ಪುತ್ತೂರಿನ ಮದುವೆ ಬಸ್ ಅಪಘಾತ :-ಸೂಕ್ತ ಪರಿಹಾರ ನೀಡಲು ಗಡಿನಾಡ ಹೋರಾಟ ಸಮಿತಿ ಆಗ್ರಹ-ಕಹಳೆ ನ್ಯೂಸ್
ಸುಳ್ಯ: ಸುಳ್ಯ- ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಪಾಣತ್ತೂರು ಬಳಿಯ ಪರಿಯಾರಂ ಎಂಬಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಜೀವ ಕಳೆದುಕೊಂಡವರ ಕುಟುಂಬಕ್ಕೆ ಮತ್ತು ಗಾಯಗೊಂಡು ಚಿಕಿತ್ಸೆಯಲ್ಲಿ ಇರುವವರಿಗೆ ಕರ್ನಾಟಕ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಗಡಿನಾಡ ಹೋರಾಟ ಸಮಿತಿಯ ಸಂಚಾಲಕ ವಿಪಿನ್ ನಂಬಿಯಾರ್ ಆಗ್ರಹಿಸಿದ್ದಾರೆ. ಪರಿಯಾರಂನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವರಾದ ಏಳು ಮಂದಿಗೆ ಜೀವ ಹಾನಿ ಸಂಭವಿಸಿದ್ದು ಹಲವು ಮಂದಿ ಗಂಭೀರ ಗಾಯಗೊಂಡಿದ್ದಾರೆ. ದಕ್ಷಿಣ ಕನ್ನಡ...







