ಕಡಬದಲ್ಲಿ ಅಕ್ರಮ ಗೋಸಾಗಾಟದ ಕಾರು ಡಿಕ್ಕಿಯಾಗಿ ವ್ಯಕ್ತಿ ಮೃತ್ಯು ; ಆರೋಪಿಯನ್ನು ಬಂಧಿಸಿ, ಜಿಲ್ಲೆಯಾದ್ಯಂತ ಅಕ್ರಮ ಗೋವಧೆ ನಡೆಸುತ್ತಿರುವ ಜಿಹಾದಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ, ತಪ್ಪಿದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡದ ವಿಶ್ವ ಹಿಂದೂ ಪರಿಷದ್ ಪ್ರಾಂತ ಗೋರಕ್ಷಾ ಪ್ರಮುಖ್ ಮುರಳಿಕೃಷ್ಣ ಹಸಂತ್ತಡ್ಕ – ಕಹಳೆ ನ್ಯೂಸ್
ಪತ್ರಿಕಾ ಪ್ರಕಟಣೆಗಾಗಿ ಕಡಬ/ ಪುತ್ತೂರು : ನಿರಂತರ ಗೋವಿನ ಕಳ್ಳಸಾಗಾಣಿಕೆ ಮತ್ತು ಆಕ್ರಮ ಕಸಾಯಿಖಾನೆಗಳು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆಯುತ್ತಿರುವುದು ಗಮನಕ್ಕೆ ಬರುತ್ತಿದೆ. ಈ ರೀತಿಯ ಅವಘಡಗಳು,ಅಪಘಾತಗಳು ನಡೆಯುತ್ತಿರುವಂತಹುದು ಇದರ ಬಗ್ಗೆ ಪೋಲಿಸ್ ಇಲಾಖೆ ಸೂಕ್ತ ಕಟ್ಟುನಿಟ್ಟಿನ ಗಮನ ಹರಿಸಿ ಅಕ್ರಮವನ್ನು ತಡೆಗಟ್ಟದಿದ್ದರೆ ಜಿಲ್ಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಇದೇ ರೀತಿ ನಾಕಾಬಂಧಿ ಇದ್ದರೂ ಆಕ್ರಮ ಗೋಸಾಗಾಟ ನಡೆಯುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ತಕ್ಷಣ ಕಡಬದ ಘಟನೆಗೆ ಕಾರಣೀಭೂತರಾದವರನ್ನು ಬಂಧಿಸಿ ಕಠಿಣ ಶಿಕ್ಷೆಗೆ...