“ಆತ್ಮಜ್ಞಾನದ ಸಂಪತ್ತು ಆತ್ಯಂತ ಉನ್ನತವಾದ ಸಂಪತ್ತು” ಪ್ರಗತಿ ಸ್ಟಡಿ ಸೆಂಟರ್ನ ನೂತನ ವಿಜ್ಞಾನ ವಿಭಾಗವನ್ನು ಉದ್ಘಾಟಿಸಿ ಒಡಿಯೂರು ಸ್ವಾಮೀಜಿ ಅಭಿಮತ – ಕಹಳೆ ನ್ಯೂಸ್
ಪುತ್ತೂರು: “ವಿಜ್ಞಾನ ಮತ್ತು ಆಧ್ಯಾತ್ಮ ಒಂದಕ್ಕೊಂದು ಪೂರಕವಾಗಿದೆ. ಒಂದರಿಂದ ಅನುಭವವನ್ನು ಪಡೆದರೆ ಇನ್ನೊಂದರಿಂದ ಅನುಭಾವವನ್ನು ಪಡೆಯಬಹುದು. ಸಂಸ್ಕøತಿಯ ಉಳಿವಿಗಾಗಿ ಶಿಕ್ಷಣದ ಜೊತೆಗೆ ಆಧ್ಯಾತ್ಮದ ಪಾಠವನ್ನು ಭೋಧಿಸಬೇಕಾಗಿದೆ. ಆತ್ಮಜ್ಞಾನದ ಸಂಪತ್ತು ಆತ್ಯಂತ ಉನ್ನತವಾದ ಸಂಪತ್ತು ನೈತಿಕ ಪ್ರಜ್ಞೆಯಿರುವ ಶಿಕ್ಷಣ ಎಲ್ಲಿ ಇರುತ್ತದೋ ಅಲ್ಲಿ ಸಂಸ್ಕøತಿ ಬೆಳೆಯುತ್ತದೆ. ಜೀವನದಲ್ಲಿ ಪ್ರಗತಿ ಕಾಣಬೇಕಾದರೆ ಮತಿ ವೃದ್ಧಿಯಾಗಬೇಕು” ಎಂದು ಪೂರ್ಣ ಕುಂಭ ಸ್ವಾಗತದೊಂದಿಗೆ ಆಗಮಿಸಿದ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿ ಆಶೀರ್ವಾದದೊಂದಿಗೆ ಪುತ್ತೂರಿನ ಬೊಳ್ವಾರು...







