Recent Posts

Saturday, April 25, 2026

ಮೂಡಬಿದಿರೆ

ಮೂಡಬಿದಿರೆಸುದ್ದಿ

ತುಳುಕೂಟ ಬೆದ್ರ ಇದರ ವತಿಯಿಂದ ಆಟಿಡೊಂಜಿ ಕೂಟ – ಕಹಳೆ ನ್ಯೂಸ್

ಮೂಡುಬಿದಿರೆ: ತುಳುಕೂಟ ಬೆದ್ರ ಇದರ ವತಿಯಿಂದ ಆಟಿಡೊಂಜಿ ಕೂಟ ಕಾರ್ಯಕ್ರಮವು ಸ್ಕೌಟ್ಸ್- ಗೈಡ್ಸ್ ಕನ್ನಡ ಭವನದ ರತ್ನಾಕರವರ್ಣಿ ಸಭಾಭವನದಲ್ಲಿ ನಡೆಯಿತು. ಉದ್ಯಮಿ ರಾಜೇಂದ್ರ ಕುಮಾರ್‌ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅಕ್ಕಿ ಪವಿತ್ರವಾದುದು ಅದರಲ್ಲಿ ನಮ್ಮ ಬದುಕಿದೆ ಆದರೆ ಮದುವೆ ಸಮಾರಂಭಗಳಲ್ಲಿ ಕೆಲವರು ಚಪ್ಪಲಿ ಹಾಕಿಕೊಂಡು ಅಕ್ಕಿಯನ್ನು ತುಳಿದು ಅಕ್ಷತೆಯನ್ನು ಹಾಕುತ್ತಿದ್ದಾರೆ ಇದರ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಾಗಿದೆ ಹಾಗೂ ವಿಧಾನ ಸಭೆಯಲ್ಲಿ ತುಳುವಿನಲ್ಲಿ ಮಾತನಾಡುವಾಗ ಕನ್ನಡಿಗರು ಲಘುವಾಗಿ ಪರಿಗಣಿಸುತ್ತಾರೆ ಆದ್ದರಿಂದ...
ಮೂಡಬಿದಿರೆಸುದ್ದಿ

ಮಾಂಟ್ರಾಡಿಯಲ್ಲಿ ಸಂಜೀವಿನಿ ಮಾಸಿಕ ಸಂತೆ : ಗೆರಟೆಯಿಂದ ತಯಾರಿಸಿದ ಅಲಂಕಾರಿಕ ವಸ್ತುಗಳ ಉದ್ಘಾಟನೆ – ಕಹಳೆ ನ್ಯೂಸ್

ಮೂಡುಬಿದಿರೆ: ಕೌಶಲ್ಯಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ದ.ಕ. ಮಂಗಳೂರು, ತಾ.ಪಂ.ಮೂಡುಬಿದಿರೆ, ಗ್ರಾ.ಪಂ.ನೆಲ್ಲಿಕಾರು, ಭ್ರಾಮರಿ ಮಹಿಳಾ ಸಂಜೀವಿನಿ ಗ್ರಾ.ಪಂ.ಮಟ್ಟದ ಒಕ್ಕೂಟ ನೆಲ್ಲಿಕಾರು ಇವುಗಳ ವತಿಯಿಂದ ಮಂಗಳವಾರ ಸಂಜೀವಿನಿ ಮಾಸಿಕ ಸಂತೆ ಮತ್ತು ಗೆರಟೆಯಿಂದ ತಯಾರಿಸಿದ ಅಲಂಕಾರಿಕ ವಸ್ತುಗಳ ಉದ್ಘಾಟನೆ ಪಂಚಾಯತ್ ಆವರಣದಲ್ಲಿ ನಡೆಯಿತು. ಪಂಚಾಯತ್ ಉಪಾಧ್ಯಕ್ಷ ಶಶಿಧರ್ ಎಂ.ಉದ್ಘಾಟಿಸಿ ಮಾತನಾಡಿ ಸರಕಾರಗಳು ಮಹಿಳೆಯರ ಸಬಲೀಕರಣಕ್ಕಾಗಿ ಅವರಿಗೆ ತರಬೇತಿ ಮತ್ತು ಆರ್ಥಿಕ...
ಕೃಷಿಮೂಡಬಿದಿರೆಸುದ್ದಿ

