Sunday, July 26, 2026

archiveFruit flakes

ಸುದ್ದಿ

ಯು.ಟಿ.ಖಾದರ್ ಹುಟ್ಟುಹಬ್ಬದ ನಿಮಿತ್ತ ಹಣ್ಣು ಹಂಪಲು ವಿತರಣೆ – ಕಹಳೆ ನ್ಯೂಸ್

ಮಂಗಳೂರು: ನಗರಾಭಿವೃದ್ಧಿ ಖಾತೆ ಸಚಿವ ಯು.ಟಿ.ಖಾದರ್ ಅವರ ಹುಟ್ಟುಹಬ್ಬದ ನಿಮಿತ್ತ ಫರಂಗಿಪೇಟೆಯ ಟುಡೇ ಫೌಂಡೇಶನ್ ವತಿಯಿಂದ ಬಂಟ್ವಾಳದ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಫ್. ಉಮರ್ ಫಾರೂಕ್ ಅವರ ನೇತೃತ್ವದಲ್ಲಿ ಟುಡೇ ಫೌಂಡೇಶನ್‌ನ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ರಮ್ಲಾನ್ ಮಾರಿಪಳ್ಳ, ಹಾಸೀರ್ ಪೇರಿಮಾರ್, ಪ್ರವೀಣ್ ತುಂಬೆ, ಮಜೀದ್ ಫರಂಗಿಪೇಟೆ ಮತ್ತಿತ್ತರರು ಉಪಸ್ಥಿತರಿದ್ದರು....