ಕುಂದಾಪುರ :ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದ ಉಡುಪಿ ಜಿಲ್ಲಾ ಘಟಕದ ಪುನರ್ ರಚನೆ ಉದ್ಘಾಟನೆ, ವಿದ್ಯಾರ್ಥಿ ವೇತನ, ಸದಸ್ಯತ್ವ ಅಭಿಯಾನ-ಕಹಳೆ ನ್ಯೂಸ್
ಕುಂದಾಪುರ: ಹೋಟೆಲ್ ಕಾರ್ಮಿಕರು ಅನೇಕ ರೀತಿಯ ಎಡುರು ತೊಡರುಗಳನ್ನು ಎದುರಿಸುತ್ತಿದ್ದು, ಹೋಟೆಲ್ ಮಾಲೀಕರು ನೀಡಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಅಭಿವೃದ್ಧಿ ಹೊಂದಬೇಕಿದೆ. ನಮಗೆ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸಿ ನ್ಯಾಯ ದೊರೆಯುವಂತಾಗಬೇಕಾದರೆ ಸಂಘಟನೆ ಅವಶ್ಯಕ. ಸಂಘಟನೆ ಇಲ್ಲದಿದ್ದರೆ ಶಕ್ತಿ ಇರುವುದಿಲ್ಲ. ಕಾರ್ಮಿಕರ ಜೀವನವನ್ನು ಯೋಗ್ಯವಾಗಿ ಯಶಸ್ವಿಯಾಗಿ ನಡೆಸಲು ಅವಕಾಶ ನೀಡಬೇಕಾದುದು ಹೋಟೆಲ್ ಮಾಲೀಕರ ಜವಾಬ್ದಾರಿ. ಹೋಟೆಲ್ ಮಾಲೀಕರು ತಮ್ಮ ಉದ್ಯಮದಲ್ಲಿ ಯಶಸ್ಸು ಸಾಧಿಸುವಲ್ಲಿ ಕಾರ್ಮಿಕರ ಕೊಡುಗೆ ಅಮೂಲ್ಯವಾದುದು ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ...







