ಪುತ್ತಿಗೆ ಗ್ರಾಮದ ಕಚಿಬೈಲ್ನಲ್ಲಿ ಕಾರ್ಮಿಕರೊಬ್ಬರು ನೀರಿನಲ್ಲಿ ಬಿದ್ದು ಸಾವು-ಕಹಳೆ ನ್ಯೂಸ್
ಮೂಡುಬಿದ್ರೆ : ಪುತ್ತಿಗೆ ಗ್ರಾಮದ ಕಚಿಬೈಲ್ನಲ್ಲಿ ಕಾರ್ಮಿಕರೊಬ್ಬರು ನೀರಿನಲ್ಲಿ ಬಿದ್ದು ಸಾವನ್ನಪಿದ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಕರುಮುಗೆರು ಮೂಲದ 31ವರ್ಷದ ಸೇಸು ಗೌಡರ ಪುತ್ರ ಪ್ರಕಾಶ್ ಗೌಡ ಎಂದು ಗುರುತಿಸಲಾಗಿದೆ. ಕಾಂಚೈಬೈಲ್ನಲ್ಲಿರುವ ಡಾ.ಪದ್ಮನಾಭ ಉಡುಪ ಅವರ ಮನೆಯಲ್ಲಿ ಮೃತರು ಕೆಲಸ ಮಾಡುತ್ತಿದ್ದು, ಗುರುವಾರ ಮಧ್ಯಾಹ್ನ ಊಟದ ನಂತರ ಕೆಲಸಕ್ಕೆ ತೆರಳಿದವರು ಬಳಿಕ ವೈದ್ಯರ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು. ಮೃತರ ಕುಟುಂಬಸ್ಥರು ಆತನನ್ನು ಹುಡುಕಲು ಪ್ರಾರಂಭಿಸಿ, ಪೊಲೀಸ್ ಠಾಣೆಯಲ್ಲಿ ಕೂಡ...