ಕಡಂದಲೆ ಹೈಸ್ಕೂಲು ಪರಿಸರದಲ್ಲಿ ವನ ಮಹೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ಮೂಡುಬಿದಿರೆ : ಮುಂಡ್ಕೂರು-ಕಡoದಲೆ ಲಯನ್ಸ್ ಕ್ಲಬ್, ದ.ಕ. ಹಾಲು ಒಕ್ಕೂಟ, ಮುಂಡ್ಕೂರು ಭಾರ್ಗವ ಜೇಸೀಸ್, ಅರಣ್ಯ ಇಲಾಖೆ, ಗ್ರಾಮ ಆರಣ್ಯ ಸಮಿತಿ ಹಾಗೂ ಪಾಲಡ್ಕ ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ಕಡಂದಲೆ ಹೈಸ್ಕೂಲು ಪರಿಸರದಲ್ಲಿ ವನ ಮಹೋತ್ಸವ ಕಾರ್ಯಕ್ರಮ ನಡೆದಿದೆ. ದ.ಕ. ಹಾಲು ಒಕ್ಕೂಟದ ಮಾರುಕಟ್ಟೆ ಅಧಿಕಾರಿ ಡಾ. ರವಿರಾಜ ಉಡುಪ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿಶ್ವದೆಲ್ಲೆಡೆ ತಾಪಮಾನ ಏರಿಕೆಗೆ ಕಾಡು ನಾಶವಾಗುತ್ತಿರುವುದೇ ಮೂಲ ಕಾರಣ. ಇದನ್ನು ಹೋಗಲಾಡಿಸಿ ಶುದ್ಧ ಗಾಳಿ,...
ಮೂಡಬಿದಿರೆಸುದ್ದಿ

ನೀರ್ಕೆರೆಯಲ್ಲಿ ಮಂಗಳೂರು ಕೆಎಂಸಿ ಆಸ್ಪತ್ರೆಯವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ – ಕಹಳೆ ನ್ಯೂಸ್

ಮೂಡುಬಿದಿರೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೀರ್ಕೆರೆಯಲ್ಲಿ ಲಯನ್ಸ್ ಹಾಗೂ ಲಿಯೋ ಕ್ಲಬ್ ಮುಚ್ಚೂರು - ನೀರುಡೆ, ಗ್ರಾಮ ಪಂಚಾಯತ್ ತೆಂಕಮಿಜಾರು ನೀರ್ಕೆರೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೀರ್ಕೆರೆ, ಹಾಗೂ ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೈದ್ಯರಾದ ಡಾ.ನಾರಾಯಣ ಪೈ ಗ್ರಾಮೀಣ ಭಾಗದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು ಸಂತಸದ ವಿಷಯ, ಇಂತಹ...
ಮೂಡಬಿದಿರೆಸುದ್ದಿ

ಬೆಳುವಾಯಿ ಕರಿಯನಂಗಡಿ ನಿವಾಸಿ ಗೋಪಾಲ್ ನಾಯ್ಕ್ ನಾಪತ್ತೆ – ಕಹಳೆ ನ್ಯೂಸ್

ಮೂಡುಬಿದಿರೆ: ಬೆಳುವಾಯಿ ಕರಿಯನಂಗಡಿ ನಿವಾಸಿ ಗೋಪಾಲ್ ನಾಯ್ಕ್ (30ವ) ಜು 2 ರಂದು ಕ್ರಿಕೆಟ್ ಆಡಿ ತಾಯಿ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ಮರಳಿ ಮನೆಗೆ ಬಂದಿಲ್ಲ ಎಂದು ಅವರ ಪತ್ನಿ ದೀಕ್ಷಿತಾ ಮೂಡುಬಿದಿರೆ ಪೋಲಿಸರಿಗೆ ದೂರು ನೀಡಿದ್ದಾರೆ. ತಮ್ಮನ ಬೈಕ್ ನಲ್ಲಿ ತೆರಳಿ ಬೆಳುವಾಯಿಗೆ ಡ್ರಾಪ್ ಪಡೆದ ಅವರನ್ನು ನಂತರ ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಸಂಬಂಧಿಕರಲ್ಲಿ ಮತ್ತು ಗೆಳೆಯರಲ್ಲಿ ವಿಚಾರಿಸಿದ್ದರೂ ಸುಳಿವು ದೊರೆತ್ತಿಲ್ಲ ಎಂದು...
ಕೃಷಿಮೂಡಬಿದಿರೆಸುದ್ದಿ

ಪುತ್ತಿಗೆ ಗುತ್ತು ಕಡಂದಲೆ ಪರಾರಿ : ಸಾಂಪ್ರದಾಯಿಕ ನಾಟಿ ಕಾರ್ಯಕ್ರಮಕ್ಕೆ ಚಾಲನೆ – ಕಹಳೆ ನ್ಯೂಸ್

