ಬಂಟ್ವಾಳದ ಮಿನಿವಿಧಾನಸೌಧಕ್ಕೆ ನಾಗದೋಷ; ಜನಪ್ರತಿನಿಧಿಗಳಿಂದ ನಡೆಯಿತು ವಿಶೇಷ ಪೂಜೆ ಪುನಸ್ಕಾರ-ಕಹಳೆ ನ್ಯೂಸ್
ಬಂಟ್ವಾಳ : ವ್ಯಕ್ತಿಯ ಜಾತಕದಲ್ಲಿ ನಾಗದೋಷ ಇದೆ ಎಂದು ಪೂಜೆ ಪುನಸ್ಕಾರ ಮಾಡಿಸುವುದು ಸಾಮಾನ್ಯ. ಆದರೆ, ಇಲ್ಲಿನ ಸರ್ಕಾರಿ ಕಟ್ಟಡಕ್ಕೆ ನಾಗದೋಷ ಇದೆ ಎಂದು ಜನಪ್ರತಿನಿಧಿಗಳು ಸೇರಿ ವಿಶೇಷ ಹೋಮ ಮಾಡಿಸಿರುವ ಘಟನೆ ನಡೆದಿದೆ. ನಗರದ ಬಿಸಿ ರೋಡ್ನಲ್ಲಿರುವ ಈ ಆಡಳಿತ ಕಚೇರಿ ಕಟ್ಟಿ ಇನ್ನು ಮೂರು ವರ್ಷವಾಗಿದೆ. ಆದರೆ, ಈ ಕಚೇರಿಗೆ ಬರುವ ಅಧಿಕಾರಿಗಳು, ಜನಪ್ರತಿನಿಧಿಗಳು ಒಂದಿಲ್ಲೊಂದು ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದರಂತೆ. ಅಲ್ಲದೇ ಕೆಲ ಅಧಿಕಾರಿಗಳು ಅಕಾಲಿಕ ಮರಣಕ್ಕೂ...







