ ಹಿನ್ನೆಲೆಯಲ್ಲಿ ತುರ್ತು ಕಾಮಗಾರಿ ನಡೆಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಪುತ್ತೂರು ಸರಕಾರಿ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ, ಬಳಿಕ ಮಾಧ್ಯಮದ ಜತೆ ಮಾತನಾಡಿದರು. ಪುತ್ತೂರು ಜಿಲ್ಲೆಯ ಎರಡನೇ ದೊಡ್ಡ ಆಸ್ಪತ್ರೆ. ಬಂಟ್ವಾಳದಿಂದಲೂ ಇಲ್ಲಿಗೆ ಜನರು ಬರುತ್ತಾರೆ. ಆದರೆ ಅಷ್ಟು ಮೂಲ ಸೌಕರ್ಯಗಳು ಇಲ್ಲಿಲ್ಲ. ಆಸ್ಪತ್ರೆಯ...
ಸುದ್ದಿ

ಮಂಗಳಾದೇವಿ ದೇವಸ್ಥಾನದಲ್ಲಿ ಉರುಳಿದ ಅಶ್ವಥ ಮರ ; ಸಿ ಸಿ ಟಿ ವಿ ದೃಶ್ಯ – ಕಹಳೆ ನ್ಯೂಸ್

ಮಂಗಳೂರು : ಮಂಗಳೂರಿನ ಇತಿಹಾಸ ಪ್ರಸಿದ್ಧ ಮಂಗಳಾದೇವಿ ದೇವಸ್ಥಾನದ ಮುಂಭಾಗದಲ್ಲಿರುವ ಅಶ್ವಥ ಮರ ಉರುಳಿದ ದೃಶ್ಯ ಸಿ ಸಿ ಟಿ ವಿಯಲ್ಲಿ ಸೆರೆಯಾಗಿದೆ. https://youtu.be/U0AM-wzzP5U ದೇವಸ್ಥಾನದಲ್ಲಿ ಸಂಜೆ ಪೂಜೆಯ ವೇಳೆಗೆ ದೇವಸ್ಥಾನದ ಎದುರಿಗೆ ಇದ್ದ ಅಶ್ವ ಮರ ಉರುಳಿಬಿದ್ದು ನಾಲ್ವರಿಗೆ ಗಾಯವಾದ ಘಟನೆ ನಡೆದಿದೆ. ದೇವಸ್ಥಾನದ ಮುಂಭಾಗದಲ್ಲಿರುವ ನಾಗನಕಟ್ಟೆಯ ಲ್ಲಿರುವ ಅಶ್ವಥ ಮರ ದೇವಸ್ಥಾನ ದ ಪ್ರವೇಶ ದ್ವಾರಕ್ಕೆ ಉರುಳಿಬಿದ್ದಿದೆ. ಘಟನೆಯಲ್ಲಿ ನಾಲ್ವರಿಗೆ ಗಾಯವಾಗಿದ್ದು ಓರ್ವನ ಸ್ಥಿತಿ ಗಂಭೀರವಾಗಿ ದೆ...
1 1,415 1,416 1,417 1,418 1,419 1,459
Page 1417 of 1459