ಕಡಂದಲೆ: ಪುತ್ತಿಗೆ ಗುತ್ತು ಕಡಂದಲೆ ಪರಾರಿ ಶ್ರೀ ಧೂಮಾವತಿ ದೈವದ ಜೋಡು ಪೂಕರೆ ಎಳೆಯುವ ಕಂಬಳದ ಗದ್ದೆಯ ಸಾಂಪ್ರದಾಯಿಕ ಏಣೀಲು ಸಾಗುವಳಿ ಕಾರ್ಯಕ್ರಮವು ನಾಟಿ ಮಾಡುವ ಮೂಲಕ ಜು. ೪ರಂದು ಸಂಪ್ರದಾಯದoತೆ ಪೂಜೆ ಪುರಸ್ಕಾರದಿಂದಿಗೆ ನೆರವೇರಿಸಲಾಯಿತು. ಪುತ್ತಿಗೆ ಗುತ್ತು ಕಡಂದಲೆ ಪರಾರಿ ಕೆ.ಪಿ. ಸಂತೋಷ್ ಕುಮಾರ್ ಶೆಟ್ಟಿಯವರು ಈ ಗದ್ದೆಯಲ್ಲಿ ವರ್ಷಂಪ್ರತಿ ಎರಡು ಬೇಸಾಯ ಮಾಡುತ್ತಾ ಪರಂಪರೆಯ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಪುತ್ತಿಗೆ ಗುತ್ತು ಕಡಂದಲೆ...
ಮೂಡಬಿದಿರೆಸುದ್ದಿ

ಪತ್ರಿಕಾ ದಿನಾಚರಣೆ ; ನವ್ಯವಾಣಿ ಸಂಪಾದಕ ಪಾರ್ಶ್ವನಾಥರಿಗೆ  ಸನ್ಮಾನ – ಕಹಳೆ ನ್ಯೂಸ್

ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದಿರೆ ಪ್ರೆಸ್ ಕ್ಲಬ್(ರಿ.) ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಶನಿವಾರ ಸಮಾಜ ಮಾಧ್ಯಮ ಹಬ್ಬ ನಡೆಯಿತು. ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಯಶೋಧರ ವಿ.ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಉಮಾನಾಥ ಕೋಟ್ಯಾನ್ ಅವರು ಉದ್ಘಾಟಿಸಿ ಮಾತನಾಡಿ ಸಮಾಜದ ಅಂಕುಡೊಂಕು ತಿದ್ದುವ, ಸಮರ್ಥವಾಗಿ ಜನರಿಗೆ ಮಾಹಿತಿ ನೀಡುವ ಕೆಲಸ ಪತ್ರಕರ್ತರು ಮಾಡಬೇಕಾಗಿದೆ ಎಂದರು. ವಿಶ್ರಾಂತ ಪತ್ರಕರ್ತ ಸದಾನಂದ ಹೆಗಡೆಕಟ್ಟೆ ಅವರು ರಜತ...
ದಕ್ಷಿಣ ಕನ್ನಡಮೂಡಬಿದಿರೆಸುದ್ದಿಹೆಚ್ಚಿನ ಸುದ್ದಿ

ಮೂಡುಬಿದಿರೆ: ಅಕ್ರಮ ಗೋ ಸಾಗಾಟ ತಡೆಗಟ್ಟುವಂತೆ ಹಿಂ.ಜಾ.ವೇ ವತಿಯಿಂದ ಪೊಲೀಸ್ ನಿರೀಕ್ಷಣಾಧಿಕಾರಿಗೆ ಮನವಿ – ಕಹಳೆ ನ್ಯೂಸ್

ಮೂಡುಬಿದಿರೆ: ಕರ್ನಾಟಕದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020 ಹಾಗೂ ಕರ್ನಾಟಕ ಪ್ರಾಣಿ ಬಲಿ ನಿಷೇಧ 1959 (ತಿದ್ದುಪಡಿ 1975) ಇದು ಜಾರಿಯಲ್ಲಿದ್ದು ಅದರ ಪ್ರಕಾರ ಯಾವುದೇ ಗೋವುಗಳ ಬಲಿ, ಕುರ್ಬಾನಿ ಹತ್ಯೆ ಮಾಡುವುದನ್ನು ನಿಷೇಧಿಸಲಾಗಿದೆ. ಇದೇ ಜೂನ್ 29, 30, ಜುಲೈ 1 ರಂದು ಕುರ್ಬಾನಿಯ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ಮತ್ತು ಇತರೆ ದಿನಗಳಲ್ಲಿ ಯಾವುದೇ ರೀತಿಯ ಗೋವಂಶ ವಧೆ,ಬಲಿ,ಕುರ್ಬಾನಿ ಹತ್ಯೆ ಹಾಗೂ ಅಕ್ರಮ...
1 15 16 17 18 19 28
Page 17 of 28